Tuesday, February 08, 2011

ನನ್ನ ಹೊಸ ಪುಸ್ತಕ- `ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ'


ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ನನ್ನ `ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ' ಎಂಬ ಕೃತಿಯನ್ನು ಪ್ರಕಟಿಸಿದೆ. ಅದರ ಕಿರು ಪರಿಚಯ ಈ ಮುಂದಿನಂತಿದೆ:
`ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ' ಒಂದು ಅಪೂರ್ವ ಮಾಹಿತಿಗಳನ್ನು ಒಳಗೊಂಡ ಕಿರುಪುಸ್ತಕ. ಕೃಷಿಗೆ ಸಂಬಂಧಿಸಿದಂತೆ ಪಾರಂಪರಿಕವಾದ ಜ್ಞಾನ ಮಾತ್ರವಿದ್ದು ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬರಲಾಗಿದೆ. ಹಿಂದೆ ಕೃಷಿಯು ಜೀವಕ್ಕೆ ಅನಿವಾರ್ಯವಾದ ಆಹಾರವನ್ನು ಉತ್ಪಾದಿಸುವ ಒಂದು ಕೆಲಸ ಎಂಬ ಭಾವನೆ ಮಾತ್ರ ಇತ್ತು. ಇಂದು ಕೃಷಿ ಲಾಭ ತಂದುಕೊಡುವ ಒಂದು ವ್ಯವಹಾರವೇ ಆಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ವಿಜ್ಞಾನದ ಬೆಳವಣಿಗೆಯ ಮೂಲಕ ಕೃಷಿಯು ಸಾಗುವಳಿ ಪದ್ಧತಿಯಲ್ಲಿ ಸುಧಾರಣೆ ಹಾಗೂ ಇಳುವರಿಯಲ್ಲಿನ ಹೆಚ್ಚಳ ಇವೆಲ್ಲದರ ಮೂಲಕ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಪಾರಂಪರಿಕ ಕೃಷಿ ಪದ್ಧತಿಯಿಂದ ಆಧುನಿಕ ವಾಣಿಜ್ಯ ವ್ಯವಸಾಯ ಪದ್ಧತಿಗಳವರೆಗಿನ ಬೆಳವಣಿಗೆಯಲ್ಲಿ ಕೃಷಿವಿಜ್ಞಾನ ಕ್ಷೇತ್ರದಲ್ಲಿ ದುಡಿದ ವ್ಯಕ್ತಿಗಳ, ಸಂಘಸಂಸ್ಥೆಗಳ ಚಿಂತನೆಗಳು ಮಿಳಿತವಾಗಿವೆ. ಹೀಗೆ ಕೃಷಿ ಅಭಿವೃದ್ಧಿಯ ಕುರಿತ ಚಿಂತನೆಗಳು ಕೃಷಿವಿಜ್ಞಾನ ಎಂಬ ಹೊಸ ಜ್ಞಾನಶಾಖೆಯನ್ನು ರೂಪಿಸಿವೆ. ಈ ಜ್ಞಾನದ ವಿವರಣೆಗಳ ಸಾಹಿತ್ಯದ ಸ್ವರೂಪವನ್ನು ಈ ಕೃತಿ ಸ್ಥೂಲವಾಗಿ ವಿವರಿಸಿದೆ. ಜೆ.ಬಾಲಕೃಷ್ಣ ಅವರು ಮೂಲತಃ ವಿಜ್ಞಾನ ಲೇಖಕರಾಗಿರುವುದರಿಂದ ಅವರ ಅಧ್ಯಯನದ ಅಗಾಧತೆಯು ಈ ಕೃತಿಯಲ್ಲಿ ಅನಾವರಣಗೊಂಡಿದೆ.
-ಡಾ.ಎ.ಮುರಿಗೆಪ್ಪ
ಕುಲಪತಿ

2 comments:

Anonymous said...

Shubhashayagalu sir. Please give your mail id.

Regards,
raaghavam@gmail.com

narayanaswamy said...

ಇಂದಿನ ಕೃಷಿ ಮಾರುಕಟ್ಟೆ ನೀತಿಯು ರೈತ ಇನ್ನಷ್ಟು ವಿಮುಖನನ್ನಾಗಿಸುತ್ತಿದೆಯೇ ಹೊರತು ವೈಜ್ಞಾನಿಕ ಸುಧಾರಣೆಗಳು ಅವನಿಗ ಆರ್ಥಿಕ ಸಬಲತೆಯನ್ನು ತಂದುಕೊಡಬೇಕಾದುದು ಸಮಾಜದ ಉನ್ನತಿಗೆ ಪೂರಕ.
ಸಾರ್, ನಿಮ್ಮ ಕೃತಿ ಈ ನಿಟ್ಟಿನಲ್ಲಿ ರೈತರಿಗೆ ಸಹಕರವಾದರೆ ಅದಕ್ಕಿಂತಲೂ ದೊಡ್ಡ ಪ್ರಯತ್ನ ಇನ್ನೇನಿದೆ.
**ಅಭಿನಂದನೆಗಳು ಸಾರ್**

-ಮಂಜು