16ನೇ ಡಿಸೆಂಬರ್ 2007ರಂದು ನನ್ನ ಮೂರು ಹಾಗೂ ಗೆಳೆಯ ಡಾ.ಕೆ.ಪುಟ್ಟಸ್ವಾಮಿಯವರ ನಾಲ್ಕು ಪುಸ್ತಕಗಳು ನಯನ ರಂಗಮಂದಿರ, ಬೆಂಗಳೂರಿನಲ್ಲಿ ಬಿಡುಗಡೆಯಾದವು. ಡಾ.ಕೆ.ವಿ.ನಾರಾಯಣ, ವಿಶ್ರಾಂತ ಕುಲಪತಿಗಳು, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ಇವರು ಪುಸ್ತಕಗಳ ಬಿಡುಗಡೆ ಮಾಡಿದರು ಹಾಗೂ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. (1) ಬೊಕಾಷಿಯೋನ ರಸಿಕತೆಗಳು (2) ಪುಟ್ಟ ರಾಜಕುಮಾರ ಹಾಗೂ (3) ಮಾತಾಹರಿ ಇವು ಬಿಡುಗಡೆಯಾದ ನನ್ನ ಪುಸ್ತಕಗಳು. ಮೊದಲ ಎರಡು ಪುಸ್ತಕಗಳು ಅನುವಾದ ಕೃತಿಗಳು. ನನ್ನ ಪುಸ್ತಕಗಳ ಕುರಿತಂತೆ ಶ್ರೀ ರವಿಕಾಂತೇ ಗೌಡ, ಡಿ.ಸಿ.ಪಿ. ಇವರು ಮಾತನಾಡಿದರು ಹಾಗೂ ಡಾ.ಕೃಷ್ಣಮೂರ್ತಿ ಬೆಳೆಗೆರೆ ಇವರು ಡಾ.ಕೆ.ಪಿ.ಯವರ ಪುಸ್ತಕಗಳ ಕುರಿತಂತೆ ಮಾತನಾಡಿದರು. ಪುಸ್ತಕಗಳ ಪ್ರಕಾಶಕರು ಡಾ.ಎಂ.ಬೈರೇಗೌಡ, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು.
ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ:

ಇವು ಪ್ರಕಟವಾದ ನನ್ನ ಪುಸ್ತಕಗಳು:


3 ಕಾಮೆಂಟ್ಗಳು:
ಅಭಿನಂದನೆಗಳು ಸರ್..
ಚಿತ್ರಾ.
ಅಭಿನಂದನೆಗಳು.
ವಂದನೆಗಳು ಚಿತ್ರಾ ಮತ್ತು ಬಿಮಿಂಚುರವರಿಗೆ.
ಜೆ.ಬಾಲಕೃಷ್ಣ
ಕಾಮೆಂಟ್ ಪೋಸ್ಟ್ ಮಾಡಿ