ಗುರುವಾರ, ಅಕ್ಟೋಬರ್ 02, 2008

ಪರಿಸರ ಸಂರಕ್ಷಣೆ ಸಂದೇಶಗಳು


ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ (ವಿಶ್ವ ವನ್ಯಜೀವಿ ಸಪ್ತಾಹ) ಎಂದಿನಂತೆ ನಾನು ಎದುರು ನೋಡುವ ವಿರಾಜಪೇಟೆಯ ಮಿತ್ರ ಡಾ.ಎಸ್.ವಿ.ನರಸಿಂಹನ್ರವರ ಸುಂದರ ವನ್ಯಜೀವಿ ಸಂದೇಶಗಳ ಕಾರ್ಡುಗಳು ಈ ವರ್ಷವೂ ತಮ್ಮ ಸಂದೇಶ ಹೊತ್ತು ಬಂದವು. ಡಾ. ನರಸಿಂಹನ್ರವರ ಬಗ್ಗೆ ಈಗಾಗಲೇ ಈ ಬ್ಲಾಗ್ ನಲ್ಲಿ ಬರೆದಿದ್ದೇನೆ: http://antaragange.blogspot.com/2007/02/blog-post_18.html


ಕಳೆದ 24 ವರ್ಷಗಳಿಂದ 50,000ಕ್ಕೂ ಹೆಚ್ಚು ವನ್ಯಜೀವಿ ಸಂದೇಶದ ಕಾರ್ಡುಗಳನ್ನು ಕೈಯಲ್ಲೇ ಚಿತ್ರಿಸಿ ಸುಮಾರು 7000 ಮಂದಿಗೆ ಅವುಗಳನ್ನು ಹಂಚಿದ್ದಾರೆ. ವರ್ಷ ಅವರು ಕೈಯಲ್ಲೇ ಚಿತ್ರಿಸಿರುವ ಕಾರ್ಡುಗಳ ಸಂಖ್ಯೆ 2490; ಕಳೆದ 24 ವರ್ಷಗಳಲ್ಲಿ 50,040. ಕಾರ್ಡುಗಳನ್ನು ಪಡೆದವರು ವರ್ಷ 1230 ಹಾಗೂ ಕಳೆದ 24 ವರ್ಷಗಳಲ್ಲಿ 7110. ಪರಿಸರದ ಬಗೆಗಿರುವ ಅವರ ಕಾಳಜಿ ಶ್ಲಾಘನೀಯ.

ಕೊಡಗಿನ 310 ಪಕ್ಷಿ ಪ್ರಭೇದಗಳ ಸಚಿತ್ರ ವಿವರಣೆ ಮತ್ತು ಮಾಹಿತಿಯುಳ್ಳ ಅವರು ಬರೆದಿರುವ ಕೊಡಗಿನ ಖಗರತ್ನಗಳು ಕೃತಿ ಈಗಾಗಲೇ ಎರಡನೇ ಆವೃತ್ತಿ ಕಂಡಿದೆ. ಅದ್ಭುತ ಪುಸ್ತಕ! ಪ್ರತಿಗಳಿಗೆ ಲೇಖಕರನ್ನು ಸಂಪರ್ಕಿಸಿ: drnsimhan@yahoo.com