ಬುಧವಾರ, ಏಪ್ರಿಲ್ 27, 2011

ನನ್ನ `ನೆನಪುಗಳಿಗೇಕೆ ಸಾವಿಲ್ಲ?' (ಕಥಾ ಸಂಕಲನ) ಮತ್ತು `ಮಳೆಬಿಲ್ಲ ನೆರಳು' (ವಿಜ್ಞಾನ ಲೇಖನಗಳ ಸಂಕಲನ) ಕೃತಿಗಳ ಲೋಕಾರ್ಪಣೆ

ನನ್ನ `ನೆನಪುಗಳಿಗೇಕೆ ಸಾವಿಲ್ಲ?' (ಕಥಾ ಸಂಕಲನ) ಮತ್ತು `ಮಳೆಬಿಲ್ಲ ನೆರಳು' (ವಿಜ್ಞಾನ ಲೇಖನಗಳ ಸಂಕಲನ) ಕೃತಿಗಳ ಬಿಡುಗಡೆ 26/04/2011ರಂದು ಕನ್ನಡ ಭವನದ `ನಯನ' ಸಭಾಂಗಣದಲ್ಲಿದಲ್ಲಿ ನಡೆಯಿತು. ಬರಹ ಪಬ್ಲಿಷಿಂಗ್ ಹೌಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಜಿ ರಾಮಕೃಷ್ಣ ಕೃತಿಗಳ ಲೋಕಾರ್ಪಣೆ ಮಾಡಿದರು. `ನೆನಪುಗಳಿಗೇಕೆ ಸಾವಿಲ್ಲ?' ಕಥಾ ಸಂಕಲನವನ್ನು ಡಾ.ಕೆ ವೈ ನಾರಾಯಣ ಸ್ವಾಮಿ ಪರಿಚಯಿಸಿದರು ಹಾಗೂ `ಮಳೆಬಿಲ್ಲ ನೆರಳು' ವಿಜ್ಞಾನ ಲೇಖನಗಳ ಸಂಕಲನವನ್ನು ಮಂಜುನಾಥ ಅದ್ದೆ ಪರಿಚಯಿಸಿದರು. ಪ್ರಕಾಶಕರಾದ ಡಾ. ಎಂ ಬೈರೇಗೌಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಾನು ರಚಿಸಿದ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿತ್ತು.

ಚಿತ್ರ ಕೃಪೆ: ಶಿವಪ್ರಸಾದ್, http://avadhimag.com/?p=33264






ಕಾಮೆಂಟ್‌ಗಳಿಲ್ಲ: