ಬುಧವಾರ, ಜನವರಿ 21, 2015

ಮುಲ್ಲಾ ನಸ್ರುದ್ದೀನ್ ಕತೆಗಳ 34ನೇ ಕಂತು

`ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 34ನೇ ಕಂತು



ನಂಬಿಕೆ
ಮುಲ್ಲಾ ನಸ್ರುದ್ದೀನ್ ಮತ್ತು ಅವನ ಗೆಳೆಯ ಅಬ್ದುಲ್ಲಾ ಜೂಜಾಡಲು ಹೊರಟರು. ಮುಲ್ಲಾನ ಕುತ್ತಿಗೆಯಲ್ಲಿ ತಾಯತವೊಂದಿರುವುದನ್ನು ಅಬ್ದುಲ್ಲಾ ಕಂಡ.
`ಮುಲ್ಲಾ ನಿನಗೆ ಮೂಢನಂಬಿಕೆಯಲ್ಲಿ ವಿಶ್ವಾಸವಿಲ್ಲ ಅಲ್ಲವೆ?’ ಕೇಳಿದ ಅಬ್ದುಲ್ಲಾ.
`ಹೌದು, ನನಗೆ ಅಂತಹ ಅಂಧಶ್ರದ್ಧೆಯಲ್ಲಿ ಖಡಾಖಂಡಿತವಾಗಿ ನಂಬಿಕೆಯಿಲ್ಲಹೇಳಿದ ಮುಲ್ಲಾ.
`ಹಾಗಿದ್ದರೆ ನಿನ್ನ ಕುತ್ತಿಗೆಯಲ್ಲಿ ತಾಯತವಿದೆಯೆಲ್ಲಾ ಏಕೆ?’
`ಹೋ ಅದೇ! ನನ್ನ ಹೆಂಡತಿ ಅದನ್ನು ಕಟ್ಟಿದ್ದಾಳೆ. ಅವಳು ಹೇಳಿದ್ದಾಳೆ ನಂಬಿಕೆ ಇರಲಿ, ಇಲ್ಲದಿರಲಿ ಅದು ಅದೃಷ್ಟ ತರುತ್ತದಂತೆ!’  ಹೇಳಿದ ನಸ್ರುದ್ದೀನ್.

ದೀರ್ಘಾಯುಷ್ಯದ ರಹಸ್ಯ
ಮುಲ್ಲಾ ನಸ್ರುದ್ದೀನನಿಗೆ 105 ವರ್ಷಗಳಾಗಿತ್ತು. ಅವನ ಮಕ್ಕಳು ಮತ್ತು ಮೊಮ್ಮಕ್ಕಳು ಅವನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಮನೆಗೆ ಬಂದ ಅತಿಥಿಗಳಲ್ಲಿ ಕೆಲವರು ಮಾತನಾಡಿಕೊಳ್ಳುತ್ತಿದ್ದರು.
`ಮುಲ್ಲಾನ ದೀರ್ಘಾಯುಷ್ಯದ ರಹಸ್ಯ ಏನಿರಬಹುದು?’ ಒಬ್ಬಾತ ಮತ್ತೊಬ್ಬಾತನನ್ನು ಕೇಳಿದ.
`ಅವನೊಬ್ಬ ಸೋಮಾರಿ. ಇಷ್ಟು ವರ್ಷ ಅವನು ಬದುಕುವುದು ಬಿಟ್ಟು ಬೇರೇನು ಕೆಲಸವನ್ನೂ ಮಾಡಿಲ್ಲಹೇಳಿದ ಮತ್ತೊಬ್ಬಾತ.

ಖಂಡಿತಾ ಮಾಡುತ್ತೇನೆ
ಮುಲ್ಲಾ ನಸ್ರುದ್ದೀನನಿಗೆ 105 ವರ್ಷಗಳಾಗಿತ್ತು. ಅವನ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಬ್ಬ ಪತ್ರಿಕಾ ವರದಿಗಾರ ಬಂದಿದ್ದ.
`ಮುಲ್ಲಾ ನಿಮ್ಮ ಬದುಕಲ್ಲಿ ನೀವು ಹಲವಾರು ತಪ್ಪುಗಳನ್ನು ಮಾಡಿದ್ದೀರಿ. ನಿಮಗೆ ಅವುಗಳ ಬಗ್ಗೆ ಪಶ್ಚಾತ್ತಾಪವಿರಬೇಕಲ್ಲವೆ? ನೀವು ಮತ್ತೊಮ್ಮೆ ಹುಟ್ಟುವಿರಾದಲ್ಲಿ ನಿಮ್ಮ ತಪ್ಪುಗಳ ಅನುಭವದಿಂದ ನೀವು ತಪ್ಪುಗಳನ್ನು ಮತ್ತೊಮ್ಮೆ ಮಾಡುವುದಿಲ್ಲ ಅಲ್ಲವೆ?’ ಎಂದು ಕೇಳಿದ ವರದಿಗಾರ.
`ಖಂಡಿತಾ ಮಾಡುತ್ತೇನೆ!’ ಹೇಳಿದ ಮುಲ್ಲಾ, ` ಸಾರಿ ಅವುಗಳನ್ನು ಆದಷ್ಟು ಬೇಗ ಮಾಡುತ್ತೇನೆ.’

ವಿಪರೀತ ಚಳಿ
ಅಜ್ಜ ಮುಲ್ಲಾ ನಸ್ರುದ್ದೀನ್ ಚಳಿಗೆ ನಡುಗುತ್ತಾ ಮಲಗಿದ್ದ.
` ವರ್ಷ ವಿಪರೀತ ಚಳಿ ಇದೆಯಲ್ಲವೆ?’ ತನ್ನ ಪತ್ನಿ ಫಾತೀಮಾಳನ್ನು ಕೇಳಿದ.
`ಏನಿಲ್ಲಾ, ನಿನಗೆ ಹಾಗನ್ನಿಸುತ್ತಿದೆ ಅಷ್ಟೆಹೇಳಿದಳು ಫಾತಿಮಾ.
`ಇಲ್ಲ, ಚಳಿ ಜಾಸ್ತಿಯಿದೆ. ಬೇಕಾದರೆ ಅಲ್ಲಿ ನೋಡು, ಮೇಜಿನ ಮೇಲಿನ ನನ್ನ ಹಲ್ಲಿನ ಸೆಟ್ಟೂ ಸಹ ಚಳಿಗೆ ಹಲ್ಲು ಕಡಿಯುತ್ತಿದೆ.’


ನನಗೂ ತಿಳಿಸಿ
ಮುಲ್ಲಾ ನಸ್ರುದ್ದೀನನ ಪತ್ನಿ ತನ್ನ ಮಗನನ್ನು ಶಾಲೆಯಿಂದ ಕರೆದುಕೊಂಡ ಬರಲು ಹೋದಾಗ, ಮಗನ ಟೀಚರ್ ಆಕೆಯನ್ನು ತನ್ನ ಕೋಣೆಗೆ ಕರೆದು,
`ನಿಮ್ಮ ಮಗ ಓದಿನಲ್ಲಿ ಹೆಚ್ಚು ಗಮನ ಹರಿಸುತ್ತಿಲ್ಲ, ಯಾವಾಗಲೂ ಹುಡುಗಿಯರ ಜೊತೆ ಆಟವಾಡುತ್ತಿರುತ್ತಾನೆ. ಆದರೆ ಅದರ ಬಗ್ಗೆ ಚಿಂತಿಸಬೇಡಿ. ಅವನನ್ನು ನಾನು ಸರಿಯಾದ ದಾರಿಗೆ ತರುತ್ತೇನೆಎಂದರು.
`ಹೌದೆ? ಅವನನ್ನು ಸರಿಯಾದ ದಾರಿಗೆ ತಂದ ಮೇಲೆ ವಿಧಾನವನ್ನು ನನಗೂ ತಿಳಿಸಿ. ಅವನ ಅಪ್ಪನನ್ನು ಅದೇ ಅಭ್ಯಾಸದಿಂದ ಸರಿಯಾದ ದಾರಿಗೆ ತರಲು ನಾನು ಹದಿನೈದು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆಎಂದಳು ತಾಯಿ.

ತಪ್ಪು ಒಬ್ಬನದೆ?
ಮುಲ್ಲಾ ನಸ್ರುದ್ದೀನನ ಮಗನ ಶಾಲೆಯಲ್ಲಿ ಅವನ ಟೀಚರ್ ಹೋಂವರ್ಕ್ ಪರೀಕ್ಷಿಸುತ್ತಿದ್ದರು. ಅವನನ್ನು ಕರೆದು,
`ನೋಡಿಲ್ಲಿ, ಇಷ್ಟು ಜನ ವಿದ್ಯಾರ್ಥಿಗಳಲ್ಲಿ ತಪ್ಪು ಮಾಡಿರುವವನು ನೀನೊಬ್ಬನೇ!’ ಎಂದು ಹೇಳಿ ಗದರಿಸಿದರು.
`ತಪ್ಪು ನನ್ನೊಬ್ಬನದೇ ಅಲ್ಲ ಟೀಚರ್, ಅದಕ್ಕೆ ನಮ್ಮ ತಂದೆಯೂ ಸಹಾಯ ಮಾಡಿದ್ದಾರೆಹೇಳಿದ ನಸ್ರುದ್ದೀನನ ಮಗ.
ಮಕ್ಕಳ ಉಪಕಾರ
ಅಬ್ದುಲ್ಲಾ ತನ್ನ ಗೆಳೆಯ ಮುಲ್ಲಾ ನಸ್ರುದ್ದೀನನಿಗೆ ಹೇಳಿದ,
`ನನ್ನ ಹೆಂಡತಿ ಮೊದಲು ಬಹಳಷ್ಟು ಹಾಡುತ್ತಿದ್ದಳು. ಈಗ ಮಕ್ಕಳು ಹುಟ್ಟಿದ ನಂತರ ಅವಳಿಗೆ ಹಾಡಲು ಸಮಯವೇ ಇರುವುದಿಲ್ಲ `ಮಕ್ಕಳಿಂದಲೂ ಎಂತಹ ಉಪಕಾರವಾಗುತ್ತದಲ್ಲವೆ?’ ಹೇಳಿದ ಮುಲ್ಲಾ.

ಅಪಘಾತ
ಮುಲ್ಲಾ ನಸ್ರುದ್ದೀನ್ ಹೊಸ ವಾಹನವೊಂದನ್ನು ಕೊಂಡ. ಒಂದು ದಿನ ವಾಹನಚಾಲನೆ ಮಾಡುತ್ತಿರುವಾಗ ಪಕ್ಕದ ಮೋರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ. ಅಲ್ಲಿಗೆ ಬಂದ ಪೋಲೀಸ್ ಅದನ್ನು ನೋಡಿ,
`ಏನಿದು? ಹೇಗಾಯಿತು ಅಪಘಾತ?’ ಎಂದು ಕೇಳಿದ.
`ನನಗೇನು ಗೊತ್ತು ಸ್ವಾಮಿ ಹೇಗಾಯಿತೋ? ನಾನು ನಿದ್ದೆ ಮಾಡುತ್ತಿದ್ದೆಎಂದ ನಸ್ರುದ್ದೀನ್.

ಅಪಘಾತ ವಲಯ
ಮುಲ್ಲಾ ನಸ್ರುದ್ದೀನ್ ತನ್ನ ವಾಹನ ಚಾಲಿಸುತ್ತಿದ್ದ. ರಸ್ತೆಯಲ್ಲಿ `ಅಪಘಾತ ವಲಯ. ಎಚ್ಚರಿಕೆಯಿಂದ ವಾಹನ ಚಾಲಿಸಿಎಂದು ಬರೆದಿತ್ತು.
` ಇಂಜಿನಿಯರುಗಳಿಗೆ ಬುದ್ಧಿಯೇ ಇಲ್ಲ. ಅದ್ಯಾಕೆ ಅಪಘಾತ ವಲಯಗಳಲ್ಲಿ ರಸ್ತೆ ನಿರ್ಮಿಸುತ್ತಾರೋ!’ ಎಂದು ಗೊಣಗಿಕೊಂಡ.

ಅಲ್ಲಾಡುವ ಮನೆ
ಮುಲ್ಲಾ ನಸ್ರುದ್ದೀನ್ ಅವನ ಗೆಳೆಯ ಅಬ್ದುಲ್ಲಾ ಇಬ್ಬರೂ ಒಂದು ದಿನ ಸಂಜೆ ಗಡಂಗಿನಲ್ಲಿ ಕೂತು ಮೈಮರೆಯುವಷ್ಟು ಕುಡಿದರು. ಸಮಯ ಹೋಗಿದ್ದೇ ತಿಳಿಯಲಿಲ್ಲ. ರಾತ್ರಿ ನಿಧಾನವಾಗಿ ಎದ್ದು ಮನೆಯ ಕಡೆ ಹೊರಟರು. ಮುಲ್ಲಾ ಕಿಸೆಯಿಂದ ಕೀಲಿ ತೆಗೆದು ಬೀಗ ತೆಗೆಯಲು ಹೊರಟ. ಅವನ ಇಡೀ ಮೈ ಓಲಾಡುತ್ತಿದ್ದುದರಿಂದ ಬೀಗದಲ್ಲಿ ಕೀಲಿ ಹಾಕಲು ಅವನಿಂದ ಆಗಲಿಲ್ಲ. ಅದನ್ನು ಕಂಡ ಅಬ್ದುಲ್ಲಾ,
`ಹೇ, ಮುಲ್ಲಾ ಕೀಲಿ ನನಗೆ ಕೊಡು ನಾನು ಬೀಗ ತೆಗೆಯುತ್ತೇನೆಎಂದ.
`ಬೇಡ. ಮನೆ ಅಲುಗಾಡುತ್ತಿದೆ. ನೀನು ಮನೆ ಹಿಡಕೋ, ನಾನೇ ಬೀಗ ತೆರೆಯುತ್ತೇನೆಎಂದ ನಸ್ರುದ್ದೀನ್.
ಬದುಕು ಬದಲಾಯಿಸು
ಮುಲ್ಲಾ ನಸ್ರುದ್ದೀನ್ ರಸ್ತೆಬದಿ ತನ್ನ ತಳ್ಳು ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ. ಹಲವಾರು ವರ್ಷಗಳ ನಂತರ ಊರಿಗೆ ಬಂದ ಅವನ ಬಾಲ್ಯದ ಗೆಳೆಯ ಅವನನ್ನು ಭೇಟಿಯಾದ.
`ಏನು ಮುಲ್ಲಾ, ನಿನ್ನ ಬಡತನದ ಬದುಕನ್ನೇ ಬದಲಾಯಿಸಿಬಿಡುತ್ತೇನೆ ಎಂದು ಆಗ ನೀನು ಶಪಥ ಮಾಡಿದ್ದೆ? ಏನಾಯಿತು ನಿನ್ನ ಶಪಥ? ಇನ್ನೂ ಅದೇ ವ್ಯಾಪಾರ ಮಾಡುತ್ತಿದ್ದೀಯಲ್ಲಾ?’ ಎಂದು ಗೆಳೆಯ ಕೇಳಿದ.
`ಹೇ, ಬದುಕು ಬದಲಾಯಿಸುವುದಕ್ಕಿಂತ ಮನಸ್ಸು ಬದಲಾಯಿಸುವುದು ಸುಲಭ. ಅದಕ್ಕೆ ಮನಸ್ಸೇ ಬದಲಾಯಿಸಿದೆಹೇಳಿದ ಮುಲ್ಲಾ.

ಸೊಸೆ-ಅಳಿಯ
ಮುಲ್ಲಾ ನಸ್ರುದ್ದೀನ್ ಮತ್ತು ಅವನ ಬಾಲ್ಯದ ಗೆಳೆಯನೊಬ್ಬ ಭೇಟಿಯಾದ. ತಮ್ಮ ಹಿಂದಿನ ದಿನಗಳ ಬಗ್ಗೆ ಮಾತನಾಡಿ,
`ನಿನ್ನ ಮಗನಿಗೆ ಮದುವೆ ಮಾಡಿದೆಯಂತೆ? ಹೇಗಿದ್ದಾರೆ ನಿನ್ನ ಮಗ ಮತ್ತು ಸೊಸೆ?’ ಎಂದು ಕೇಳಿದ ನಸ್ರುದ್ದೀನ್.
`ಅಯ್ಯೋ ಅವನ ಕತೆ ಹೇಳುವುದೇನು? ಅವನೊಬ್ಬ ನತದೃಷ್ಟ. ನನ್ನ ಸೊಸೆ ಶುದ್ಧ ಸೋಮಾರಿ. ಅವಳಿಗೆ ಅಡುಗೆ ಮಾಡಲು ಬರುವುದಿಲ್ಲ, ಮನೆಗೆಲಸ ಮಾಡುವುದಿಲ್ಲ, ಬಟ್ಟೆ ಒಗೆಯುವುದಿಲ್ಲ. ದಿನಾಲೂ ಸೂರ್ಯ ನೆತ್ತಿಗೇರಿದ ಮೇಲೆ ಏಳುತ್ತಾಳೆ. ಎಲ್ಲಾ ನನ್ನ ಮಗನೇ ಮಾಡಬೇಕುಎಂದು ತನ್ನ ಅಳಲು ತೋಡಿಕೊಂಡ ಗೆಳೆಯ.
`ಛೆ, ಛೆ. ಹಾಗಾಗಬಾರದಿತ್ತುಎಂದ ನಸ್ರುದ್ದೀನ್.
`ಅಂದ ಹಾಗೆ ನಸ್ರುದ್ದೀನ್, ನಿನ್ನ ಮಗಳಿಗೂ ಮದುವೆ ಮಾಡಿದೆಯಂತೆ? ಹೇಗಿದ್ದಾನೆ ನಿನ್ನ ಅಳಿಯ?’ ಎಂದು ಕೇಳಿದ ಗೆಳೆಯ.
`ಹಾ, ನನ್ನ ಮಗಳು ಅದೃಷ್ಟವಂತಳು. ನನಗೆ ಬಹಳ ಒಳ್ಳೆಯ ಅಳಿಯ ಸಿಕ್ಕಿದ್ದಾನೆ. ದಿನಾಲೂ ಅವನೇ ಅಡುಗೆ ಮಾಡುತ್ತಾನೆ, ಎಲ್ಲಾ ಮನೆಗೆಲಸ ಮಾಡುತ್ತಾನೆ, ಬಟ್ಟೆ ಒಗೆಯುತ್ತಾನೆ. ಅವಳು ಮಲಗಿರುವಂತೆ ಕಾಫಿ, ತಿಂಡಿ ಹಾಸಿಗೆಗೇ ಸರಬರಾಜು ಮಾಡುತ್ತಾನೆ. ನಂಬಿದರೆ ನಂಬು ಬಿಟ್ಟರೆ ಬಿಡು, ಅವಳು ಮನೆಯಲ್ಲಿ ಎಷ್ಟು ಹೊತ್ತು ಬೇಕಾದರೂ ಮಲಗಿರಬಹುದುಎಂದ ನಸ್ರುದ್ದೀನ್.

ಬೌ ಬೌ
ಮುಲ್ಲಾ ನಸ್ರುದ್ದೀನ್ ಅವನ ಹೆಂಡತಿ ಫಾತಿಮಾ ಸಿಕ್ಕಾಪಟ್ಟೆ ಜಗಳವಾಡಿದರು. ಆಕೆ ಅವನನ್ನು ಏನೋ ಬೈದಳು. ಸಿಟ್ಟಿನಿಂದ ನಸ್ರುದ್ದೀನ್ ಅವಳ ಬಳಿ ಬಂದು,
`ಏನು? ನೀನು ನನ್ನನ್ನು ನಾಯಿ ಎಂದು ಕರೆದೆಯಾ?’ ಕೇಳಿದ.
ಆಕೆ ಏನೂ ಹೇಳಲಿಲ್ಲ.
`ಏಕೆ ಸುಮ್ಮನಿದ್ದೀಯಾ? ಹೇಳು ನೀನು ನನ್ನನ್ನು ನಾಯಿ ಎಂದು ಕರೆದೆಯಾ?’ ಮತ್ತೊಮ್ಮೆ ಕೇಳಿದ.
ಆಕೆ ಬಾಯಿ ಬಿಡಲಿಲ್ಲ. ತನ್ನ ಕೆಲಸ ತಾನು ಮುಂದುವರಿಸಿದಳು.
ಮುಲ್ಲಾ ಇನ್ನೂ ಸಿಟ್ಟಿನಿಂದ `ಬಾಯಿ ಬಿಡುತ್ತೀಯೋ ಇಲ್ಲವೋ, ಹೇಳು ನೀನು ನನ್ನನ್ನು ನಾಯಿ ಎಂದು ಕರೆದೆಯಾ?’ ಎಂದು ಕೇಳಿದ.
`ಇಲ್ಲಾ, ಮಾರಾಯಾ. ನಾನೇನೂ ಹೇಳಲಿಲ್ಲ. ನೀನು ದಯವಿಟ್ಟು ಬೊಗಳುವುದನ್ನು ನಿಲ್ಲಿಸುಎಂದಳು ಫಾತಿಮಾ.

ದೇವರ ಸೈನಿಕ
ಮುಲ್ಲಾ ನಸ್ರುದ್ದೀನ್ ಒಂದು ದಿನ ಮಸೀದಿಯ ಮುಂದೆ ಹೋಗುತ್ತಿದ್ದಾಗ, ಮೌಲ್ವಿ ಅವನನ್ನು ಹತ್ತಿರಕ್ಕೆ ಕರೆದು,
`ಮುಲ್ಲಾ, ನಾನು ನಿನ್ನನ್ನು ದಿನಾಲೂ ಗಮನಿಸುತ್ತಿದ್ದೇನೆ. ನೀನೇಕೆ ಮಸೀದಿಗೆ ಬರುವುದಿಲ್ಲ? ಇಲ್ಲಿ ನೋಡು ಎಷ್ಟೊಂದು ಜನ ದೇವರನ್ನು ಪ್ರಾರ್ಥಿಸಲು ಮಸೀದಿಗೆ ಬರುತ್ತಾರೆ. ಅವರೆಲ್ಲಾ ದೇವರ ಸೈನಿಕರಿದ್ದಂತೆ. ನೀನೇಕೆ ಸೈನ್ಯವನ್ನು ಸೇರಿಕೊಳ್ಳಬಾರದು?’ ಎಂದು ಕೇಳಿದ.
`ನಾನೂ ಸೈನ್ಯಕ್ಕೆ ಸೇರಿಕೊಂಡಿದ್ದೇನೆಹೇಳಿದ ಮುಲ್ಲಾ.
`ಆದರೆ ನಾನು ನಿನ್ನನ್ನು ಒಂದು ದಿನವೂ ಇಲ್ಲಿ ಕಂಡಿಲ್ಲವಲ್ಲ?’ ಕೇಳಿದ ಮೌಲ್ವಿ.
ಹತ್ತಿರಕ್ಕೆ ಬಂದ ನಸ್ರುದ್ದೀನ್ ಮೌಲ್ಯಿಯ ಕಿವಿಯಲ್ಲಿ ಉಸುರಿದ,
`ನಾನು ಸೇರಿರುವುದು ರಹಸ್ಯಪಡೆಗೆ.’

ಹೆಂಡತಿಯ ತಂಗಿ
ಮುಲ್ಲಾ ನಸ್ರುದ್ದೀನ್ ಒಂದು ದಿನ ತನ್ನ ಪತ್ನಿ ಫಾತಿಮಾಳನ್ನು ಕೇಳಿದ,
`ನಾನೇನಾದರೂ ಸತ್ತು ಹೋದರೆ ನೀನು ಮತ್ತೊಂದು ಮದುವೆಯಾಗುವೆಯಾ?’
`ಖಂಡಿತಾ ಇಲ್ಲ. ನಾನು ನನ್ನ ತಂಗಿಯ ಜೊತೆ ವಾಸಿಸುತ್ತೇನೆಎಂದಳು ಫಾತಿಮಾ. ಅವಳು ಹಾಗೇ ಮಾತು ಮುಂದುವರಿಸಿ,
`ಅಕಸ್ಮಾತ್ ನಾನು ಸತ್ತುಹೋದರೆ, ನೀನು ಮದುವೆಯಾಗುತ್ತೀಯೇನು?’ ಎಂದು ನಸ್ರುದ್ದೀನನನ್ನು ಕೇಳಿದಳು.
`ನಾನೂ ಅಷ್ಟೆ, ನಿನ್ನ ತಂಗಿಯ ಜೊತೆ ವಾಸಿಸುತ್ತೇನೆಎಂದ ನಸ್ರುದ್ದೀನ್.

ಮಕ್ಕದ ಮನೆಯ ಮಗು
ಮುಲ್ಲಾ ನಸ್ರುದ್ದೀನ್ ತನ್ನ ಮನೆಯ ಕಾಂಪೌಂಡಿನಲ್ಲಿ ಸಣ್ಣ ಬಾಲಕನೊಡನೆ ಆಟವಾಡುತ್ತಿದ್ದ. ಬಹಳ ವರ್ಷಗಳ ನಂತರ ಅವನನ್ನು ಭೇಟಿಯಾಗಲು ಅವನ ಗೆಳೆಯ ಅಬ್ದುಲ್ಲಾ ಬಂದ.
`ಏನು ನಸ್ರುದ್ದೀನ್? ನಿನ್ನ ಮಗ ಥೇಟ್ ನಿನ್ನಂತೆಯೇ ಇದ್ದಾನೆ!’ ಎಂದ ಅಬ್ದುಲ್ಲಾ.
`ಶ್ಶ್! ಜೋರಾಗಿ ಹೇಳಬೇಡ. ಅವನು ಪಕ್ಕದ ಮನೆಯಾಕೆಯ ಮಗಎಂದ ನಸ್ರುದ್ದೀನ್.

ಸುಳ್ಳು ಎಂದರೆ?
ಮುಲ್ಲಾ ನಸ್ರುದ್ದೀನ್ ಒಂದು ಶಾಲೆಯಲ್ಲಿ ಅಧ್ಯಾಪಕನಾಗಿದ್ದ. ಒಂದು ದಿನ ತರಗತಿಗೆ ಪ್ರವೇಶಿಸಿದಾಗ ಇಬ್ಬರು ಬಾಲಕರು ಜೋರಾಗಿ ವಾದ ಮಾಡುತ್ತಿದ್ದರು.
`ಏನದು? ಏಕೆ ಇಬ್ಬರೂ ವಾದ ಮಾಡುತ್ತಿದ್ದೀರಿ?’ ಕೇಳಿದ ನಸ್ರುದ್ದೀನ್.
`ಸಾರ್, ನಮಗೆ ದಾರಿಯಲ್ಲಿ ನೂರು ರೂಪಾಯಿ ನೋಟು ಸಿಕ್ಕಿತು. ಯಾರು ದೊಡ್ಡ ಸುಳ್ಳು ಹೇಳುವರೋ ಅವರಿಗೆ ಹಣ ಎಂದು ತೀರ್ಮಾನಿಸಿದ್ದೇವೆಎಂದ ಒಬ್ಬ ಬಾಲಕ.
`ನಿಮಗೆ ನಾಚಿಕೆಯಾಗಬೇಕುಹೇಳಿದ ಅಧ್ಯಾಪಕ ನಸ್ರುದ್ದೀನ್, ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಎಂದರೆ ಏನೆಂದು ತಿಳಿದೇ ಇರಲಿಲ್ಲ.]’
ಇಬ್ಬರು ಬಾಲಕರು ತಕ್ಷಣವೇ ನೂರು ರೂಪಾಯಿಯನ್ನು ತಮ್ಮ ಅಧ್ಯಾಪಕ ನಸ್ರುದ್ದೀನನಿಗೆ ನೀಡಿದರು.
j.balakrishna@gmail.com

ಗುರುವಾರ, ಜನವರಿ 08, 2015

ಮುಲ್ಲಾ ನಸ್ರುದ್ದೀನ್ ಕತೆಗಳು - 33ನೇ ಕಂತು

`ಸಂವಾದ' ಪತ್ರಿಕೆಯ ಅಕ್ಟೋಬರ್ 2014ರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 33ನೇ ಕಂತು
ಚಿತ್ರಗಳು: ಮುರಳೀಧರ ರಾಠೋಡ್

ರಾಜ ಚಿಕ್ಕವನಾಗಿದ್ದಾಗ
ನಸ್ರುದ್ದೀನ್ ಹಾಗೂ ಅವನ ಗೆಳೆಯ ಅಬ್ದುಲ್ಲಾ ಪುರಾತತ್ವ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಇಬ್ಬರಿಗೂ ಪುರಾತನ ಸ್ಥಳವೊಂದರ ಉತ್ಖನನದ ಕೆಲಸ ವಹಿಸಿಕೊಡಲಾಯಿತು. ಇಬ್ಬರೂ ಭೂಮಿಯನ್ನು ಅಗೆಯುತ್ತಿದ್ದಾಗ ಅಸ್ಥಿಪಂಜರವೊಂದು ಸಿಕ್ಕಿತು. `ಇದು ಯಾರ ಅಸ್ಥಿಪಂಜರವಿರಬಹುದು?’ ಕೇಳಿದ ಅಬ್ದುಲ್ಲಾ.
`ಅದು ಮಹಾರಾಜನದುಎಂದ ನಸ್ರುದ್ದೀನ್.
`ಅದರ ಪಕ್ಕದಲ್ಲಿ ಮತ್ತೊಂದು ಚಿಕ್ಕ ಅಸ್ಥಿಪಂಜರವಿದೆಯೆಲ್ಲಾ?’ ಕೇಳಿದ ಅಬ್ದುಲ್ಲಾ.
`ಅದು ಮಹಾರಾಜ ಚಿಕ್ಕವನಿದ್ದಾಗಿನದುಹೇಳಿದ ನಸ್ರುದ್ದೀನ್.
ಹೊಸದೆಂದುಕೊಂಡಿದ್ದೆ
ನಸ್ರುದ್ದೀನ್ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಓಡಾಡುವಾಗ ಒಂದು ಪ್ರಾಚೀನ ಹೂ ದಾನಿಯನ್ನು ತನ್ನ ಅಜಾಗರೂಕತೆಯಿಂದ ಒಡೆದುಹಾಕಿದ. ಅಲ್ಲೇ ಇದ್ದ ಮೇಲ್ವಿಚಾರಕ,
`ಅಯ್ಯೋ! ಅದನ್ನು ಒಡೆದುಹಾಕಿದೆಯಾ? ಅದು ಐನೂರು ವರ್ಷ ಹಳೆಯದು!’ ಎಂದು ಕೂಗಿದ.
`ಅದು ಹಳೆಯ ಹೂದಾನಿಯೇ? ನಾನೆಲ್ಲೋ ಹೊಸ ಹೂದಾನಿ ಒಡೆದುಹಾಕಿದ್ದೇನೆ ಎಂದು ಹೆದರಿಕೊಂಡಿದ್ದೆಎಂದ ನಸ್ರುದ್ದೀನ್.

ಹೆದರಿಕೆ?
ನಸ್ರುದ್ದೀನನಿಗೆ ತೀವ್ರ ಕಾಯಿಲೆಯಾಗಿ ಒಂದಷ್ಟು ದಿನ ಕೋಮಾದಲ್ಲಿದ್ದ. ನಸ್ರುದ್ದೀನ ಇನ್ನೇನು ಸತ್ತೇಬಿಡುತ್ತಾನೆ ಎಂದುಕೊಂಡಿದ್ದರು. ಆದರೆ ಪವಾಡವೆನ್ನುವಂತೆ ಕೊನೆಗೊಂದು ದಿನ ಚೇತರಿಸಿಕೊಂಡ ಹಾಗೂ ಎಚ್ಚರಾದ. ಅಲ್ಲೇ ಇದ್ದ ಇಮಾಂ,
`ಏನು ನಸ್ರುದ್ದೀನ್! ಸಾವಿನ ಮನೆಯವರೆಗೂ ಹೋಗಿ ಬಂದಿದ್ದೀಯ. ನೀನು ಭೂಮಿಯ ಮೇಲೆ ಮಾಡದ ಪಾಪವಿಲ್ಲ. ನಿನ್ನ ಪಾಪದ ಕೊಡ ತುಂಬಿ ತುಳುಕುತ್ತಿತ್ತು. ಸಾವಿನಂಚಿನಲ್ಲಿದ್ದ ನಿನಗೆ ದೇವರನ್ನು ಭೇಟಿಯಾಗಲು ಹೆದರಿಕೆಯಾಗಿರಬೇಕಲ್ಲವೆ?’ ಎಂದು ಕೇಳಿದ.
ಕಣ್ಣು ಬಿಟ್ಟ ನಸ್ರುದ್ದೀನ್, `ನನಗೆ ಹೆದರಿಕೆಯಿರಲಿಲ್ಲ. ಆದರೆ ನನ್ನನ್ನು ಸೇರಿಸಿಕೊಳ್ಳಲು ದೇವರೇ ಹೆದರಿಕೊಂಡು ವಾಪಸ್ಸು ಕಳುಹಿಸಿದ್ದಾರೆಎಂದ.

ಕಳ್ಳರು
ನಸ್ರುದ್ದೀನ್ ಅವನ ಗೆಳೆಯ ಅಬ್ದುಲ್ಲಾನೊಂದಿಗೆ ಪಾಲುದಾರನಾಗಿ ವ್ಯವಹಾರವೊಂದನ್ನು ನಡೆಸುತ್ತಿದ್ದ. ಬಹಳ ದಿನಗಳಿಂದ ಇಬ್ಬರೂ ವ್ಯವಹಾರದಲ್ಲೇ ತೊಡಗಿದ್ದು ಬೇಸರವಾಗಿತ್ತು. ಇಬ್ಬರೂ ಗೋವಾಕ್ಕೆ ಪ್ರವಾಸ ಹೋಗೋಣವೆಂದು ನಿರ್ಧರಿಸಿ ತಮ್ಮ ಅಂಗಡಿಗೆ ಬೀಗ ಹಾಕಿ ಹೊರಟರು. ಇಬ್ಬರೂ ಗೋವಾದ ಬೀಚಿನಲ್ಲಿ ಹಾಯಾಗಿ ಮಲಗಿ ತಂಪಾದ ಬಿಯರ್ ಸವಿಯುತ್ತಿದ್ದರು. ಇದ್ದಕ್ಕಿದ್ದಂತೆ ಅಬ್ದುಲ್ಲಾ ಏನೋ ನೆನಪಿಸಿಕೊಂಡು,
`ಮುಲ್ಲಾ, ನಾವು ನಮ್ಮ ಅಂಗಡಿಯ ಕಬ್ಬಿಣದ ಪೆಟ್ಟಿಗೆಗೆ ಬೀಗ ಹಾಕಲು ಮರೆತುಬಿಟ್ಟಿದ್ದೇವೆಎಂದ.
`ಇರಲಿ ಬಿಡು, ಮತ್ತಾರು ಕಳ್ಳರು ಬರುತ್ತಾರೆ, ನಾವಿಬ್ಬರೂ ಇಲ್ಲಿಯೇ ಇದ್ದೀವಲ್ಲಎಂದ ನಸ್ರುದ್ದೀನ್.

ವಿಚ್ಛೇದನೆ
ನಸ್ರುದ್ದೀನ್ ಮತ್ತು ಅವನ ಪತ್ನಿ ಫಾತಿಮಾ ವಿವಾಹ ವಿಚ್ಛೇದನ ಪಡೆಯಲೆಂದು ನ್ಯಾಯಾಲಕ್ಕೆ ಹೋದರು. ಅವರ ವಾದ ವಿವಾದ ಆಲಿಸಿದ ನ್ಯಾಯಾಧೀಶರು,
`ಆಯಿತು ನಿಮಗೆ ವಿಚ್ಛೇದನೆ ನೀಡುತ್ತೇನೆ. ಆದರೆ ನಿಮಗೆ ಮೂವರು ಮಕ್ಕಳಿದ್ದಾರೆ, ಅವರನ್ನು ಹೇಗೆ ಹಂಚಿಕೊಳ್ಳುತ್ತೀರಿ?’ ಎಂದು ಕೇಳಿದರು.
ನಸ್ರುದ್ದೀನ್ ಮತ್ತು ಅವನ ಹೆಂಡತಿ ಫಾತಿಮಾ ಇಬ್ಬರೂ ಏನೋ ಗುಸು ಗುಸು ಮಾತನಾಡಿಕೊಂಡರು. ನಂತರ ನ್ಯಾಯಾಧೀಶರಿಗೆ, `ಸ್ವಾಮಿ, ವಿಚ್ಛೇದನಕ್ಕೆ ಮುಂದಿನ ವರ್ಷ ಬರುತ್ತೇವೆ, ಅಷ್ಟೊತ್ತಿಗೆ ಮತ್ತೊಂದು ಮಗುವಾಗಿರುತ್ತದೆಎಂದ ನಸ್ರುದ್ದೀನ್.

ಅನಾಹುತ
ನಸ್ರುದ್ದೀನನ ಅಂಗಡಿಯಲ್ಲಿ ಒಬ್ಬ ಹುಡುಗ ಕೆಲಸಕ್ಕೆ. ಒಂದು ದಿನ ಅವನು ಮಾಲೀಕ ನಸ್ರುದ್ದೀನನ ಬಳಿ ಬಂದು,
`ನೀವು ನನಗೆ ತಿಂಗಳಿನಿಂದ ಸಂಬಳ ಹೆಚ್ಚಿಸಬೇಕು. ನನಗೆ ಮದುವೆಯಾಗಿದೆಎಂದ.
ಹುಡುಗನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ನಸ್ರುದ್ದೀನ್,
`ನೀನು ಮಾಡಿಕೊಳ್ಳುವ ಅನಾಹುತಗಳಿಗೆ ನಾನೇಕೆ ನಷ್ಟ ಭರಿಸಬೇಕು?’ ಎಂದು ಕೇಳಿದ.

ಕುಟುಂಬ
ನಸ್ರುದ್ದೀನ್ ತಾನು ಪ್ರೀತಿಸುತ್ತಿದ್ದ ಹುಡುಗಿಗೆ,
`ನಾನು ನಿನ್ನನ್ನು ಮದುವೆಯಾಗುವುದು ಸಾಧ್ಯವಿಲ್ಲಎಂದ.
`ಏಕೆ? ಏನಾಯಿತು?’ ಕೇಳಿದಳು ಹುಡುಗಿ.
`ನನ್ನ ಕುಟುಂಬದವರು ಒಪ್ಪುತ್ತಿಲ್ಲಹೇಳಿದ ನಸ್ರುದ್ದೀನ್.
`ನಿನ್ನ ಕುಟುಂಬದವರು ಎಂದರೆ ಯಾರು?’ ಆತಂಕದಿಂದ ಕೇಳಿದಳು ಹುಡುಗಿ.
`ನನ್ನ ಹೆಂಡತಿ ಮತ್ತು ಮಕ್ಕಳು’, ಹೇಳಿದ ನಸ್ರುದ್ದೀನ್.

ಅರ್ಹತೆ
ನಸ್ರುದ್ದೀನ್ ಲೋಕಸಭೆ ಅಧಿವೇಶನ ನಡೆಯುತ್ತಿದ್ದಾಗ ಒಳಹೋಗಲು ಪ್ರಯತ್ನಿಸಿದ. ಕಾವಲುಗಾರ ತಡೆದು,
`ಯಾರು ನೀನು? ಏನಾಗಬೇಕು?’ ಎಂದು ಕೇಳಿದ.
`ನಾನು ನಸ್ರುದ್ದೀನ್. ನಾನು ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಬೇಕು’, ಹೇಳಿದ ನಸ್ರುದ್ದೀನ್.
`ನಿನಗೇನು ತಲೆ ಕೆಟ್ಟಿದೆಯೆ?’ ಕೇಳಿದ ಸಿಟ್ಟಿನಿಂದ ಕಾವಲುಗಾರ.
`ಏಕೆ? ತಲೆಕೆಟ್ಟಿದ್ದರೆ ಮಾತ್ರ ಮಂತ್ರಿಯಾಗಬಹುದೆ?’ ಕೇಳಿದ ನಸ್ರುದ್ದೀನ್.

ಪ್ರೀತಿಯ ರಹಸ್ಯ
ನಸ್ರುದ್ದೀನ್ ಹಣ್ಣು ಹಣ್ಣು ಮುದುಕನಾಗಿದ್ದ. ತನ್ನ ಪತ್ನಿಯನ್ನು ಪ್ರೀತಿಯಿಂದ, `ಪ್ಯಾರೀ ಜಾನ್, ಮೇರೀ ಗುಲಾಬ್, ಹನಿ, ಸ್ವೀಟಿ, ಡಾರ್ಲಿಂಗ್...’ ಇನ್ನೂ ಮುಂತಾಗಿ ಕರೆಯುತ್ತಿದ್ದ. ಅವನನ್ನು ಸಂದರ್ಶಿಸಲು ಬಂದಿದ್ದ ಪತ್ರಕರ್ತನೊಬ್ಬ,
`ನೀವು ನಿಮ್ಮ ಹೆಂಡತಿಯನ್ನು ಬಹಳ ಪ್ರೀತಿಸುತ್ತೀರಿ ಎನ್ನಿಸುತ್ತದೆ. ಇಷ್ಟು ವರ್ಷಗಳಾದರೂ ನೀವು ನಿಮ್ಮ ಪತ್ನಿಯನ್ನು ಪ್ಯಾರೀ ಜಾನ್, ಸ್ವೀಟಿ, ಡಾರ್ಲಿಂಗ್...ಎಂದೆಲ್ಲಾ ಕರೆಯುತ್ತೀರಿ. ನಿಮ್ಮ ಗಾಢ ಪ್ರೇಮದ ರಹಸ್ಯವೇನು?’ ಎಂದು ಕೇಳಿದ.
ಪತ್ರಕರ್ತನನ್ನು ಹತ್ತಿರಕ್ಕೆ ಕರೆದ ಮುಲ್ಲಾ, `ಹತ್ತು ವರ್ಷಗಳ ಹಿಂದೆಯೇ ನನಗೆ ಅವಳ ಹೆಸರು ಮರೆತುಹೋಗಿದೆ. ಅವಳ ಹೆಸರು ಏನೆಂದು ಅವಳನ್ನು ಕೇಳುವ ಧೈರ್ಯ ನನಗಿಲ್ಲಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ.
ದೇವರ ಪಾಲು
ನಸ್ರುದ್ದೀನನಿಗೆ ದುಡ್ಡಿನ ತುರ್ತು ಅವಶ್ಯಕತೆಯಿತ್ತು. ಯಾರನ್ನು ಕೇಳಿದರೂ ಸಾಲ ಕೊಡಲಿಲ್ಲ. ಕೊನೆಗೆ,
`ಹೋ ದೇವರೇ, ನನಗೆ ಎಲ್ಲಾದರೂ ನೂರು ರೂಪಾಯಿ ಸಿಕ್ಕುವಂತೆ ಮಾಡು. ನಿನ್ನ ಹುಂಡಿಗೆ ಅದರಲ್ಲಿ ಐವತ್ತು ರೂಪಾಯಿ ಹಾಕುತ್ತೇನೆಎಂದು ಆಕಾಶದೆಡೆಗೆ ಕೈ ಮುಗಿದು ಪ್ರಾರ್ಥಿಸಿದ. ಅವನ ಅದೃಷ್ಟವೆಂಬಂತೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ರಸ್ತೆಯಲ್ಲಿ ಅವನಿಗೆ ಐವತ್ತು ರೂಪಾಯಿ ಸಿಕ್ಕಿತು.
`ಹೋ, ದೇವರೇ! ನಿನಗೆ ನಾಚಿಕೆಯಾಗಬೇಕು. ನಿನಗೆ ನನ್ನ ಮೇಲೆ ಸ್ವಲ್ಪವೂ ನಂಬಿಕೆಯಿಲ್ಲವೆ? ಆಗಲೇ ನಿನ್ನ ಪಾಲನ್ನು ತೆಗೆದುಕೊಂಡು ನನ್ನ ಪಾಲನ್ನು ಮಾತ್ರ ಕೊಟ್ಟಿರುವೆಯೆಲ್ಲಾ?’ ಹೇಳಿದ ನಸ್ರುದ್ದೀನ್ ನೋಟನ್ನು ತನ್ನ ಕಿಸೆಗೆ ಬಿಡುತ್ತಾ.

ಎಲ್ಲೆಲ್ಲೂ ನೋವು
ನಸ್ರುದ್ದೀನ್ ಒಂದು ದಿನ ವೈದ್ಯರ ಬಳಿ ಹೋದ.
`ಡಾಕ್ಟರೇ ನನಗೆ ಏನೋ ಭಯಂಕರ ಕಾಯಿಲೆ ಇದ್ದಂತಿದೆ. ಎಲ್ಲಿ ಮುಟ್ಟಿದರೂ ನೋಯುತ್ತದೆಎಂದ.
`ಹೌದೆ? ಎಲ್ಲಿ ತೋರಿಸಿಎಂದರು ವೈದ್ಯರು.
ನಸ್ರುದ್ದೀನ್ ತನ್ನ ತೋರುಬೆರಳಿನಿಂದ ತನ್ನ ಎದೆಯ ಮೇಲೆ ಮುಟ್ಟಿಕೊಂಡ. `ಹಾ, ನೋಡಿ ಇಲ್ಲಿ ನೋಯುತ್ತದೆ’, ಸೊಂಟವನ್ನು ಚುಚ್ಚಿದ, `ಹಾ, ನೋಡಿ ಇಲ್ಲಿ ನೋಯುತ್ತದೆ’, ತನ್ನ ತೊಡೆಯನ್ನು ಮುಟ್ಟಿಕೊಂಡ, `ಹಾ, ನೋಡಿ ಇಲ್ಲಿ ನೋಯುತ್ತದೆ’, ತನ್ನ ಕೆನ್ನೆ ಮುಟ್ಟಿಕೊಂಡ, `ಹಾ, ನೋಡಿ ಇಲ್ಲಿ ನೋಯುತ್ತದೆಎಂದ.
ಎಲ್ಲವನ್ನೂ ಗಮನಿಸಿದ ವೈದ್ಯರು ಕೇಳಿದರು,
`ನೀನು ನಸ್ರುದ್ದೀನ್ ಅಲ್ಲವೆ?’
`ಹೌದು. ಅದು ನಿಮಗೆ ಹೇಗೆ ತಿಳಿಯಿತು?’ ಕೇಳಿದ ನಸ್ರುದ್ದೀನ್.
`ನಿನಗೇನೂ ಕಾಯಿಲೆಯಿಲ್ಲ. ಆದರೆ ನಿನ್ನ ತೋರುಬೆರಳು ಮುರಿದಿದೆಹೇಳಿದರು ವೈದ್ಯರು ನಸ್ರುದ್ದೀನನ ಬೆರಳು ಪರೀಕ್ಷಿಸುತ್ತಾ.

ಬಿಕ್ಷುಕ
ಬಿಕ್ಷುಕ: ಸ್ವಾಮಿ ಹಸಿವಾಗುತ್ತಿದೆ, ಸ್ವಲ್ಪ ಆಹಾರ ಕೊಡಿ.
ನಸ್ರುದ್ದೀನ್: ನಿನಗೆ ವಿಸ್ಕಿ ಕೊಡಿಸುತ್ತೇನೆ.
ಬಿಕ್ಷುಕ: ಬೇಡ, ನಾನು ಕುಡಿಯುವುದಿಲ್ಲ.
ನಸ್ರುದ್ದೀನ್: ನಿನಗೆ ಸಿಗರೇಟ್ ಕೊಡಿಸುತ್ತೇನೆ.
ಬಿಕ್ಷುಕ: ಬೇಡ, ನಾನು ಧೂಮಪಾನ ಮಾಡುವುದಿಲ್ಲ.
ನಸ್ರುದ್ದೀನ್: ನಿನ್ನನ್ನು ಕುದುರೆ ರೇಸಿಗೆ ಕರೆದೊಯ್ಯುತ್ತೇನೆ.
ಬಿಕ್ಷುಕ: ಬೇಡ, ನಾನು ಜೂಜಾಡುವುದಿಲ್ಲ.
ನಸ್ರುದ್ದೀನ್: ನಿನಗೆ ಸುಂದರ ಹುಡುಗಿಯ ಪರಿಚಯ ಮಾಡಿಸುತ್ತೇನೆ.
ಬಿಕ್ಷುಕ: ಬೇಡ, ನಾನು ನನ್ನ ಹೆಂಡತಿಯನ್ನು ಮಾತ್ರ ಪ್ರೀತಿಸುತ್ತೇನೆ.
ನಸ್ರುದ್ದೀನ್: ಆಯಿತು, ನಿನಗೆ ಆಹಾರ ಕೊಡಿಸುತ್ತೇನೆ. ಆದರೆ ಮೊದಲು ನೀನು ನಮ್ಮ ಮನೆಗೆ ಬರಬೇಕು.
ಬಿಕ್ಷುಕ: ಏಕೆ?
ನಸ್ರುದ್ದೀನ್: ಕುಡಿಯದ, ಧೂಮಪಾನ ಮಾಡದ, ಜೂಜಾಡದ ಹಾಗೂ ತಮ್ಮ ಹೆಂಡತಿಯನ್ನು ಮಾತ್ರ ಪ್ರೀತಿಸುವವರು ಯಾವ ಸ್ಥಿತಿಯಲ್ಲಿರುತ್ತಾರೆಂಬುದನ್ನು ನನ್ನ ಹೆಂಡತಿಗೆ ತೋರಿಸಲು.

ಗೊಂಬೆ
ಅರವತ್ತು ವರ್ಷದ ಮುಲ್ಲಾ ನಸ್ರುದ್ದೀನ್ ತನ್ನ ಎಂಭತ್ತು ವರ್ಷದ ತಂದೆಯನ್ನು ಮನೋವೈದ್ಯರಲ್ಲಿಗೆ ಕರೆದೊಯ್ದ.
`ಡಾಕ್ಟರೇ, ನಮ್ಮ ತಂದೆಗೆ ಚಿಕಿತ್ಸೆ ಕೊಡಿ. ಅವರು ಯಾವಾಗಲೂ ಆಟದ ಗೊಂಬೆಯೊಂದಿಗೇ ಆಟವಾಡುತ್ತಿರುತ್ತಾರೆ. ಅದನ್ನು ಕೈಯಿಂದ ಬಿಡುವುದೇ ಇಲ್ಲಹೇಳಿದ ನಸ್ರುದ್ದೀನ್.
ಪರೀಕ್ಷಿಸಿದ ವೈದ್ಯರು, `ನಿಮ್ಮ ತಂದೆಗೆ ಏನೂ ಸಮಸ್ಯೆಯಿಲ್ಲ. ಅವರಿಗೆ ವಯಸ್ಸಾಗಿದೆಯೆಲ್ಲಾ, ಯಾರಿಗೂ ತೊಂದರೆ ಸಹ ಕೊಡುವುದಿಲ್ಲ. ಹಾಗಿರುವಾಗ ಗೊಂಬೆಯೊಂದಿಗೆ ಆಟವಾಡಿಕೊಳ್ಳಲಿ ಬಿಡಿಎಂದರು.
`ಆದರೆ... ಗೊಂಬೆ ನನ್ನದು, ಅದು ನನಗೆ ಬೇಕುಹೇಳಿದ ನಸ್ರುದ್ದೀನ್.
j.balakrishna@gmail.com