ಬೆಂಗಳೂರಲ್ಲಿ ಕಾಣಿಸಿಕೊಂಡ ಹಾರುವ ತಟ್ಟೆ! - ನನ್ನ ವ್ಯಂಗ್ಯ ಚಿತ್ರ
Translate
ಭಾನುವಾರ, ಮೇ 26, 2013
ಶನಿವಾರ, ಮೇ 25, 2013
ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 17ನೇ ಕಂತು
ಮೇ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 17ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್
ಅಳಲು ಸಮಯವಿರುವುದಿಲ್ಲ
ನಸ್ರುದ್ದೀನನ ಕತ್ತೆಗೆ ಕಾಯಿಲೆಯಾಗಿತ್ತು. ನಸ್ರುದ್ದೀನ್ ಜೋರಾಗಿ ಅಳುತ್ತಿದ್ದ. ಅದನ್ನು ನೋಡಿದ ಗೆಳೆಯನೊಬ್ಬ,
‘ಇನ್ನೂ ನಿನ್ನ ಕತ್ತೆ ಸತ್ತಿಲ್ಲ. ಈಗಲೇ ಏಕೆ ಅಳುತ್ತಿದ್ದೀಯ?’ ಎಂದು ಕೇಳಿದ.
‘ಅಯ್ಯೋ, ಈ ಕತ್ತೆ ಸತ್ತು ಹೋದರೆ, ಅದನ್ನು ಹೂಳಬೇಕು. ಮತ್ತೊಂದು ಹೊಸ ಕತ್ತೆ ಖರೀದಿಸಬೇಕು, ಅದಕ್ಕೆ ಹೊರೆ ಹೊರುವ, ಕೆಲಸ ಮಾಡುವ ತರಬೇತಿ ಕೊಡಬೇಕು. ಆಗ ನನಗೆ ಅಳಲು ಸಮಯವೆಲ್ಲಿ ಇರುತ್ತದೆ?’ ಎಂದ ನಸ್ರುದ್ದೀನ್ ತನ್ನ ಅಳು ಮುಂದುವರಿಸುತ್ತಾ.
ಮಳೆ ಮತ್ತು ಛತ್ರಿ
ನಸ್ರುದ್ದೀನ್ ಮತ್ತು ಆತನ ಗೆಳೆಯ ಸಂಜೆ ಅದೂ ಇದೂ ಮಾತನಾಡುತ್ತಾ ಹೊರಟಿದ್ದರು. ಇದ್ದಕ್ಕಿದ್ದಂತೆ ಮಳೆ ಸುರಿಯಲು ಆರಂಭವಾಯಿತು. ನಸ್ರುದ್ದೀನನ ಕೈಯಲ್ಲಿ ಛತ್ರಿ ಇದ್ದದ್ದನ್ನು ನೋಡಿದ ಗೆಳೆಯ,
‘ನಸ್ರುದ್ದೀನ್ ನಿನ್ನ ಬಳಿ ಛತ್ರಿ ಇದೆಯೆಲ್ಲಾ, ತೆಗೆ ಅದನ್ನು’ ಎಂದ
‘ಇಲ್ಲ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ’ ಎಂದ ನಸ್ರುದ್ದೀನ್.
‘ಏಕೆ? ಏನಾಗಿದೆ ನಿನ್ನ ಛತ್ರಿಗೆ?’ ಎಂದು ಕೇಳಿದ ಗೆಳೆಯ.
‘ಅದು ಹರಿದುಹೋಗಿದೆ’ ಎಂದ ನಸ್ರುದ್ದೀನ್.
‘ಹಾಗಾದರೆ, ಅಂತಹ ಛತ್ರಿ ಏಕೆ ತಂದೆ?’ ಎಂದು ಕೇಳಿದ ಗೆಳೆಯ.
‘ನನಗೇನು ಗೊತ್ತು ಈ ದಿನ ಮಳೆ ಬರುತ್ತದೆ ಎಂದು?’ ಕೇಳಿದ ನಸ್ರುದ್ದೀನ್.
ಜ್ಞಾಪಕ ಶಕ್ತಿ
ನಸ್ರುದ್ದೀನ್ ಮರೆವಿನ ಕಾಯಿಲೆಯಿಂದ ನರಳುತ್ತಿದ್ದ. ಚಿಕಿತ್ಸೆಗೆಂದು ವೈದ್ಯರ ಬಳಿ ಹೋದ.
‘ನನಗೇನೂ ನೆನಪಿಲ್ಲ ಎನ್ನಿಸುತ್ತಿದೆ’ ಎಂದ ನಸ್ರುದ್ದೀನ್.
‘ಹೌದೆ? ಯಾವಾಗಿನಿಂದ?’ ಎಂದು ವೈದ್ಯರು ಕೇಳಿದರು.
‘ಏನದು ಯಾವಾಗಿನಿಂದ? ಏನು ಕೇಳುತ್ತಿದ್ದೀರಿ?’ ಎಂದ ನಸ್ರುದ್ದೀನ್.
ವೈದ್ಯರು ಜ್ಞಾಪಕ ಶಕ್ತಿ ಸುಧಾರಿಸಲು ಔಷಧ ಕೊಟ್ಟರು. ಒಂದು ವಾರ ಕಳೆದ ನಂತರ ಪುನಃ ವೈದ್ಯರ ಬಳಿ ನಸ್ರುದ್ದೀನ್ ಹೋದ.
‘ಹೇಗಿದೆ ಈಗ ಜ್ಞಾಪಕ ಶಕ್ತಿ?’ ಕೇಳಿದರು ವೈದ್ಯರು.
‘ಈಗ ಪರವಾಗಿಲ್ಲ ಎನ್ನಿಸುತ್ತೆ. ಏನೋ ಮರೆತಿದ್ದೇನೆ ಎನ್ನುವ ನೆನಪಿದೆ’ ಎಂದ ನಸ್ರುದ್ದೀನ್.
ಅದ್ಭುತ ಶಕ್ತಿ
ನಸ್ರುದ್ದೀನ್ ತನಗೆ ಅದ್ಭುತ ಶಕ್ತಿ ಇದೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದ. ತನಗೆ ಕತ್ತಲಲ್ಲೂ ಸಂಪೂರ್ಣವಾಗಿ ಕಾಣುತ್ತದೆ ಎಂದು ಹೇಳಿಕೊಳ್ಳುತ್ತಿದ್ದ. ಒಂದು ದಿನ ರಾತ್ರಿ ಕತ್ತಲಲ್ಲಿ ನಸ್ರುದ್ದೀನ್ ಲಾಂದ್ರ ಹಿಡಿದು ಹೋಗುತ್ತಿದ್ದಾಗ ಆತನ ಗೆಳೆಯನೊಬ್ಬ ಎದುರು ಸಿಕ್ಕಿ,
‘ಏನು ನಸ್ರುದ್ದೀನ್! ಕತ್ತಲಲ್ಲಿ ಸಹ ನಿನಗೆ ಎಲ್ಲಾ ಕಾಣುತ್ತದೆ ಎಂದು ಹೇಳುತ್ತಿದ್ದೆ. ಈಗ ನೋಡಿದರೆ ಲಾಂದ್ರ ಹಿಡಿದು ಹೊರಟಿದ್ದೀಯೆ?’ ಎಂದ ಅವನನ್ನು ತಮಾಷೆ ಮಾಡಲು.
‘ಹೌದಪ್ಪ, ನನಗೇನೋ ಕತ್ತಲಲ್ಲಿ ಕಾಣುತ್ತದೆ. ಈ ಲಾಂದ್ರ ಹಿಡಿದಿರುವುದು ನನಗೆ ದಾರಿ ಕಾಣಲು ಅಲ್ಲ. ಇದು ನಿನ್ನಂಥವರಿಗಾಗಿ. ಕತ್ತಲಲ್ಲಿ ಏನೂ ಕಾಣದೆ ನನಗೆ ಬಂದು ಡಿಕ್ಕಿ ಹೊಡೆಯಬಾರದಲ್ಲ, ಅದಕ್ಕಾಗಿ’ ಎಂದ ನಸ್ರುದ್ದೀನ್.
ಸೈನಿಕ ನಸ್ರುದ್ದೀನ್
ಯುದ್ಧದಿಂದ ಹಿಂದಿರುಗಿದ ಕೆಲವು ಸೈನಿಕರು ತಮ್ಮ ಸಾಹಸಗಳ ಬಗ್ಗೆ ಊರಿನವರ ಮುಂದೆ ಹೇಳಿಕೊಳ್ಳುತ್ತಿದ್ದರು. ಒಬ್ಬ ಸೈನಿಕ ತಾವು ಹೇಗೆ ಶತ್ರುಗಳ ರುಂಡ ಚೆಂಡಾಡಿದೆನೆಂದು ಹೇಳಿದರೆ ಮತ್ತೊಬ್ಬ ಶತ್ರು ಬಾಣಗಳನ್ನು ತಾನು ಹೇಗೆ ಕೈಯಲ್ಲೇ ಹಿಡಿದು ಅವುಗಳನ್ನು ಶತ್ರುಗಳ ಕಡೆಗೆ ಎಸೆದು ಅವರನ್ನು ಕೊಂದೆನೆಂದು ಹೇಳುತ್ತಿದ್ದ. ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನಸ್ರುದ್ದೀನ್ ತಾನೂ ಸಹ ಸೈನ್ಯದಲ್ಲಿದ್ದು ಒಂದು ಸಾರಿ ಯುದ್ಧದಲ್ಲಿ ಶತ್ರು ಸೈನಿಕನೊಬ್ಬನ ಕೈಯನ್ನು ಕತ್ತರಿಸಿದೆನೆಂದು ಹೇಳಿದ. ಅದನ್ನು ಕೇಳಿಸಿಕೊಂಡ ಸೈನಿಕ,
‘ನಾನಾಗಿದ್ದಿದ್ದರೆ ಶತ್ರುವಿನ ತಲೆಯನ್ನೇ ಕತ್ತರಿಸುತ್ತಿದ್ದೆ’ ಎಂದ.
‘ನನಗೆ ಅದಕ್ಕೆ ಅವಕಾಶವೇ ಇರಲಿಲ್ಲ’ ಎಂದ ನಸ್ರುದ್ದೀನ್.
‘ಅದು ಹೇಗೆ ಸಾಧ್ಯ?’ ಕೇಳಿದ ಸೈನಿಕ.
‘ಅಷ್ಟೊತ್ತಿಗೆ ಯಾರೋ ಯಾವಾಗಲೋ ತಲೆಯನ್ನು ಕತ್ತರಿಸಿಬಿಟ್ಟಿದ್ದರು’ ಎಂದ ನಸ್ರುದ್ದೀನ್.
ಧರ್ಮ ಮತ್ತು ಗಡ್ಡ
ದೇಶದ ಮಹಾನ್ ಮತ್ತು ಪ್ರಮುಖ ಧಾರ್ಮಿಕ ಮುಖಂಡರೆಲ್ಲಾ ವೇದಿಕೆಯ ಮೇಲೆ ಸೇರಿದ್ದರು. ಅವರನ್ನು ನೋಡಲು ಮತ್ತು ಅವರ ಮಾತು ಕೇಳಲು ಜನರೆಲ್ಲಾ ಸೇರಿದ್ದರು. ನಸ್ರುದ್ದೀನ್ ಸಹ ಆ ಧಾರ್ಮಿಕ ಮಹಾನ್ ಪುರುಷರನ್ನು ನೋಡಲು ಬಂದಿದ್ದ. ಅವನ ಪಕ್ಕ ಇದ್ದ ಒಬ್ಬಾತ,
‘ನೋಡು, ಎಲ್ಲಾ ಧಾರ್ಮಿಕ ಮಹಾನ್ ಪುರುಷರು ಗಡ್ಡ ಬಿಟ್ಟಿರುತ್ತಾರೆ. ಗಡ್ಡ ಅವರ ಜ್ಞಾನ ವಿದ್ವತ್ತಿನ ಸಂಕೇತ’ ಎಂದ.
ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ ಮನೆಗೆ ಹೊರಡಲು ಎದ್ದು ನಿಂತ. ಅದನ್ನು ನೋಡಿದ ವ್ಯಕ್ತಿ,
‘ಏಕೆ? ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ.
‘ನನ್ನ ಮನೆಗೆ. ನನ್ನ ಮನೆಯಲ್ಲೇ ಒಬ್ಬ ಜ್ಞಾನ-ವಿದ್ವತ್ತು ಇರುವ ಧಾರ್ಮಿಕ ವ್ಯಕ್ತಿಯೊಬ್ಬನಿದ್ದಾನೆ’ ಎಂದ ನಸ್ರುದ್ದೀನ್.
‘ಹೌದೆ? ನನಗೆ ಆ ವಿಷಯ ತಿಳಿದೇ ಇರಲಿಲ್ಲ. ಯಾರದು ಆ ಮಹಾನ್ ಪುರುಷ?’ ಎಂದು ಕೇಳಿದ ಆ ವ್ಯಕ್ತಿ.
‘ನನ್ನ ಮೇಕೆ. ನನ್ನ ಮೇಕೆಗೆ ಇಲ್ಲಿನ ಮಹಾನ್ ಧಾರ್ಮಿಕ ಪುರುಷರಿಗಿಂತ ಉದ್ದವಾದ ಗಡ್ಡವಿದೆ’ ಎಂದು ಹೇಳಿ ನಸ್ರುದ್ದೀನ್ ಮನೆಗೆ ಹೊರಟ.
ಗಡ್ಡದ ಬಣ್ಣ
ಸುಲ್ತಾನ ಒಂದು ದಿನ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾಗ ಕ್ಷೌರಿಕ,
‘ಮಹಾ ಪ್ರಭು, ತಮ್ಮ ಗಡ್ಡದ ಕೂದಲು ಬೆಳ್ಳಗಾಗುತ್ತಿದೆ’ ಎಂದ.
ಸಿಟ್ಟಿಗೆದ್ದ ಸುಲ್ತಾನ ಕ್ಷೌರಿಕನನ್ನು ಒಂದು ವರ್ಷ ಸೆರೆಮನೆಗೆ ಹಾಕಿ ಎಂದು ಆದೇಶಿಸಿದ. ತನ್ನ ಆಸ್ತಾನಕ್ಕೆ ಬಂದ ನಂತರ ತನ್ನ ಪರಿಚಾರಕನನ್ನು ಕರೆದು ತನ್ನ ಗಡ್ಡದ ಕೂದಲ ಬಣ್ಣ ಹೇಗಿದೆ ಎಂದು ಕೇಳಿದ.
‘ತಮ್ಮ ಗಡ್ಡದ ಬಣ್ಣ ಬಹುಪಾಲು ಕಪ್ಪಗೇ ಇದೆ’ ಎಂದ ಆತ.
‘ಬಹುಪಾಲು ಎಂದರೇನು?!’ ಎಂದು ಕೂಗಿದ ಸುಲ್ತಾನ ಅವನನ್ನು ಎರಡು ವರ್ಷ ಸೆರೆಮನೆಗೆ ತಳ್ಳಿ ಎಂದು ಆದೇಶಿಸಿದ. ಮತ್ತೊಬ್ಬ ಪರಿಚಾರಕನನ್ನು ಕರೆದು ಅವನನ್ನು ಅದೇ ಪ್ರಶ್ನೆ ಕೇಳಿದ ಸುಲ್ತಾನ. ಇದನ್ನೆಲ್ಲಾ ನೋಡುತ್ತಿದ್ದ ಆತ ಹೆದರಿಕೊಂಡಿದ್ದ.
‘ತಮ್ಮ ಗಡ್ಡದ ಕೂದಲು ಅಪ್ಪಟ ಕಪ್ಪು ಬಣ್ಣದಿಂದ ಮಿರಮಿರನೆ ಮಿಂಚುತ್ತಿದೆ’ ಎಂದ ಆತ ಅಳುಕಿನಿಂದಲೇ.
‘ಸುಳ್ಳುಗಾರ! ಅವನಿಗೆ ಛಡಿ ಏಟುಕೊಟ್ಟು ಮೂರು ವರ್ಷ ಸೆರೆಮನೆಗೆ ಹಾಕಿ’ ಎಂದು ಅರಚಿದ ಸುಲ್ತಾನ. ಇದನ್ನೆಲ್ಲಾ ನೋಡುತ್ತಿದ್ದ ತನ್ನ ಸಲಹೆಗಾರ ಮುಲ್ಲಾ ನಸ್ರುದ್ದೀನನನ್ನು ಕರೆದು ಅವನನ್ನು ಅದೇ ಪ್ರಶ್ನೆ ಕೇಳಿದ.
‘ಸ್ವಾಮಿ, ನನಗೆ ಬಣ್ಣಗುರುಡು, ಬಣ್ಣಗಳನ್ನು ನಾನು ಗುರುತಿಸಲಾರೆ’ ಎಂದ ನಸ್ರುದ್ದೀನ್.
ಮೀನುಗಾರನಲ್ಲ
ಆ ರಾಜ್ಯದ ರಾಜ ಒಂದು ನಸ್ರುದ್ದೀನನನ್ನು ಕರೆಸಿ, ‘ನಿನ್ನಲ್ಲಿ ಅದ್ಭುತ ಶಕ್ತಿಯಿದೆ ಎಂದು ನೀನು ಹೇಳಿಕೊಂಡಿದ್ದೀಯಂತೆ! ನಿನ್ನ ಅದ್ಭುತ ಶಕ್ತಿಯಿಂದ ನಮ್ಮ ರಾಜ್ಯದ ಜನರಿಗೆ ಮೀನು ಹಿಡಿದುಕೊಡು ನೋಡೋಣ’ ಎಂದು ಸವಾಲೆಸೆದ.
‘ಸ್ವಾಮಿ, ನನ್ನಲ್ಲಿ ಅದ್ಭುತ ಶಕ್ತಿಯಿದೆ ಎಂದು ನಾನು ಹೇಳಿದ್ದು ನಿಜ. ಆದರೆ ನಾನೆಂದೂ ನಾನು ಮೀನುಗಾರನೆಂದು ಹೇಳಿಕೊಂಡಿಲ್ಲವಲ್ಲ..? ಎಂದ ನಸ್ರುದ್ದೀನ್.
ಆತುರದ ಪ್ರಾರ್ಥನೆ
ಒಂದು ದಿನ ನಸ್ರುದ್ದೀನ್ ಆತುರಾತುರವಾಗಿ ಮಸೀದಿಗೆ ಹೋಗಿ ದೇವರಿಗೆ ಆತುರಾತುರವಾಗಿಯೇ ಪ್ರಾರ್ಥನೆ ಮಾಡಿ ಹೊರಟಿದ್ದ. ಅದನ್ನು ನೋಡಿದ ಇಮಾಂ ಸಿಟ್ಟಿನಿಂದ ಅವನನ್ನು ಕರೆದು,
‘ಇದೇನು ನೀನು ಮಾಡಿದ್ದು ಪ್ರಾರ್ಥನೆಯೇ? ಪ್ರಾರ್ಥನೆ ಅಷ್ಟು ಆತುರಾತುರವಾಗಿ ಮಾಡಬಾರದು. ಇನ್ನೊಮ್ಮೆ ಮೊದಲಿನಿಂದ ನಿಧಾನವಾಗಿಯೇ ಪ್ರಾರ್ಥನೆ ಮಾಡು’ ಎಂದು ಗದರಿಸಿದ.
ನಸ್ರುದ್ದೀನ್ ಅದೇ ರೀತಿ ಮಾಡಿ ಹೊರಡಲು ಎದ್ದು ನಿಂತ.
‘ಈ ನಿನ್ನ ಎರಡನೇ ಪ್ರಾರ್ಥನೆ ಮೊದಲ ಪ್ರಾರ್ಥನೆಗಿಂತ ದೇವರಿಗೆ ಇಷ್ಟವಾಗಿರುತ್ತದಲ್ಲವೆ?’ ಕೇಳಿದ ಇಮಾಂ.
‘ಖಂಡಿತಾ ಇಲ್ಲ’ ಹೇಳಿದ ನಸ್ರುದ್ದೀನ್, ‘ಮೊದಲ ಪ್ರಾರ್ಥನೆ ಆತುರಾತುರವಾಗಿ ಮಾಡಿದ್ದರೂ ಅದು ದೇವರಿಗಾಗಿ ಮಾಡಿದೆ. ಎರಡನೇ ಪ್ರಾರ್ಥನೆ ನಿಧಾನವಾದದ್ದಾದರೂ ಅದು ಮಾಡಿದ್ದು ನಿನಗಾಗಿ.’
ಸಾಲದ ವಧುದಕ್ಷಿಣೆ
ನಸ್ರುದ್ದೀನ್ ಸರ್ಕಾರಕ್ಕೆ ಹಲವಾರು ವರ್ಷಗಳ ಕಾಲ ಕಂದಾಯವನ್ನೇ ಕಟ್ಟಿರಲಿಲ್ಲ. ಸರ್ಕಾರ ಹಲವಾರು ಬಾರಿ ಅವನಿಗೆ ಎಚ್ಚರಿಕೆ ನೀಡಿತ್ತು. ನಸ್ರುದ್ದೀನ್ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೊಂದು ದಿನ ಸರ್ಕಾರ ಅವನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿತು. ಅಷ್ಟಾದರೂ ಅವನು ಇನ್ನೂ ಸರ್ಕಾರಕ್ಕೆ ಹತ್ತು ಸಾವಿರ ರೂಪಾಯಿ ಬಾಕಿ ತೀರಿಸಬೇಕಿತ್ತು.
ರಾಜ ಅವನ್ನನು ಕರೆಸಿ ಬಾಕಿ ತೀರಿಸುವಂತೆ ಹೇಳಿದ.
‘ನನ್ನ ಮತ್ತು ನನ್ನ ಹೆಂಡತಿಯ ಹತ್ತಿರ ಕೇವಲ ಐದು ಸಾವಿರ ರೂಪಾಯಿ ಮಾತ್ರ ಉಳಿದಿದೆ. ಆದರೆ ಆ ಹಣ ನನ್ನ ಹೆಂಡತಿಯದು’ ಎಂದ ನಸ್ರುದ್ದೀನ್.
‘ಸರ್ಕಾರದ ನಿಯಮಾನುಸಾರ ಗಂಡ ಹೆಂಡತಿಯ ಆಸ್ತಿ ಇಬ್ಬರದೂ ಒಂದೆ. ಅದನ್ನೇ ಆಕೆ ಕಟ್ಟಬೇಕು’ ಎಂದ ರಾಜ.
‘ಅದೂ ಸಾಧ್ಯವಿಲ್ಲ’ ಎಂದ ನಸ್ರುದ್ದೀನ್.
‘ಏಕೆ ಸಾಧ್ಯವಿಲ್ಲ?’ ಕೇಳಿದ ರಾಜ.
‘ಏಕೆಂದರೆ ಆಕೆಯ ಬಳಿ ಇರುವ ಐದು ಸಾವಿರವೆಂದರೆ ನಾನು ಆಕೆಗೆ ಕೊಡಬೇಕಾಗಿರುವ ವಧುದಕ್ಷಿಣೆ. ಆ ವಧುದಕ್ಷಿಣೆಯನ್ನು ನಾನಿನ್ನೂ ಆಕೆಗೆ ಕೊಟ್ಟಿಲ್ಲ, ನಾನಿನ್ನೂ ಆಕೆಗೆ ಸಾಲಗಾರನಾಗಿದ್ದೇನೆ’ ಎಂದ ನಸ್ರುದ್ದೀನ್.
ಸೋಮವಾರ, ಮೇ 20, 2013
ಸೋಮವಾರ, ಮೇ 13, 2013
ಶನಿವಾರ, ಮೇ 04, 2013
ಮುಲ್ಲಾ ನಸ್ರುದ್ದೀನ್ ಕತೆಗಳ 16ನೇ ಕಂತು
ಏಪ್ರಿಲ್ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ 16ನೇ ಕಂತು.
ಮೂಢನಂಬಿಕೆ
ಆ ರಾಜ್ಯದ ರಾಜನಂಬಿಕೆ ಮೂಢನಂಬಿಕೆಗಳಲ್ಲಿ ಅತೀವ ವಿಶ್ವಾಸವಿತ್ತು. ಒಂದು ದಿನ ಆತ ಬೆಳಿಗ್ಗೆ ಬೇಟೆಗೆಂದು ಹೊರಟ. ದಾರಿಯಲ್ಲಿ ಮುಲ್ಲಾ ನಸ್ರುದ್ದೀನ್ ಎದುರಾದ.
‘ಹೋ. ಮುಲ್ಲಾಗಳು ಅಪಶಕುನದ ಸಂಕೇತ. ಹೋದ ಕೆಲಸ ಆಗುವುದಿಲ್ಲ. ಅವನನ್ನು ಕಟ್ಟಿ ಸಂಜೆಯವರೆಗೂ ಕೋಣೆಯಲ್ಲಿ ಕೂಡಿಹಾಕಿ’ ಎಂದ. ಸೈನಿಕರು ಅದೇ ರೀತಿ ಮಾಡಿದರು. ಆದರೆ ಆ ದಿನ ರಾಜನ ಬೇಟೆ ಭರ್ಜರಿಯಾಗಿಯೇ ನಡೆಯಿತು. ರಾಜನಿಗೆ ಸಂತೋಷವೂ ಆಯಿತು. ಸಂಜೆ ಮುಲ್ಲಾನನ್ನು ಬಂಧಮುಕ್ತಗೊಳಿಸಿ ಕರೆತರಲು ಹೇಳಿದನು. ಮುಲ್ಲಾ ಬಂದಾಗ, ‘ಕ್ಷಮಿಸು ನಸ್ರುದ್ದೀನ್. ನೀನು ಎದುರಾದದ್ದು ಅಪಶಕುನವೆಂದು ನಿನ್ನನ್ನು ಕೂಡಿಹಾಕಿದ್ದೆ. ಆದರೆ ಈ ದಿನದ ನನ್ನ ಬೇಟೆ ಚೆನ್ನಾಗಿಯೇ ನಡೆಯಿತು’ ಎಂದ ರಾಜ.
‘ನಾನು ಅಪಶಕುನವೇ? ನಾನು ಎದುರಾಗಿದ್ದಕ್ಕೆ ನಿಮಗೆ ಒಳ್ಳೆಯ ಬೇಟೆಯಾಯಿತು. ನನಗೆ ನೀವು ಎದುರಾದುದಕ್ಕೆ ಇಡೀ ದಿನ ಕತ್ತಲ ಕೋಣೆಯಲ್ಲಿ ನಾನು ಬಿದ್ದಿರಬೇಕಾಯ್ತು’ ಎಂದ ನಸ್ರುದ್ದೀನ್.
ದೇವರದಯೆ
ತಮ್ಮ ಹೊಸ ರಾಜನಿಗೆ ಏನಾದರೂ ಉಡುಗೊರೆ ಕೊಡೋಣವೆಂದು ನಸ್ರುದ್ದೀನ್ ಒಂದು ಚೀಲ ತುಂಬಾ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದ. ಅದನ್ನು ನೋಡಿದ ಪಕ್ಕದ ಮನೆಯಾತ,
‘ಏನದು ನಸ್ರುದ್ದೀನ್?’ ಎಂದು ಕೇಳಿದ.
‘ನಮ್ಮ ಹೊಸ ರಾಜನಿಗೆ ಉಡುಗೊರೆಯಾಗಿ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದೇನೆ’ ಎಂದ ನಸ್ರುದ್ದೀನ್.
‘ಏನು? ಆಲೂಗೆಡ್ಡೆಯೆ? ಅಂತಹ ದೊರೆಗೆ ಅದು ಒಳ್ಳೆಯ ಕೊಡುಗೆ ಅಲ್ಲ. ಇನ್ನೂ ಉತ್ತಮವಾದುದು ಸ್ಟ್ರಾಬೆರ್ರಿಯಂಥದನ್ನು ಕೊಡು’ ಎಂದ ನೆರೆಮನೆಯಾತ.
ಆಯಿತೆಂದು ಒಂದು ಚೀಲ ಸ್ಟ್ರಾಬೆರ್ರಿ ತುಂಬಿಕೊಂಡು ರಾಜನ ಅರಮನೆಗೆ ಹೋಗಿ ತನ್ನ ಕೊಡುಗೆ ನೀಡಿದ. ಸ್ಟ್ರಾಬೆರ್ರಿಯಂತಹ ನಿಕೃಷ್ಟ ವಸ್ತು ಕೊಡುಗೆಯಾಗಿ ನೀಡಿದ್ದನ್ನು ಕಂಡು ಸಿಟ್ಟಾದ ರಾಜ ಅವುಗಳಿಂದಲೇ ನಸ್ರುದ್ದೀನನನಿಗೆ ಹೊಡೆಯುವಂತೆ ರಾಜ ತನ್ನ ಸೈನಿಕರಿಗೆ ಆಜ್ಞೆ ಮಾಡಿದ. ಅವರು ಅವುಗಳಿಂದ ಹೊಡೆಯುವಾಗ ನಸ್ರುದ್ದೀನ್ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ. ಅದನ್ನು ನೋಡಿ ಅಚ್ಚರಿಗೊಂಡ ರಾಜ,
‘ನೀನು ನೀಡಿದ ಕೊಡುಗೆಯಿಂದಲೇ ನಿನ್ನನ್ನು ಹೊಡೆಯುತ್ತಿದ್ದರೂ ದೇವರಿಗೆ ಧನ್ಯವಾದ ಹೇಳುತ್ತಿದ್ದೀಯಲ್ಲಾ. ಏಕೆ ಮುಲ್ಲಾ?’ ಎಂದು ಕೇಳಿದ ರಾಜ.
‘ನಾನು ನಿಮಗೆ ಆಲೂಗೆಡ್ಡೆಯನ್ನು ಉಡುಗೊರೆಯಾಗಿ ಕೊಡಲಿಲ್ಲವಲ್ಲ, ಅದಕ್ಕೆ ದೇವರಿಗೆ ಧನ್ಯವಾದವನ್ನು ಹೇಳುತ್ತಿದ್ದೇನೆ’ ಎಂದ ನಸ್ರುದ್ದೀನ್.
ಒಂದು ಸೇರು ಹಸುವಿನ ಹಾಲು
ನಸ್ರುದ್ದೀನ್ ಹಾಲು ಮಾರುವವನ ಬಳಿ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಹೋಗಿ, ‘ಒಂದು ಸೇರು ಹಸುವಿನ ಹಾಲು ಕೊಡು’ ಎಂದ.
ಹಾಲಿನವ ಆ ಸಣ್ಣ ಪಾತ್ರೆ ನೋಡಿ, ‘ಅಷ್ಟು ಸಣ್ಣ ಪಾತ್ರೆಯಲ್ಲಿ ಒಂದು ಸೇರು ಹಸುವಿನ ಹಾಲು ಹಿಡಿಸುವುದಿಲ್ಲ’ ಎಂದ.
‘ಹೌದೆ, ಹಾಗಾದರೆ ಒಂದು ಸೇರು ಮೇಕೆಯ ಹಾಲೇ ಕೊಡು. ಅದಾದರೆ ಹಿಡಿಸಬಹುದೇನೋ’ ಎಂದ ನಸ್ರುದ್ದೀನ್.
ಉತ್ತಮ ಗೆಳೆಯ
ಗೆಳೆಯ: ‘ನಸ್ರುದ್ದೀನ್ ನಿನ್ನ ಅತ್ಯುತ್ತಮ ಗೆಳೆಯ ಯಾರು?’
ನಸ್ರುದ್ದೀನ್: ‘ಯಾರು ನನಗೆ ಅದ್ದೂರಿ ಭೋಜನ ಹಾಕಿಸುವರೋ ಅವನೇ ನನ್ನ ಅತ್ಯುತ್ತಮ ಗೆಳೆಯ’
ಗೆಳೆಯ: ‘ನಾನು ನಿನಗೆ ಅದ್ದೂರಿ ಭೋಜನ ಹಾಕಿಸುತ್ತೇನೆ. ಹಾಗಾದರೆ ನಾನು ನಿನ್ನ ಅತ್ಯುತ್ತಮ ಗೆಳೆಯ ತಾನೆ?’
ನಸ್ರುದ್ದೀನ್: ‘ಗೆಳೆತನ ಹಾಗೆಲ್ಲಾ ಸಾಲದ ರೂಪದಲ್ಲಿ ಕೊಡಲಾಗದು’
ಅಪರೂಪ
ಪಕ್ಕದ ರಾಜ್ಯದ ಪ್ರಧಾನ ಮಂತ್ರಿ ಆ ಊರಿಗೆ ಬಂದಿದ್ದವನು ನಸ್ರುದ್ದೀನ್ ನಡೆಸುತ್ತಿದ್ದ ಉಪಾಹಾರ ಗೃಹ ಅತ್ಯಂತ ಜನಪ್ರಿಯವೆಂದು ಕೇಳಿ ಅಲ್ಲಿಗೆ ಭೋಜನಕ್ಕೆ ಬಂದನು. ಅಲ್ಲಿ ರುಚಿಕರವಾದ ಕುರಿಯ ಮಾಂಸದ ಊಟ ಮಾಡಿ ಆ ಊಟಕ್ಕೆ ಎಷ್ಟು ಹಣ ಕೊಡಬೇಕೆಂದು ಉಪಾಹಾರ ಗೃಹದ ಮಾಲೀಕನಾದ ನಸ್ರುದ್ದೀನನನ್ನು ಕೇಳಿದನು.
‘ಐವತ್ತು ಚಿನ್ನದ ನಾಣ್ಯಗಳು’ ಎಂದ ನಸ್ರುದ್ದೀನ್.
‘ಐವತ್ತು ಚಿನ್ನದ ನಾಣ್ಯಗಳೇ? ದರ ತೀರಾ ಹೆಚ್ಚಾಯಿತಲ್ಲ? ಏಕೆ ಈ ರಾಜ್ಯದಲ್ಲಿ ಕುರಿಗಳು ಅಷ್ಟು ಅಪರೂಪವೇ?’ ಕೇಳಿದ ಪ್ರಧಾನ ಮಂತ್ರಿ.
‘ಕುರಿಗಳೇನು ಅಪರೂಪವಲ್ಲ, ಆದರೆ ಭೋಜನಕ್ಕೆ ಭೇಟಿ ನೀಡುವ ಪ್ರಧಾನ ಮಂತ್ರಿಗಳು ಅಪರೂಪ’ ಎಂದ ನಸ್ರುದ್ದೀನ್.
ಕೆಂಪನೆ ಹಣ್ಣು
ನಸ್ರುದ್ದೀನ್ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದ. ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಆತನಿಗೆ ಹಸಿವಾಗುತ್ತಿತ್ತು. ಏನಾದರೂ ತಿನ್ನಬೇಕೆಂದು ಯೋಚಿಸುತ್ತಿರುವಾಗ ಯಾರೋ ಕೆಂಪನೆ ಹಣ್ಣುಗಳನ್ನು ಮಾರುತ್ತಿದ್ದರು. ಆ ಹಣ್ಣುಗಳು ಏನೆಂದು ತಿಳಿದಿರದಿದ್ದರೂ ನೋಡಲು ಚೆನ್ನಾಗಿ ಕಾಣುತ್ತಿದ್ದುದರಿಂದ ಎರಡು ಸೇರು ಹಾಕಿಸಿಕೊಂಡು ಮರದ ಕೆಳಗೆ ಕೂತು ತಿನ್ನತೊಡಗಿದ. ಕೂಡಲೇ ಖಾರದಿಂದಾಗಿ ನಾಲಿಗೆ ಉರಿಯತೊಡಗಿತು, ಕಣ್ಣು ಕೆಂಪಾಗಿ ಕಣ್ಣಲಿ ನೀರು ಹರಿಯತೊಡಗಿತು ಹಾಗೂ ಬೆವರು ಸುರಿಯತೊಡಗಿತು.
ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬಾತನನ್ನು ತಾನು ತಿನ್ನುತ್ತಿರುವುದು ಯಾವ ಹಣ್ಣು, ಏಕೆ ಅವು ಅಷ್ಟೊಂದು ಖಾರವಾಗಿವೆ ಎಂದು ಕೇಳಿದ.
‘ಅಯ್ಯೋ, ಅವು ಹಣ್ಣಲ್ಲ. ಅವು ಮೆಣಸಿನಕಾಯಿಗಳು. ಅವುಗಳನ್ನು ಯಾರೂ ನೇರವಾಗಿ ತಿನ್ನುವುದಿಲ್ಲ, ಅವುಗಳನ್ನು ಸ್ವಲ್ಪ ಸ್ವಲ್ಪ ಆಹಾರದಲ್ಲಿ ಬಳಸುತ್ತಾರೆ’ ಎಂದ ಒಬ್ಬ ಹಾದಿಹೋಕ.
ಅದನ್ನು ಕೇಳಿದ ನಂತರವೂ ನಸ್ರುದ್ದೀನ್ ಅದನ್ನು ಕಷ್ಟದಲ್ಲಿ ತಿನ್ನತೊಡಗಿದ. ಅದನ್ನು ನೋಡಿದ ಹಾದಿಹೋಕ,
‘ಖಾರವೆಂದು ತಿಳಿದನಂತರವೂ ಏಕೆ ತಿನ್ನುತ್ತಿದ್ದೀರಿ?’ ಎಂದು ಕೇಳಿದ.
‘ಏನು ಮಾಡಲಿ? ಅದಕ್ಕೆ ಈಗಾಗಲೇ ನಾನು ಹಣವನ್ನು ಕೊಟ್ಟುಬಿಟ್ಟಿದ್ದೇನಲ್ಲ! ನಾನೀಗ ತಿನ್ನುತ್ತಿರುವುದು ಯಾವುದೇ ಹಣ್ಣನಲ್ಲ, ನನ್ನ ಹಣವನ್ನು’ ಎಂದ ನಸ್ರುದ್ದೀನ್.
ನಾನು ಯಾರು?
ನಸ್ರುದ್ದೀನ್ ಯಾವುದೋ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋಗಬೇಕಾಯ್ತು. ಅಷ್ಟು ದೊಡ್ಡ ಪಟ್ಟಣ, ಅಷ್ಟೊಂದು ಜನಜಂಗುಳಿ ಆತ ಹಿಂದೆಂದೂ ನೋಡಿರಲಿಲ್ಲ. ಆ ಜನರ ಮಧ್ಯೆ ತಾನು ಕಳೆದುಹೋಗಬಹುದು ಹಾಗೂ ತನ್ನನ್ನೇ ತಾನು ಗುರುತಿಸಲು ಸಾಧ್ಯವಾಗದಿರಬಹುದು ಎಂದನ್ನಿಸಿತು ಆತನಿಗೆ. ರಾತ್ರಿ ಛತ್ರವೊಂದರಲ್ಲಿ ಹಲವರು ಜನರ ನಡುವೆ ಮಲಗುವಾಗ ಬೆಳಿಗ್ಗೆ ಎದ್ದನಂತರ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗಲೆಂದು ತಾನು ತಂದಿದ್ದ ಚೀಲವನ್ನು ತನ್ನ ಕಾಲಿಗೆ ಕಟ್ಟಿಕೊಂಡ. ಅದನ್ನು ಗಮನಿಸುತ್ತಿದ್ದ ಒಬ್ಬಾತ ತಮಾಷೆ ಮಾಡೋಣವೆಂದು ನಸ್ರುದ್ದೀನ್ ನಿದ್ರಿಸಿದ ನಂತರ ಆ ಚೀಲವನ್ನು ಬಿಚ್ಚಿ ತನ್ನ ಕಾಲಿಗೆ ಕಟ್ಟಿಕೊಂಡು ಮಲಗಿದ. ಬೆಳಗ್ಗೆ ಎದ್ದ ನಸ್ರುದ್ದೀನ್ ತನ್ನ ಚೀಲ ಮತ್ತೊಬ್ಬ ವ್ಯಕ್ತಿಯ ಕಾಲಲ್ಲಿರುವುದನ್ನು ಕಂಡು,
‘ಹೋ, ನಾನೇ ಆ ವ್ಯಕ್ತಿ’ ಎಂದುಕೊಂಡ.
ತಕ್ಷಣವೇ ಏನೋ ಹೊಳೆದಂತಾಗಿ ಗಾಬರಿಯಿಂದ ಆ ವ್ಯಕ್ತಿಯನ್ನು ಎಬ್ಬಿಸಿ,
‘ಹೇ! ನೀನು ನಾನಾದರೆ, ನಾನು ಯಾರು?’ ಎಂದು ಅರಚಿದ.

ಏಕೆ ಹೋದೆ?
ನಸ್ರುದ್ದೀನ್ ಸ್ಮಶಾನದಲ್ಲಿ ಒಂದು ಸಮಾಧಿಯ ಮುಂದೆ ಕೂತು ರೋಧಿಸುತ್ತಿದ್ದ.
‘ಅಯ್ಯೋ! ಇಷ್ಟು ಬೇಗ ನಿನಗೆ ಸಾವು ಬರಬಾರದಿತ್ತು! ನನ್ನನ್ನು ಈ ದುಃಸ್ಥಿತಿಗೆ ತಳ್ಳಿ ಏಕೆ ಬಿಟ್ಟು ಹೋದೆ?’ ಎಂದು ಅಳುತ್ತಿದ್ದ.
ಅಲ್ಲೇ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ನಸ್ರುದ್ದೀನನನ್ನು ಕಂಡು ಮರುಕ ಹುಟ್ಟಿ, ‘ಏಕಪ್ಪಾ ಅಳುತ್ತಿದ್ದೀಯ? ಯಾರ ಸಮಾಧಿಯಿದು? ನಿನ್ನ ಮಗನದೆ?’ ಎಂದು ಕೇಳಿದ.
‘ಅಲ್ಲಾ, ಈ ಸಮಾಧಿ ನನ್ನ ಪತ್ನಿಯ ಮೊದಲ ಗಂಡನದು’ ಎಂದ ನಸ್ರುದ್ದೀನ್.
ಸರಿಯಾದ ಪದ
ನಸ್ರುದ್ದೀನ್ ಮತ್ತು ಆತನ ಗೆಳೆಯ ಒಂದು ಸಂಜೆ ನದಿಯ ದಡದಲ್ಲಿ ನಡೆದು ಹೋಗುತ್ತಿದ್ದಾಗ ನದಿಯ ಪ್ರವಾಹದಲ್ಲಿ ಒಬ್ಬಾತ ಸಿಕ್ಕಿಬಿದ್ದು ಮರದ ಬೇರೊಂದನ್ನು ಹಿಡಿದು ಸಹಾಯಕ್ಕಾಗಿ ಕೂಗುತ್ತಿದ್ದ. ಅದನ್ನು ನೋಡಿದ ನಸ್ರುದ್ದೀನ್ ಕೂಡಲೇ ಆತನ ಬಳಿಗೆ ಹೋಗಿ ತನ್ನ ಕೈ ಚಾಚಿ,
‘ನಿನ್ನ ಕೈ ಕೊಡು, ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ. ಆತ ಕೈ ಕೊಡಲೇ ಇಲ್ಲ.
‘ನಿನ್ನ ಉದ್ಯೋಗ ಯಾವುದು?’ ಎಂದು ನಸ್ರುದ್ದೀನ್ ಆ ವ್ಯಕ್ತಿಯನ್ನು ಕೇಳಿದ.
‘ನಾನೊಬ್ಬ ಕಂದಾಯ ವಸೂಲಿಗಾರ’ ಎಂದ ಆ ವ್ಯಕ್ತಿ.
‘ಹೌದೆ. ಹಾಗಾದರೆ ನನ್ನ ಕೈ ತಗೋ. ಅದನ್ನು ಹಿಡಿದುಕೊ, ನಿನ್ನನ್ನು ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ ನಸ್ರುದ್ದೀನ್. ಆ ವ್ಯಕ್ತಿ ನಸ್ರುದ್ದೀನ್ ಚಾಚಿದ ಕೈ ಹಿಡಿದುಕೊಂಡ. ನಸ್ರುದ್ದೀನ್ ಆತನನ್ನು ಮೇಲಕ್ಕೆಳೆದು ಆತನನ್ನು ಬದುಕಿಸಿದ. ಅಲ್ಲಿಂದ ಹೊರಟಂತೆ ನಸ್ರುದ್ದೀನ್ ತನ್ನ ಗೆಳೆಯನಿಗೆ ಹೇಳಿದ,
‘ಈ ಕಂದಾಯ ವಸೂಲಿಗಾರರಿಗೆ ಕೊಡು ಎಂದರೆ ಅರ್ಥವಾಗುವುದಿಲ್ಲ, ತಗೋ ಎಂದರೆ ಮಾತ್ರ ಅರ್ಥವಾಗುತ್ತದೆ’ ಎಂದ.
ಚಿತ್ರಗಳು: ಮುರಳೀಧರ ರಾಠೋಡ್
ಮೂಢನಂಬಿಕೆ
ಆ ರಾಜ್ಯದ ರಾಜನಂಬಿಕೆ ಮೂಢನಂಬಿಕೆಗಳಲ್ಲಿ ಅತೀವ ವಿಶ್ವಾಸವಿತ್ತು. ಒಂದು ದಿನ ಆತ ಬೆಳಿಗ್ಗೆ ಬೇಟೆಗೆಂದು ಹೊರಟ. ದಾರಿಯಲ್ಲಿ ಮುಲ್ಲಾ ನಸ್ರುದ್ದೀನ್ ಎದುರಾದ.
‘ಹೋ. ಮುಲ್ಲಾಗಳು ಅಪಶಕುನದ ಸಂಕೇತ. ಹೋದ ಕೆಲಸ ಆಗುವುದಿಲ್ಲ. ಅವನನ್ನು ಕಟ್ಟಿ ಸಂಜೆಯವರೆಗೂ ಕೋಣೆಯಲ್ಲಿ ಕೂಡಿಹಾಕಿ’ ಎಂದ. ಸೈನಿಕರು ಅದೇ ರೀತಿ ಮಾಡಿದರು. ಆದರೆ ಆ ದಿನ ರಾಜನ ಬೇಟೆ ಭರ್ಜರಿಯಾಗಿಯೇ ನಡೆಯಿತು. ರಾಜನಿಗೆ ಸಂತೋಷವೂ ಆಯಿತು. ಸಂಜೆ ಮುಲ್ಲಾನನ್ನು ಬಂಧಮುಕ್ತಗೊಳಿಸಿ ಕರೆತರಲು ಹೇಳಿದನು. ಮುಲ್ಲಾ ಬಂದಾಗ, ‘ಕ್ಷಮಿಸು ನಸ್ರುದ್ದೀನ್. ನೀನು ಎದುರಾದದ್ದು ಅಪಶಕುನವೆಂದು ನಿನ್ನನ್ನು ಕೂಡಿಹಾಕಿದ್ದೆ. ಆದರೆ ಈ ದಿನದ ನನ್ನ ಬೇಟೆ ಚೆನ್ನಾಗಿಯೇ ನಡೆಯಿತು’ ಎಂದ ರಾಜ.
‘ನಾನು ಅಪಶಕುನವೇ? ನಾನು ಎದುರಾಗಿದ್ದಕ್ಕೆ ನಿಮಗೆ ಒಳ್ಳೆಯ ಬೇಟೆಯಾಯಿತು. ನನಗೆ ನೀವು ಎದುರಾದುದಕ್ಕೆ ಇಡೀ ದಿನ ಕತ್ತಲ ಕೋಣೆಯಲ್ಲಿ ನಾನು ಬಿದ್ದಿರಬೇಕಾಯ್ತು’ ಎಂದ ನಸ್ರುದ್ದೀನ್.
ದೇವರದಯೆ
ತಮ್ಮ ಹೊಸ ರಾಜನಿಗೆ ಏನಾದರೂ ಉಡುಗೊರೆ ಕೊಡೋಣವೆಂದು ನಸ್ರುದ್ದೀನ್ ಒಂದು ಚೀಲ ತುಂಬಾ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದ. ಅದನ್ನು ನೋಡಿದ ಪಕ್ಕದ ಮನೆಯಾತ,
‘ಏನದು ನಸ್ರುದ್ದೀನ್?’ ಎಂದು ಕೇಳಿದ.
‘ನಮ್ಮ ಹೊಸ ರಾಜನಿಗೆ ಉಡುಗೊರೆಯಾಗಿ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದೇನೆ’ ಎಂದ ನಸ್ರುದ್ದೀನ್.
‘ಏನು? ಆಲೂಗೆಡ್ಡೆಯೆ? ಅಂತಹ ದೊರೆಗೆ ಅದು ಒಳ್ಳೆಯ ಕೊಡುಗೆ ಅಲ್ಲ. ಇನ್ನೂ ಉತ್ತಮವಾದುದು ಸ್ಟ್ರಾಬೆರ್ರಿಯಂಥದನ್ನು ಕೊಡು’ ಎಂದ ನೆರೆಮನೆಯಾತ.
ಆಯಿತೆಂದು ಒಂದು ಚೀಲ ಸ್ಟ್ರಾಬೆರ್ರಿ ತುಂಬಿಕೊಂಡು ರಾಜನ ಅರಮನೆಗೆ ಹೋಗಿ ತನ್ನ ಕೊಡುಗೆ ನೀಡಿದ. ಸ್ಟ್ರಾಬೆರ್ರಿಯಂತಹ ನಿಕೃಷ್ಟ ವಸ್ತು ಕೊಡುಗೆಯಾಗಿ ನೀಡಿದ್ದನ್ನು ಕಂಡು ಸಿಟ್ಟಾದ ರಾಜ ಅವುಗಳಿಂದಲೇ ನಸ್ರುದ್ದೀನನನಿಗೆ ಹೊಡೆಯುವಂತೆ ರಾಜ ತನ್ನ ಸೈನಿಕರಿಗೆ ಆಜ್ಞೆ ಮಾಡಿದ. ಅವರು ಅವುಗಳಿಂದ ಹೊಡೆಯುವಾಗ ನಸ್ರುದ್ದೀನ್ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ. ಅದನ್ನು ನೋಡಿ ಅಚ್ಚರಿಗೊಂಡ ರಾಜ,
‘ನೀನು ನೀಡಿದ ಕೊಡುಗೆಯಿಂದಲೇ ನಿನ್ನನ್ನು ಹೊಡೆಯುತ್ತಿದ್ದರೂ ದೇವರಿಗೆ ಧನ್ಯವಾದ ಹೇಳುತ್ತಿದ್ದೀಯಲ್ಲಾ. ಏಕೆ ಮುಲ್ಲಾ?’ ಎಂದು ಕೇಳಿದ ರಾಜ.
‘ನಾನು ನಿಮಗೆ ಆಲೂಗೆಡ್ಡೆಯನ್ನು ಉಡುಗೊರೆಯಾಗಿ ಕೊಡಲಿಲ್ಲವಲ್ಲ, ಅದಕ್ಕೆ ದೇವರಿಗೆ ಧನ್ಯವಾದವನ್ನು ಹೇಳುತ್ತಿದ್ದೇನೆ’ ಎಂದ ನಸ್ರುದ್ದೀನ್.
ಒಂದು ಸೇರು ಹಸುವಿನ ಹಾಲು
ನಸ್ರುದ್ದೀನ್ ಹಾಲು ಮಾರುವವನ ಬಳಿ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಹೋಗಿ, ‘ಒಂದು ಸೇರು ಹಸುವಿನ ಹಾಲು ಕೊಡು’ ಎಂದ.
ಹಾಲಿನವ ಆ ಸಣ್ಣ ಪಾತ್ರೆ ನೋಡಿ, ‘ಅಷ್ಟು ಸಣ್ಣ ಪಾತ್ರೆಯಲ್ಲಿ ಒಂದು ಸೇರು ಹಸುವಿನ ಹಾಲು ಹಿಡಿಸುವುದಿಲ್ಲ’ ಎಂದ.
‘ಹೌದೆ, ಹಾಗಾದರೆ ಒಂದು ಸೇರು ಮೇಕೆಯ ಹಾಲೇ ಕೊಡು. ಅದಾದರೆ ಹಿಡಿಸಬಹುದೇನೋ’ ಎಂದ ನಸ್ರುದ್ದೀನ್.
ಉತ್ತಮ ಗೆಳೆಯ
ಗೆಳೆಯ: ‘ನಸ್ರುದ್ದೀನ್ ನಿನ್ನ ಅತ್ಯುತ್ತಮ ಗೆಳೆಯ ಯಾರು?’
ನಸ್ರುದ್ದೀನ್: ‘ಯಾರು ನನಗೆ ಅದ್ದೂರಿ ಭೋಜನ ಹಾಕಿಸುವರೋ ಅವನೇ ನನ್ನ ಅತ್ಯುತ್ತಮ ಗೆಳೆಯ’
ಗೆಳೆಯ: ‘ನಾನು ನಿನಗೆ ಅದ್ದೂರಿ ಭೋಜನ ಹಾಕಿಸುತ್ತೇನೆ. ಹಾಗಾದರೆ ನಾನು ನಿನ್ನ ಅತ್ಯುತ್ತಮ ಗೆಳೆಯ ತಾನೆ?’
ನಸ್ರುದ್ದೀನ್: ‘ಗೆಳೆತನ ಹಾಗೆಲ್ಲಾ ಸಾಲದ ರೂಪದಲ್ಲಿ ಕೊಡಲಾಗದು’
ಅಪರೂಪ
ಪಕ್ಕದ ರಾಜ್ಯದ ಪ್ರಧಾನ ಮಂತ್ರಿ ಆ ಊರಿಗೆ ಬಂದಿದ್ದವನು ನಸ್ರುದ್ದೀನ್ ನಡೆಸುತ್ತಿದ್ದ ಉಪಾಹಾರ ಗೃಹ ಅತ್ಯಂತ ಜನಪ್ರಿಯವೆಂದು ಕೇಳಿ ಅಲ್ಲಿಗೆ ಭೋಜನಕ್ಕೆ ಬಂದನು. ಅಲ್ಲಿ ರುಚಿಕರವಾದ ಕುರಿಯ ಮಾಂಸದ ಊಟ ಮಾಡಿ ಆ ಊಟಕ್ಕೆ ಎಷ್ಟು ಹಣ ಕೊಡಬೇಕೆಂದು ಉಪಾಹಾರ ಗೃಹದ ಮಾಲೀಕನಾದ ನಸ್ರುದ್ದೀನನನ್ನು ಕೇಳಿದನು.
‘ಐವತ್ತು ಚಿನ್ನದ ನಾಣ್ಯಗಳು’ ಎಂದ ನಸ್ರುದ್ದೀನ್.
‘ಐವತ್ತು ಚಿನ್ನದ ನಾಣ್ಯಗಳೇ? ದರ ತೀರಾ ಹೆಚ್ಚಾಯಿತಲ್ಲ? ಏಕೆ ಈ ರಾಜ್ಯದಲ್ಲಿ ಕುರಿಗಳು ಅಷ್ಟು ಅಪರೂಪವೇ?’ ಕೇಳಿದ ಪ್ರಧಾನ ಮಂತ್ರಿ.
‘ಕುರಿಗಳೇನು ಅಪರೂಪವಲ್ಲ, ಆದರೆ ಭೋಜನಕ್ಕೆ ಭೇಟಿ ನೀಡುವ ಪ್ರಧಾನ ಮಂತ್ರಿಗಳು ಅಪರೂಪ’ ಎಂದ ನಸ್ರುದ್ದೀನ್.
ಕೆಂಪನೆ ಹಣ್ಣು
ನಸ್ರುದ್ದೀನ್ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದ. ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಆತನಿಗೆ ಹಸಿವಾಗುತ್ತಿತ್ತು. ಏನಾದರೂ ತಿನ್ನಬೇಕೆಂದು ಯೋಚಿಸುತ್ತಿರುವಾಗ ಯಾರೋ ಕೆಂಪನೆ ಹಣ್ಣುಗಳನ್ನು ಮಾರುತ್ತಿದ್ದರು. ಆ ಹಣ್ಣುಗಳು ಏನೆಂದು ತಿಳಿದಿರದಿದ್ದರೂ ನೋಡಲು ಚೆನ್ನಾಗಿ ಕಾಣುತ್ತಿದ್ದುದರಿಂದ ಎರಡು ಸೇರು ಹಾಕಿಸಿಕೊಂಡು ಮರದ ಕೆಳಗೆ ಕೂತು ತಿನ್ನತೊಡಗಿದ. ಕೂಡಲೇ ಖಾರದಿಂದಾಗಿ ನಾಲಿಗೆ ಉರಿಯತೊಡಗಿತು, ಕಣ್ಣು ಕೆಂಪಾಗಿ ಕಣ್ಣಲಿ ನೀರು ಹರಿಯತೊಡಗಿತು ಹಾಗೂ ಬೆವರು ಸುರಿಯತೊಡಗಿತು.
ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬಾತನನ್ನು ತಾನು ತಿನ್ನುತ್ತಿರುವುದು ಯಾವ ಹಣ್ಣು, ಏಕೆ ಅವು ಅಷ್ಟೊಂದು ಖಾರವಾಗಿವೆ ಎಂದು ಕೇಳಿದ.
‘ಅಯ್ಯೋ, ಅವು ಹಣ್ಣಲ್ಲ. ಅವು ಮೆಣಸಿನಕಾಯಿಗಳು. ಅವುಗಳನ್ನು ಯಾರೂ ನೇರವಾಗಿ ತಿನ್ನುವುದಿಲ್ಲ, ಅವುಗಳನ್ನು ಸ್ವಲ್ಪ ಸ್ವಲ್ಪ ಆಹಾರದಲ್ಲಿ ಬಳಸುತ್ತಾರೆ’ ಎಂದ ಒಬ್ಬ ಹಾದಿಹೋಕ.
ಅದನ್ನು ಕೇಳಿದ ನಂತರವೂ ನಸ್ರುದ್ದೀನ್ ಅದನ್ನು ಕಷ್ಟದಲ್ಲಿ ತಿನ್ನತೊಡಗಿದ. ಅದನ್ನು ನೋಡಿದ ಹಾದಿಹೋಕ,
‘ಖಾರವೆಂದು ತಿಳಿದನಂತರವೂ ಏಕೆ ತಿನ್ನುತ್ತಿದ್ದೀರಿ?’ ಎಂದು ಕೇಳಿದ.
‘ಏನು ಮಾಡಲಿ? ಅದಕ್ಕೆ ಈಗಾಗಲೇ ನಾನು ಹಣವನ್ನು ಕೊಟ್ಟುಬಿಟ್ಟಿದ್ದೇನಲ್ಲ! ನಾನೀಗ ತಿನ್ನುತ್ತಿರುವುದು ಯಾವುದೇ ಹಣ್ಣನಲ್ಲ, ನನ್ನ ಹಣವನ್ನು’ ಎಂದ ನಸ್ರುದ್ದೀನ್.
ನಾನು ಯಾರು?
ನಸ್ರುದ್ದೀನ್ ಯಾವುದೋ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋಗಬೇಕಾಯ್ತು. ಅಷ್ಟು ದೊಡ್ಡ ಪಟ್ಟಣ, ಅಷ್ಟೊಂದು ಜನಜಂಗುಳಿ ಆತ ಹಿಂದೆಂದೂ ನೋಡಿರಲಿಲ್ಲ. ಆ ಜನರ ಮಧ್ಯೆ ತಾನು ಕಳೆದುಹೋಗಬಹುದು ಹಾಗೂ ತನ್ನನ್ನೇ ತಾನು ಗುರುತಿಸಲು ಸಾಧ್ಯವಾಗದಿರಬಹುದು ಎಂದನ್ನಿಸಿತು ಆತನಿಗೆ. ರಾತ್ರಿ ಛತ್ರವೊಂದರಲ್ಲಿ ಹಲವರು ಜನರ ನಡುವೆ ಮಲಗುವಾಗ ಬೆಳಿಗ್ಗೆ ಎದ್ದನಂತರ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗಲೆಂದು ತಾನು ತಂದಿದ್ದ ಚೀಲವನ್ನು ತನ್ನ ಕಾಲಿಗೆ ಕಟ್ಟಿಕೊಂಡ. ಅದನ್ನು ಗಮನಿಸುತ್ತಿದ್ದ ಒಬ್ಬಾತ ತಮಾಷೆ ಮಾಡೋಣವೆಂದು ನಸ್ರುದ್ದೀನ್ ನಿದ್ರಿಸಿದ ನಂತರ ಆ ಚೀಲವನ್ನು ಬಿಚ್ಚಿ ತನ್ನ ಕಾಲಿಗೆ ಕಟ್ಟಿಕೊಂಡು ಮಲಗಿದ. ಬೆಳಗ್ಗೆ ಎದ್ದ ನಸ್ರುದ್ದೀನ್ ತನ್ನ ಚೀಲ ಮತ್ತೊಬ್ಬ ವ್ಯಕ್ತಿಯ ಕಾಲಲ್ಲಿರುವುದನ್ನು ಕಂಡು,
‘ಹೋ, ನಾನೇ ಆ ವ್ಯಕ್ತಿ’ ಎಂದುಕೊಂಡ.
ತಕ್ಷಣವೇ ಏನೋ ಹೊಳೆದಂತಾಗಿ ಗಾಬರಿಯಿಂದ ಆ ವ್ಯಕ್ತಿಯನ್ನು ಎಬ್ಬಿಸಿ,
‘ಹೇ! ನೀನು ನಾನಾದರೆ, ನಾನು ಯಾರು?’ ಎಂದು ಅರಚಿದ.

ಏಕೆ ಹೋದೆ?
ನಸ್ರುದ್ದೀನ್ ಸ್ಮಶಾನದಲ್ಲಿ ಒಂದು ಸಮಾಧಿಯ ಮುಂದೆ ಕೂತು ರೋಧಿಸುತ್ತಿದ್ದ.
‘ಅಯ್ಯೋ! ಇಷ್ಟು ಬೇಗ ನಿನಗೆ ಸಾವು ಬರಬಾರದಿತ್ತು! ನನ್ನನ್ನು ಈ ದುಃಸ್ಥಿತಿಗೆ ತಳ್ಳಿ ಏಕೆ ಬಿಟ್ಟು ಹೋದೆ?’ ಎಂದು ಅಳುತ್ತಿದ್ದ.
ಅಲ್ಲೇ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ನಸ್ರುದ್ದೀನನನ್ನು ಕಂಡು ಮರುಕ ಹುಟ್ಟಿ, ‘ಏಕಪ್ಪಾ ಅಳುತ್ತಿದ್ದೀಯ? ಯಾರ ಸಮಾಧಿಯಿದು? ನಿನ್ನ ಮಗನದೆ?’ ಎಂದು ಕೇಳಿದ.
‘ಅಲ್ಲಾ, ಈ ಸಮಾಧಿ ನನ್ನ ಪತ್ನಿಯ ಮೊದಲ ಗಂಡನದು’ ಎಂದ ನಸ್ರುದ್ದೀನ್.
ಸರಿಯಾದ ಪದ
ನಸ್ರುದ್ದೀನ್ ಮತ್ತು ಆತನ ಗೆಳೆಯ ಒಂದು ಸಂಜೆ ನದಿಯ ದಡದಲ್ಲಿ ನಡೆದು ಹೋಗುತ್ತಿದ್ದಾಗ ನದಿಯ ಪ್ರವಾಹದಲ್ಲಿ ಒಬ್ಬಾತ ಸಿಕ್ಕಿಬಿದ್ದು ಮರದ ಬೇರೊಂದನ್ನು ಹಿಡಿದು ಸಹಾಯಕ್ಕಾಗಿ ಕೂಗುತ್ತಿದ್ದ. ಅದನ್ನು ನೋಡಿದ ನಸ್ರುದ್ದೀನ್ ಕೂಡಲೇ ಆತನ ಬಳಿಗೆ ಹೋಗಿ ತನ್ನ ಕೈ ಚಾಚಿ,
‘ನಿನ್ನ ಕೈ ಕೊಡು, ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ. ಆತ ಕೈ ಕೊಡಲೇ ಇಲ್ಲ.
‘ನಿನ್ನ ಉದ್ಯೋಗ ಯಾವುದು?’ ಎಂದು ನಸ್ರುದ್ದೀನ್ ಆ ವ್ಯಕ್ತಿಯನ್ನು ಕೇಳಿದ.
‘ನಾನೊಬ್ಬ ಕಂದಾಯ ವಸೂಲಿಗಾರ’ ಎಂದ ಆ ವ್ಯಕ್ತಿ.
‘ಹೌದೆ. ಹಾಗಾದರೆ ನನ್ನ ಕೈ ತಗೋ. ಅದನ್ನು ಹಿಡಿದುಕೊ, ನಿನ್ನನ್ನು ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ ನಸ್ರುದ್ದೀನ್. ಆ ವ್ಯಕ್ತಿ ನಸ್ರುದ್ದೀನ್ ಚಾಚಿದ ಕೈ ಹಿಡಿದುಕೊಂಡ. ನಸ್ರುದ್ದೀನ್ ಆತನನ್ನು ಮೇಲಕ್ಕೆಳೆದು ಆತನನ್ನು ಬದುಕಿಸಿದ. ಅಲ್ಲಿಂದ ಹೊರಟಂತೆ ನಸ್ರುದ್ದೀನ್ ತನ್ನ ಗೆಳೆಯನಿಗೆ ಹೇಳಿದ,
‘ಈ ಕಂದಾಯ ವಸೂಲಿಗಾರರಿಗೆ ಕೊಡು ಎಂದರೆ ಅರ್ಥವಾಗುವುದಿಲ್ಲ, ತಗೋ ಎಂದರೆ ಮಾತ್ರ ಅರ್ಥವಾಗುತ್ತದೆ’ ಎಂದ.
ಬುಧವಾರ, ಮೇ 01, 2013
ಶುಕ್ರವಾರ, ಏಪ್ರಿಲ್ 26, 2013
ಮಂಗಳವಾರ, ಏಪ್ರಿಲ್ 16, 2013
ವೋಟಿಂಗ್ ಮೆಶೀನ್ ಕಂ ATM
ಶನಿವಾರ, ಏಪ್ರಿಲ್ 13, 2013
ಹೈಪೇಷಿಯಾಳ ನೆನಪಿನ ಅಲೆಕ್ಸಾಂಡ್ರಿಯ
`ವಿಜಯವಾಣಿ’ಯ
ಯುಗಾದಿ ವಿಶೇಷಾಂಕ 2013ರಲ್ಲಿ ಪ್ರಕಟವಾದ ನನ್ನ ಈಜಿಪ್ಟ್ ಪ್ರವಾಸ ಕಥನದ ಮೊದಲ ಲೇಖನ.
ಹೈಪೇಷಿಯಾಳ
ನೆನಪಿನ ಅಲೆಕ್ಸಾಂಡ್ರಿಯ
ಬಾಲ್ಯದಿಂದಲೂ
ಈಜಿಪ್ಟ್ ಎಂದರೆ ಪಿರಮಿಡ್ಗಳು ಮತ್ತು ಸ್ಫಿಂಕ್ಸ್ ಎಂದಷ್ಟೇ ತಿಳಿದಿದ್ದ ಹಾಗೂ ಅದನ್ನು ಒಂದಲ್ಲ ಒಂದು
ದಿನ ನೋಡುತ್ತೇನೆಂದು ಊಹಿಸಿಕೊಂಡೂ ಇರಲಿಲ್ಲ. ಒಂದೇ ತಿಂಗಳಿನಲ್ಲಿ ಹೊರಡುವುದೆಂದು ತೀರ್ಮಾನಿಸಿ ಒಂದು
ದಿನ ಮಧ್ಯಾಹ್ನ ಕೈರೋದ ವಿಮಾನ ನಿಲ್ದಾಣದಲ್ಲಿ ಇಳಿದೆವು. ನವೆಂಬರ್ ಆದದ್ದರಿಂದ ಈಜಿಪ್ಟ್ನಲ್ಲಿ ಬೆಂಗಳೂರಿನ
ವಾತಾವರಣವೇ ಇತ್ತು. ನನ್ನ ಈಜಿಪ್ಟ್ ಪ್ರವಾಸ ಪ್ರಾರಂಭವಾದದ್ದು ಅಲೆಕ್ಸಾಂಡ್ರಿಯಾದಿಂದ. ಈಜಿಪ್ಟ್ನ
ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರದ ಬಗಲಲ್ಲಿರುವ ಅಲೆಕ್ಸಾಂಡ್ರಿಯಾದಿಂದ ದಕ್ಷಿಣದ ಸೂಡಾನ್ ಗಡಿಯಲ್ಲಿರುವ
ಅಬುಸಿಂಬಲ್ವರೆಗೆ ನೈಲ್ನದಿಯಲ್ಲಿ ಅದರ ಹರಿವಿನ ವಿರುದ್ಧ ದಿಕ್ಕಿನಲ್ಲಿ ನಮ್ಮ ಪ್ರವಾಸ ಸಾಗಬೇಕಿತ್ತು.
ಅಲೆಕ್ಸಾಂಡ್ರಿಯ ನನಗೆ ಮೂರು ಕಾರಣಗಳಿಂದ ಮುಖ್ಯವಾಗಿತ್ತು. ಮೊದಲನೆಯದು ಪ್ರಾಚೀನ ಏಳು ಮಹಾಅದ್ಭುತಗಳಲ್ಲಿ
ಒಂದಾಗಿದ್ದ, ದಂತಕತೆಯಾಗಿರುವ ಅಲೆಕ್ಸಾಂಡ್ರಿಯಾದ ಲೈಟ್ಹೌಸ್, ಎರಡನೆಯದು ಅಷ್ಟೇ ಅಥವಾ ಅದಕ್ಕಿಂತ
ಹೆಚ್ಚು ಜಗತ್ಪ್ರಸಿದ್ಧವಾದ ಅಲೆಕ್ಸಾಂಡ್ರಿಯಾದ ಗ್ರಂಥಾಲಯ ಹಾಗೂ ಮೂರನೆಯದು ಆ ಗ್ರಂಥಾಲಯ ಅಥವಾ ಜ್ಞಾನಕೇಂದ್ರದಲ್ಲಿದ್ದ
ಹೈಪೇಶಿಯಾ ಎಂಬ ತತ್ವಜ್ಞಾನಿ ಮತ್ತು ಗಣಿತಶಾಸ್ತ್ರಜ್ಞೆ. ಇಂದು ಲೈಟ್ಹೌಸ್ ಹಾಗೂ ಗ್ರಂಥಾಲಯಗಳು ನೂರಾರು
ವರ್ಷಗಳ ಹಿಂದೆಯೇ ನಾಶವಾಗಿದ್ದರೂ ಅವುಗಳಿದ್ದವು ಎನ್ನಲಾದ ಸ್ಥಳಗಳಲ್ಲಿ ಅವುಗಳ ಪ್ರತಿಕೃತಿಗಳಿವೆ.
ಆದರೆ ಅಲೆಕ್ಸಾಂಡ್ರಿಯಾದ ರಸ್ತೆಗಳಲ್ಲಿ ಎಳೆದಾಡಿ, ಚಿತ್ರಹಿಂಸೆ ನೀಡಿ ಕೊಂದ ಗಣಿತಶಾಸ್ತ್ರಜ್ಞೆ,
ತತ್ವಜ್ಞಾನಿ ಹೈಪೇಷಿಯಾಳ ನೆನಪಿಗೆನ್ನುವುದು ಏನೂ ಇಲ್ಲ.
ಸಾಮ್ರಾಟ
ಅಲೆಕ್ಸಾಂಡರ್ ನಿರ್ಮಿಸಿದ ಅಲೆಕ್ಸಾಂಡ್ರಿಯವನ್ನು ಇಂದು ಚಿಕ್ಕದಾಗಿ `ಅಲೆಕ್ಸ್’ ಎಂದೂ ಕರೆಯುತ್ತಾರೆ. ಕೈರೋದಿಂದ ಅಲೆಕ್ಸಾಂಡ್ರಿಯಾ ತಲುಪುವ ಹೆದ್ದಾರೆ ಅಲೆಕ್ಸ್
ರೋಡ್ ಆಗಿದೆ. ಅಲೆಕ್ಸಾಂಡ್ರಿಯಾದಲ್ಲಿ ಇಂದು ಅವನು ನಿರ್ಮಿಸಿದ ಅಮೃತಶಿಲೆಯ ಹಾಸಿನ ರಸ್ತೆಗಳಿಲ್ಲ.
ಅಲೆಕ್ಸಾಂಡ್ರಿಯಾದ ಅವಶೇಷಗಳನ್ನು ಮೆಡಿಟರೇನಿಯನ್ ಸಾಗರದಡಿ ಅರಸಿದ ಫ್ರೆಂಚ್ ಪ್ರಾಕ್ತನಶಾಸ್ತ್ರಜ್ಞ
ಜೀನ್-ಯೆಸ್ ಎಂಪೆರ್ಯೂರ್ ಹೇಳುವಂತೆ ಈಗಿನ ಆಧುನಿಕ ಅಲೆಕ್ಸಾಂಡ್ರಿಯಾ ಪ್ರಾಚೀನ ಅಲೆಕ್ಸಾಂಡ್ರಿಯಾದ
ಮೇಲೆ ನಿರ್ಮಿತವಾಗಿದೆ. 1994ರಲ್ಲಿ ಆತ ಸಾಗರದಡಿಯಲ್ಲಿ ಮುವ್ವತ್ತನಾಲ್ಕು ಅಡಿ ಉದ್ದದ ಶಿಲೆಯ ಕಂಭಗಳನ್ನು
ಪತ್ತೆ ಹಚ್ಚಿ ಅವು ಫೆರೋಸ್ ಎಂದು ಕರೆಯಲ್ಪಡುತ್ತಿದ್ದ ಖ್ಯಾತ ಲೈಟ್ಹೌಸ್ನ ಅವಶೇಷಗಳೆಂದು ಗುರುತಿಸಿದ.
ಕಾರ್ಯಚಾಲನೆಯಲ್ಲಿದ್ದಾಗ ಲೈಟ್ಹೌಸ್ನ ಎತ್ತರ 450ರಿಂದ 600 ಅಡಿಗಳಷ್ಟಿದ್ದಿರಬಹುದು ಅಥವಾ ಆಧುನಿಕ
ಕಟ್ಟಡಗಳ ಲೆಕ್ಕದಲ್ಲಿ ಹೇಳುವುದಾದಲ್ಲಿ ಸುಮಾರು 40 ಅಂತಸ್ತಿನ ಕಟ್ಟಡದ ಎತ್ತರವಿದ್ದಿರಬಹುದೆನ್ನುತ್ತಾರೆ
ತಜ್ಞರು.
ಕ್ರಿ.ಪೂ.
283ರಲ್ಲಿ
ನಿರ್ಮಿಸಲಾಗಿತ್ತು
ಎನ್ನುವ,
ಸುಮಾರು
600 ಅಡಿ
ಎತ್ತರವಿದ್ದ
ಫೆರೋಸ್
ಎಂದು
ಕರೆಯಲ್ಪಡುತ್ತಿದ್ದ
ಲೈಟ್
ಹೌಸ್.
ಇದು
ಪ್ರಾಚೀನ
ಜಗತ್ತಿನ
ಏಳು
ಅದ್ಭುತಗಳಲ್ಲಿ
ಒಂದಾಗಿತ್ತು.
ಕ್ರಿ.ಪೂ.
331ರ ಏಪ್ರಿಲ್ನ ಒಂದು ದಿನ ಈಜಿಪ್ಟ್ನ ಮೂಲಕ ಪರ್ಷಿಯಾದ ಮೇಲೆ ದಂಡೆತ್ತಿಹೋಗುವ ಮುನ್ನ ಅಲೆಕ್ಸಾಂಡರ್ನಿಗೆ
ಗ್ರೀಸ್ ಮತ್ತು ಈಜಿಪ್ಟ್ಗಳಿಗೆ ಸಂಪರ್ಕ ಸೇತುವೆಂಬಂತೆ ಮೆಡಿಟರೇನಿಯನ್ ತಟದಲ್ಲಿ ನಗರವೊಂದನ್ನು ನಿರ್ಮಿಸಲು
ನಿರ್ಧರಿಸುತ್ತಾನೆ. ಆ ಕಾರ್ಯವನ್ನು ತನ್ನ ಸೇನಾಧಿಪತಿ ಮೊದಲನೇ ಟೊಲೆಮಿ ಸೊರ್ಟರ್ನಿಗೆ ವಹಿಸುತ್ತಾನೆ.
ಅಲೆಕ್ಸಾಂಡರ್ನ ಹೆಸರಿನಿಂದಲೇ ಅಲೆಕ್ಸಾಂಡ್ರಿಯಾ ಹೆಸರು ಬಂದಿದೆ. ಕ್ರಮೇಣ ಅ ಪ್ರದೇಶಕ್ಕೆ ತನ್ನನ್ನೇ
ರಾಜನೆಂದು ಘೋಷಿಸಿಕೊಳ್ಳುವ ಮೊದಲನೇ ಟೊಲೆಮಿ ಹತ್ತಿರದ ಫೆರೋಸ್ ದ್ವೀಪದಲ್ಲಿ ಹಡಗುಗಳಿಗೆ ದಾರಿತೋರಲು
ಆ ಬೃಹತ್ ಲೈಟ್ಹೌಸ್ ನಿರ್ಮಿಸುತ್ತಾನೆ, ಆದರೆ ಅದು ಸಂಪೂರ್ಣಗೊಳ್ಳುವ ಮುನ್ನವೇ ಕೊನೆಯುಸಿರೆಳೆಯುತ್ತಾನೆ.
ಅವನ ಮಗ ಟೊಲೆಮಿ ಫಿಲಡೆಲ್ಫಿಯಸ್ ಕ್ರಿ.ಪೂ. 283ರಲ್ಲಿ ತನ್ನ ತಂದೆ ತಾಯಿಗಳ ಸ್ಮರಣೆಯ ಹಬ್ಬದ ದಿನ
ಅದನ್ನು ಉದ್ಘಾಟಿಸುತ್ತಾನೆ. ಲೈಟ್ಹೌಸ್ ನಿರ್ಮಿಸಿದ ಶಿಲ್ಪಿ ಗ್ರೀಸ್ನ ಸೊಸ್ಟ್ರಾಟೋಸ್. ಸಾಮಾನ್ಯವಾಗಿ
ಎಲ್ಲ ಕಟ್ಟಡ- ಸ್ಮಾರಕಗಳ ಮೇಲೆ ಅವುಗಳನ್ನು ಕಟ್ಟಿಸಿದ ರಾಜನ ಹೆಸರಿದ್ದರೆ, ತನ್ನ ಹೆಸರು ಶಾಶ್ವತವಾಗಿ
ಉಳಿಯಲೆಂದು ಸೊಸ್ಟ್ರಾಟೋಸ್ ಲೈಟ್ಹೌಸ್ನ ಶಿಲೆಯ ಮೇಲೆ `ನಿಡಸ್ನ ಸೊಸ್ಟ್ರಾಟೋಸ್, ಡೆಕ್ಸಿಫೆನ್ಸ್ನ
ಪುತ್ರ ರಕ್ಷಕ ದೇವತೆಗಳಿಗೆ ಮತ್ತು ನಾವಿಕರಿಗೆ’ ಎಂದು ಕೆತ್ತಿ ಅದರ
ಮೇಲೆ ಪ್ಲಾಸ್ಟರ್ ಹಚ್ಚಿ, ಆ ಪ್ಲಾಸ್ಟರ್ ಮೇಲೆ ಟೊಲೆಮಿಯ ಹೆಸರನ್ನು ಕೆತ್ತುತ್ತಾನೆ. ಕ್ರಮೇಣ ಆ ಪ್ಲಾಸ್ಟರ್
ಎಲ್ಲಾ ಉದುರಿಹೋದ ಮೇಲೆ ಸೊಸ್ಟ್ರಾಟೋಸ್ನ ಹೆಸರು ಮಾತ್ರ ಉಳಿದಿತ್ತು. ಅಲೆಕ್ಸಾಂಡ್ರಿಯಾದ ಲೈಟ್ಹೌಸ್
ಆ ಕಾಲದಲ್ಲೂ ಜನಾಕರ್ಷಣೆಯಾಗಿತ್ತು. ಫೆರೋಸ್ ದ್ವೀಪದ ಮೇಲೆ ನಿರ್ಮಾಣಗೊಂಡ ಲೈಟ್ಹೌಸ್ ಅನ್ನು ಸಹ
ಫೇರೋಸ್ ಎಂದೇ ಕರೆಯತೊಡಗಿದರು. ಸುಮಾರು ಎರಡು ಸಾವಿರ ವರ್ಷಗಳ ಕಾಲ ನಿಂತಿದ್ದ ಆ ಬೃಹತ್ ಲೈಟ್ಹೌಸ್
ಕೊನೆಗೆ ಭೂಕಂಪಗಳಿಗೆ ಬಲಿಯಾಗಿ ಕುಸಿದುಬಿತ್ತೆನ್ನುತ್ತಾರೆ. ಅದರ ಅವಶೇಷಗಳಲ್ಲಿ ಕೆಲವು ಸಾಗರದಡಿಯಲ್ಲಿ
ಹೂತುಹೋಗಿದ್ದರೆ 13-14ನೇ ಶತಮಾನದಲ್ಲಿ ಮಾಮ್ಲುಕ್ ಸುಲ್ತಾನ ಖಯತ್ ಬೇ ಅವುಗಳನ್ನು ತನ್ನ ಕೋಟೆಯನ್ನು
ನಿರ್ಮಿಸಲು ಬಳಸಿಕೊಂಡನಂತೆ. ಆ ಕೋಟೆ ಇಂದಿಗೂ ಇದೆ. ಇಂದು ಜಗತ್ತಿನ ಏಳು ಮಹಾ ಅದ್ಭುತಗಳಲ್ಲಿ ಒಂದಾಗಿದ್ದ
ಅಲೆಕ್ಸಾಂಡ್ರಿಯಾದ ಲೈಟ್ಹೌಸ್ ಇದ್ದಿತ್ತು ಎನ್ನುವ ಸ್ಥಳದಲ್ಲಿ ಒಂದು ಚಿಕ್ಕ ಲೈಟ್ಹೌಸ್ ನಿರ್ಮಿಸಿದ್ದಾರೆ.
ಫ್ರೆಂಚ್ ಪ್ರಾಕ್ತನಶಾಸ್ತ್ರಜ್ಞ ಜೀನ್-ಯೆಸ್ ಎಂಪೆರ್ಯೂರ್ ಸಾಗರತಳದಿಂದ ಹೆಕ್ಕಿ ತೆಗೆದಿರುವ ಹಲವಾರು
ಗ್ರೀಕೊ-ರೋಮನ್ ಕಾಲದ ಅವಶೇಷಗಳು ರೋಮನ್ ಆಂಫಿ ಥಿಯೇಟರ್ ಅವಶೇಷಗಳ ಬಳಿ ಇರಿಸಿದ್ದಾರೆ.
ಅಲೆಕ್ಸಾಂಡ್ರಿಯ ಮೆಡಿಟರೇನಿಯನ್ ಸಾಗರದಲ್ಲಿ ಇಂದು ಪುರಾತನ ಲೈಟ್ ಹೌಸ್ ಇತ್ತು ಎಂದು ಹೇಳಲ್ಪಡುವ ಸ್ಥಳದಲ್ಲಿ ಒಂದು ಚಿಕ್ಕ ಲೈಟ್ ಹೌಸ್ ಇದೆ (ಬಲಭಾಗದಲ್ಲಿರುವುದು).
ಅಲೆಕ್ಸಾಂಡ್ರಿಯಾ
ಮೊದಲಿನಿಂದಲೂ ಕಲಿಕೆಯ, ಜ್ಞಾನಾರ್ಜನೆಯ ಕೇಂದ್ರವಾಗಿತ್ತು. ಮೊದಲನೇ ಟೊಲೆಮಿ ಸೋರ್ಟರ್ ಅಲೆಕ್ಸಾಂಡ್ರಿಯಾ
ನಿರ್ಮಿಸಿದಾಗಲೇ ಅಲ್ಲಿ ಉನ್ನತ ಜ್ಞಾನಾರ್ಜನೆಯ ಅಲೆಕ್ಸಾಂಡ್ರಿಯನ್ ಮ್ಯೂಸಿಯಂ ಸ್ಥಾಪಿಸಲಾಯಿತು. ಅದು
1500 ವರ್ಷಗಳ ನಂತರ ರೂಪುಗೊಂಡ ಮಧ್ಯಕಾಲೀನ ವಿಶ್ವವಿದ್ಯಾನಿಲಯಗಳಂತೆಯೇ ಇತ್ತು. ಯೂಕ್ಲಿಡ್ ಬಹುಶಃ
ಅಲ್ಲಿನ ಮೊಟ್ಟಮೊದಲ ಗಣಿತ ಬೋಧಕರಾಗಿದ್ದರು.
ಇಂದು ಪ್ರಾಚೀನ ಗ್ರಂಥಾಲಯವಿತ್ತೆಂದು ಹೇಳುವ ಸ್ಥಳದಲ್ಲಿಯೇ ನಿರ್ಮಿಸಿರುವ ಆಧುನಿಕ ಗ್ರಂಥಾಲಯ ಹಾಗೂ ಅದರ ಹೊರರಚನೆಯನ್ನು ಗ್ರಾನೈಟ್ ಶಿಲೆಗಳಿಂದ ನಿರ್ಮಿಸಿದ್ದು ಅದರ ಮೇಲೆ ವಿಶ್ವದ ಈ
ಹಿಂದೆ
ಇದ್ದ
ಹಾಗೂ
ಈಗ ಬಳಕೆಯಲ್ಲಿರುವ ಭಾಷೆಗಳ ಎಲ್ಲ ಲಿಪಿಗಳನ್ನು ಕೆತ್ತಲಾಗಿದೆ.
`ಈ
ಹಿಂದೆ ನಮ್ಮ ಚರಿತ್ರೆಯಲ್ಲಿ ಬೌದ್ಧಿಕವಾಗಿ ಉನ್ನತವಾಗಿದ್ದ ವೈಜ್ಞಾನಿಕ ನಾಗರಿಕತೆಯೊಂದನ್ನು ಒಮ್ಮೆ
ಮಾತ್ರ ಕಾಣಬಹುದಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಅದರ ಕೇಂದ್ರ ಸ್ಥಾನ ಅಲೆಕ್ಸಾಂಡ್ರಿಯಾದ ಗ್ರಂಥಾಲಯವಾಗಿತ್ತು.
ಅಲ್ಲಿ ಆ ಕಾಲದ ಪ್ರತಿಭಾನ್ವಿತರು ಗಣಿತಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ಖಗೋಳ ವಿಜ್ಞಾನ, ಸಾಹಿತ್ಯ,
ಭೂಗೋಳ ಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರಗಳ ಕ್ರಮಬದ್ಧ ಅಧ್ಯಯನಕ್ಕೆ ಬುನಾದಿ ಹಾಕಿದ್ದರು. ನಾವು
ಇಂದಿಗೂ ಆ ತಳಹದಿಯ ಮೇಲೆಯೇ ನಮ್ಮ ಅಧ್ಯಯನವನ್ನು ಮುಂದುವರಿಸಿದ್ದೇವೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ
ಪ್ರಾರಂಭವಾದ ಅದು ಏಳು ಶತಮಾನಗಳ ನಂತರ ನಾಶವಾಗುವವರೆಗೂ ಅದು ಪ್ರಾಚೀನ ಜಗತ್ತಿನ ಮಿದುಳು ಮತ್ತು ಹೃದಯವಾಗಿತ್ತು’ ಎಂದು ಖ್ಯಾತ ವಿಜ್ಞಾನಿ ದಿ. ಕಾರ್ಲ್ ಸಾಗನ್ ತಮ್ಮ ಕೃತಿ `ಕಾಸ್ಮಾಸ್’ನಲ್ಲಿ ಹೇಳಿದ್ದಾರೆ.
ಗ್ರಂಥಾಲಯದ ಮೇಲಿನ ಲಿಪಿಗಳಲ್ಲಿ ಕನ್ನಡ ಲಿಪಿಯೂ ಇದೆ.
ಗ್ರಂಥಾಲಯದ ಮುಂಭಾಗದಲ್ಲಿ ಲೇಖಕರು
ಕ್ರಿ.ಪೂ.
30ರಲ್ಲಿ ಕ್ಲಿಯೋಪಾತ್ರಾಳ ಆತ್ಮಹತ್ಯೆಯ ನಂತರ ರೋಮನ್ನರು ಆಲೆಕ್ಸಾಂಡ್ರಿಯಾವನ್ನು ಆಕ್ರಮಿಸಿಕೊಂಡರೂ
ಅವರು ಗ್ರೀಕ್ ಸಂಸ್ಕತಿಯನ್ನಾಗಲೀ ಅಥವಾ ಅದರ ಬೌದ್ಧಿಕ ಸಂಪ್ರದಾಯಗಳನ್ನು ನಾಶಗೊಳಿಸಲಿಲ್ಲ. ಅಲೆಕ್ಸಾಂಡ್ರಿಯಾದ
ಗ್ರಂಥಾಲಯ ಆಗಲೇ ಜಗತ್ಪ್ರಸಿದ್ಧವಾಗಿತ್ತು. ಆಗಲೇ ಅದರಲ್ಲಿ ಸುಮಾರು ಏಳು ಲಕ್ಷ ಸ್ಕ್ರೋಲ್(ಚರ್ಮದೋಲೆ/ಸುರುಳಿಯಾಕಾರದ
ಪುಸ್ತಕ, ಗ್ರಂಥ)ಗಳಿದ್ದುವೆಂದು ಹೇಳಲಾಗುತ್ತದೆ. ಕ್ರಿ.ಶ. 360-370ರ ಸಮಯದಲ್ಲಿ ಅಲೆಕ್ಸಾಂಡ್ರಿಯನ್
ಮ್ಯೂಸಿಯಂನ ಮುಖ್ಯಸ್ಥನಾಗಿ ಥಿಯಾನ್ ಎಂಬ ಗಣಿತಶಾಸ್ತ್ರಜ್ಞನಿದ್ದ. ಆತ ಆಗಲೇ ಒಂದು ಸೂರ್ಯ ಮತ್ತು
ಚಂದ್ರನ ಗ್ರಹಣಗಳನ್ನು ದಾಖಲಿಸಿದ್ದ. ಆತನ ಮಗಳೇ ಹೈಪೇಷಿಯಾ. ಆ ಗ್ರಂಥಾಲಯದಲ್ಲಿ ಕೆಲಸ ಮಾಡಿದ ಮೊಟ್ಟಮೊದಲ
ಮಹಿಳಾ ಗಣಿತಶಾಸ್ತ್ರಜ್ಞೆ, ಖಗೋಳಶಾಸ್ತ್ರಜ್ಞೆ ಮತ್ತು ಭೌತಶಾಸ್ತ್ರಜ್ಞೆ ಬಹುಶಃ ಆಕೆಯೇ ಇರಬೇಕು.
ಹೆಣ್ಣನ್ನು ವಸ್ತುವೆಂದು ಪರಿಗಣಿಸುತ್ತಿದ್ದ ಆ ಸಮಯದಲ್ಲಿ ಗಂಡಸರ ನಡುವೆ ತನ್ನ ವಿಚಾರಗಳನ್ನು ದಿಟ್ಟತನದಿಂದ
ಮಂಡಿಸುತ್ತಿದ್ದಳು. ಆಕೆಯ ತಂದೆ ಥಿಯಾನ್ ಆಕೆಗೆ ಗಣಿತ, ವಿಜ್ಞಾನ, ಸಾಹಿತ್ಯ, ತತ್ವಶಾಸ್ತ್ರ ಹಾಗೂ
ಕಲೆಗಳಲ್ಲಿ ಶಿಕ್ಷಣ ನೀಡಿದ. ಅದರ ಜೊತೆಗೆ ಆಕೆ ಆತನೊಂದಿಗೆ ಪ್ರತಿ ದಿನ ವ್ಯಾಯಾಮ ಸಹ ಮಾಡಬೇಕಿತ್ತು.
ಆತ ತನ್ನ ಮಗಳನ್ನು `ಪರಿಪೂರ್ಣ ವ್ಯಕ್ತಿ’ಯನ್ನಾಗಿ ಮಾಡಲು ಬಯಸಿದ್ದ.
ಸ್ವತಂತ್ರ ಆಲೋಚನೆಗಳನ್ನು ಹೊಂದಿದ್ದ ಆಕೆ ತನ್ನ ತಂದೆಯೇ ತನ್ನ ಗುರುವಾಗಿದ್ದರೂ ಆತನ ವಿಚಾರಗಳನ್ನು
ಅನುಸರಿಸದೆ ನವ-ಪ್ಲೇಟೋ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದವಳು. ಬಹುಶಃ ಆಕೆ ಜಗತ್ತಿನ ಮೊಟ್ಟಮೊದಲ
ಮಹಿಳಾ ಗಣಿತಶಾಸ್ತ್ರಜ್ಞೆಯೂ ಆಗಿದ್ದಳು. ಆಕೆಯ ಬದುಕಿನ ಬಗೆಗಿಂತ ಆಕೆಯ ಸಾವಿನ ಬಗೆಗಿನ ದಾಖಲೆಗಳೇ
ಹೆಚ್ಚಿವೆ. ಆಕೆಯ ಹುಟ್ಟಿದ ದಿನಾಂಕದ ಬಗೆಗಿನ ದಾಖಲೆಗಳಿಲ್ಲದಿದ್ದರೂ ಆಕೆ ಸುಮಾರು ಕ್ರಿ.ಶ. 370ರಲ್ಲಿ
ಜನಿಸಿರಬಹುದು. ಆಕೆ ಒಬ್ಬಳು ಸುಂದರ, ಗೌರವಾನ್ವಿತ ಹಾಗೂ ತನ್ನ ಶಿಷ್ಯರ ಪ್ರಿಯ ಬೋಧಕಿಯಾಗಿದ್ದಳು.
ಆಕೆ ಗಣಿತವನ್ನಲ್ಲದೆ ತತ್ವಶಾಸ್ತ್ರವನ್ನೂ ಸಹ ಬೋಧಿಸುತ್ತಿದ್ದಳು, ಸಾರ್ವಜನಿಕ ಭಾಷಣಗಳನ್ನು ನೀಡುತ್ತಿದ್ದಳು
ಹಾಗೂ ಬಹುಶಃ ನಗರದ ಯಾವುದಾದರೂ ಅಧಿಕಾರವನ್ನು ಸಹ ಆಕೆಗೆ ವಹಿಸಲಾಗಿತ್ತು. ಹಲವಾರು ಜನ ಆಕೆಯನ್ನು
ವರಿಸಲು ದುಂಬಾಲು ಬಿದ್ದಿದ್ದರೂ ನಿರಾಕರಿಸಿ ಆಕೆ ಖಡಾಖಂಡಿತವಾಗಿ ಮದುವೆಯಾಗಬಾರದೆಂದು ತೀರ್ಮಾನಿಸಿದ್ದಳು.
ಹೈಪೇಷಿಯಾ ಗಣಿತವನ್ನು ತನ್ನ ತಂದೆ ಥಿಯಾನ್ನಿಂದ ಕಲಿತಿದ್ದಳು ಹಾಗೂ ಅದರಲ್ಲಿ ಆಕೆ ತಜ್ಞತೆಯನ್ನು
ಸಾಧಿಸಿ ತನ್ನ ಹಲವಾರು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಳಷ್ಟೇ ಅಲ್ಲದೆ ಹಲವಾರು ಗ್ರಂಥಗಳನ್ನು
ಸಹ ರಚಿಸಿದ್ದಳು. ಅವುಗಳಲ್ಲಿ ಮುಖ್ಯವಾದವು ಬೀಜಗಣಿತದ ಪಿತಾಮಹನಾಗಿದ್ದ ಡಯೊಫ್ಯಾಂಟಸ್ನ ಅರಿತ್ಮೆಟಿಕಾ
ಸಿದ್ಧಾಂತಗಳ ಬಗೆಗೆ ಹದಿಮೂರು ಸಂಪುಟಗಳ `ಕಾಮೆಂಟರಿ’ (ಕಾಮೆಂಟರಿ ಎಂದರೆ
ಸಂಪಾದಿತ ಕೃತಿ ಎನ್ನಬಹುದು), ತನಗೆ ಪ್ರಿಯವಾದ ಖಗೋಳ ವಿಜ್ಞಾನದ ಸೂತ್ರಗಳ ಬಗೆಗೆ `ದ ಅಸ್ಟ್ರಾನಾಮಿಕಲ್
ಕ್ಯಾನನ್’ ಎಂಬ ಒಂದು ಗ್ರಂಥ, ಅಪೋಲೊನಿಯಸ್ನ ಕೋನಿಕ್ಸ್ನ (ಅಪೋಲೊನಿಯಸ್
ಸುಮಾರು ಕ್ರಿ.ಪೂ.200ರಲ್ಲಿ ಬದುಕಿದ್ದ ಒಬ್ಬ ಗಣಿತಶಾಸ್ತ್ರಜ್ಞ) ಬಗೆಗೆ ಒಂದು ಕಾಮೆಂಟರಿಯನ್ನು ಸಹ
ರಚಿಸಿದ್ದಳು. ಆದರೆ ಆಕೆಯ ಜ್ಞಾನ ಮತ್ತು ತಿಳಿವಳಿಕೆಯೇ ಆಕೆಗೆ ಮುಳುವಾಗುತ್ತದೆಂದು ಆಕೆ ಊಹಿಸಿಕೊಂಡಿರಲೂ
ಸಾಧ್ಯವಿರಲಿಲ್ಲ.
ಹೈಪೇಷಿಯಾ
ಹೈಪೇಷಿಯಾಳ
ಸಮಯದಲ್ಲಿ ಅಲೆಕ್ಸಾಂಡ್ರಿಯಾ ರೋಮನ್ ಆಳ್ವಿಕೆಯಲ್ಲಿತ್ತು ಹಾಗೂ ಇಡೀ ನಗರ ಒಂದು ರೀತಿಯ ಉರಿವ ಬಾಣಲೆ
ಇದ್ದಂತಿತ್ತು. ಗುಲಾಮಗಿರಿ ನಾಗರಿಕತೆಯ ಚೈತನ್ಯವನ್ನೇ ಉಡುಗಿಸಿತ್ತು. ಬೆಳೆಯುತ್ತಿದ್ದ ಕ್ರೈಸ್ತ
ಧರ್ಮ ತನ್ನ ಶಕ್ತಿಯನ್ನೆಲ್ಲಾ ಕೇಂದ್ರೀಕರಿಸಿಕೊಂಡು ಅಲ್ಲಿನ ಸ್ಥಳೀಯರ `ಪೇಗನ್’ ಧರ್ಮಬಾಹಿರತೆಯನ್ನು ತೊಡೆದುಹಾಕುವ ಉತ್ಸಾಹದಲ್ಲಿತ್ತು. ಈ ಎಲ್ಲ ಸಾಮಾಜಿಕ,
ಧಾರ್ಮಿಕ ಸುಂಟರಗಾಳಿಯಲ್ಲಿ ಸಿಕ್ಕಿಬಿದ್ದದ್ದು ಹೈಪೇಷಿಯಾ. ಅಲೆಕ್ಸಾಂಡ್ರಿಯಾದ ಆರ್ಚ್ಬಿಷಪ್ ಆಗಿದ್ದ
ಸಿರಿಲ್ ಆಕೆಯನ್ನು ದ್ವೇಷಿಸುತ್ತಿದ್ದ, ಏಕೆಂದರೆ ಆಕೆ ರೋಮನ್ ಗವರ್ನರ್ ಸೆರೆಸ್ಟಸ್ಗೆ ಹತ್ತಿರವಿದ್ದಳು
ಹಾಗೂ ಆಕೆಯ ವಿಜ್ಞಾನದ ಜ್ಞಾನವನ್ನು ಆತ `ಬ್ಲ್ಯಾಕ್ ಮ್ಯಾಜಿಕ್’ ಮತ್ತು
ಧರ್ಮವಿರೋಧಿ ಎಂದು ಭಾವಿಸಿದ್ದ. ಅವಕಾಶಕ್ಕಾಗಿ ಕಾಯುತ್ತಿದ್ದ ಕ್ರೈಸ್ತ ಮತಾಂಧರ ಗುಂಪು ಪೀಟರ್ ಎಂಬುವವನ
ನಾಯಕತ್ವದಲ್ಲಿ ಕ್ರಿ.ಶ. 415ರ ಮಾರ್ಚ್ ತಿಂಗಳಿನ ಒಂದು ದಿನ ಹೈಪೇಷಿಯಾ ತನ್ನ ಸಾರೋಟಿನಲ್ಲಿ ಹೋಗುತ್ತಿದ್ದಾಗ
ಆಕೆಯನ್ನು ಎಳೆದು, ಆಕೆ ತೊಟ್ಟಿದ್ದ ಬಟ್ಟೆ ಹರಿದುಹಾಕಿ ವಿವಸ್ತ್ರಗೊಳಿಸಿ, ಚಿತ್ರಹಿಂಸೆ ಕೊಟ್ಟು,
ಕಪ್ಪೆ ಚಿಪ್ಪುಗಳಿಂದ ಆಕೆಯ ಚರ್ಮವನ್ನು ಮೂಳೆಯವರೆಗೂ ಕೆರೆದು, ಅಂಗಾಂಗಗಳನ್ನು ಕತ್ತರಿಸಿ ಕೊಂದು
ಸುಟ್ಟು ಹಾಕಿದರು. ಆಕೆಯ ಗ್ರಂಥಗಳನ್ನೂ ಸಹ ಸುಟ್ಟುಹಾಕಿದರು. ಕೊನೆಗೆ ಸಿರಿಲ್ನಿಗೆ ಸಂತನ ಸ್ಥಾನ
ಕೊಟ್ಟರು, ಅದು ಬೇರೆ ಮಾತು.
.ಕ್ರೈಸ್ತ ಮತಾಂಧರು ಹೈಪೇಷಿಯಾಳನ್ನು ಕೊಲ್ಲುತ್ತಿರುವುದು. ಕಲಾವಿದನೊಬ್ಬನ ಕಲ್ಪನೆ
ಹೈಪೇಷಿಯಾಳ
ಸಾವಿನೊಂದಿಗೆ ಪ್ರಾಚೀನ ವಿಜ್ಞಾನದ ಅಂತ್ಯವೂ ಆಯಿತೆನ್ನಬಹುದು. ಅದಾದ ನಂತರ ನಾಗರಿಕತೆ ಅಂಧಕಾರದ ಯುಗ
ಪ್ರವೇಶಿಸಿ ವೈಜ್ಞಾನಿಕವಾಗಿ ಅವನತಿ ಕಂಡಿತು. ಹೈಪೇಷಿಯಾ ಒಬ್ಬ ಅಪ್ರತಿಮ ಮಹಿಳೆಯಾಗಿದ್ದಳು. ಆಕೆಯಿಂದ
ಮೇಡಂ ಮೇರಿ ಕ್ಯೂರಿಯವರೆಗಿನ ಮಹಿಳಾ ವಿಜ್ಞಾನಿಗಳಲ್ಲಿ ಹೈಪೇಷಿಯಾಳೇ ಅದ್ವಿತೀಯಳೆಂದು ಹೇಳುವವರಿದ್ದಾರೆ.
ಆಕೆಯ ಕೊಡುಗೆಯನ್ನು ಸ್ಮರಿಸಿ ವಿಜ್ಞಾನಿಗಳು ಚಂದ್ರನ ಮೇಲಿನ ಕುಳಿಯೊಂದಕ್ಕೆ ಹೈಪೇಷಿಯಾಳ ಹೆಸರು ನೀಡಿದ್ದಾರೆ.
ಅದೇ ರೀತಿ ಮತ್ತೊಂದು ಕುಳಿಗೆ ಆಕೆಯ ತಂದೆ ಥಿಯಾನ್ನ ಹೆಸರು ಕೊಟ್ಟಿದ್ದಾರೆ. ಸಾಧಾರಣ ಟೆಲಿಸ್ಕೋಪ್ನಿಂದಲೂ
ಇವು ಭೂಮಿಯಿಂದ ಕಾಣುತ್ತವೆ.
ಹೈಪೇಷಿಯಾಳ
ಸಾವಿನ ನಂತರ ಅಲೆಕ್ಸಾಂಡ್ರಿಯಾದ ಗ್ರಂಥಾಲಯವನ್ನೂ ಸಹ ನಾಶಮಾಡಿದರು. ಅದು ಕಾರ್ಲ್ ಸಾಗನ್ ಹೇಳುವಂತೆ
`ಇಡೀ ನಾಗರಿಕತೆ ಸ್ವ-ಮಿದುಳು ಶಸ್ತ್ರಕ್ರಿಯೆ ಮಾಡಿಕೊಂಡಂತಿತ್ತು ನಾಶಗೊಳಿಸಿದ ಆ ಕ್ರಿಯೆ- ಆ ನಾಗರಿಕತೆಯ
ನೆನಪುಗಳು, ಆವಿಷ್ಕಾರಗಳು, ವಿಚಾರಗಳು ಮತ್ತು ಭಾವನೆಗಳೆಲ್ಲವೂ ಹಿಂಪಡೆಯಲಾಗದಂತೆ ನಾಶವಾದವು.’ ಆ
ನಷ್ಟ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮಗೆ ದೊರಕದೆ ಎಷ್ಟೋ ಗ್ರಂಥಗಳು ನಾಶವಾದವು. ನಮಗೆ ಅವುಗಳ ಕೆಲವು
ಶೀರ್ಷಿಕೆಗಳಷ್ಟೇ ತಿಳಿದಿದೆ. ಇನ್ನು ಕೆಲವು ಗ್ರಂಥಗಳ ಶೀರ್ಷಿಕೆಗಳಾಗಲೀ, ಅವುಗಳ ಕರ್ತೃಗಳ ಹೆಸರುಗಳಾಗಲೀ
ತಿಳಿದಿಲ್ಲ. ಸೋಫೋಕ್ಲಸ್ನ 123 ನಾಟಕಗಳು ಆ ಗ್ರಂಥಾಲಯದಲ್ಲಿದ್ದುವಂತೆ. ಅವುಗಳಲ್ಲಿ ಏಳು ಮಾತ್ರ
ಉಳಿದುಕೊಂಡವು ಹಾಗೂ ಅವುಗಳಲ್ಲಿ ಒಂದು ಇಂದು ಜನಪ್ರಿಯವಾಗಿರುವ ಹಾಗೂ ಲಂಕೇಶ್ ಅನುವಾದಿಸಿರುವ `ಈಡಿಪಸ್
ರೆಕ್ಸ್’.
ಪ್ರಾಚೀನ
ಗ್ರಂಥಾಲಯವಿದ್ದ ಸ್ಥಳದಲ್ಲೇ ಅದರ ನೆನಪಿಗಾಗಿ ಮತ್ತೊಂದು ಸುಸಜ್ಜಿತ, ಆಧುನಿಕ ಗ್ರಂಥಾಲಯ ಸ್ಥಾಪಿಸಬೇಕೆಂದು
1988ರಲ್ಲಿ ನಿರ್ಧರಿಸಿದ ಈಜಿಪ್ಟ್ ಸರ್ಕಾರ ಯುನೆಸ್ಕೊ/ಯು.ಎನ್.ಡಿ.ಪಿ. ಸಹಕಾರದೊಂದಿಗೆ ಅದರ ವಿನ್ಯಾಸಕ್ಕೊಂದು
ಅಂತರರಾಷ್ಟ್ರೀಯ ಸ್ಪರ್ಧೆ ನಡೆಸಿತು. ಅದರಲ್ಲಿ ನಾರ್ವೆಯ ಸ್ನೊಹೆÀಟ ಆರ್ಕಿಟೆಕ್ಚರ್ ಲ್ಯಾಂಡ್ಸ್ಕೇಪ್
ಎನ್ನುವ ಕಂಪೆನಿ ಆ ಸ್ಪರ್ಧೆಯಲ್ಲಿ ಗೆದ್ದು ಒಂದು ಸುಂದರ ಗ್ರಂಥಾಲಯವನ್ನು ನಿರ್ಮಿಸಿದೆ. ವರ್ತುಳಾಕಾರದಲ್ಲಿರುವ
ಕಟ್ಟಡ ಗತದ ನೀರಿನಿಂದ ಎದ್ದು ಭವಿಷ್ಯದ ಕಡೆಗೆ ವಾಲಿದಂತೆ ನಿರ್ಮಿಸಲಾಗಿದೆ ಎಂದಿದ್ದಾರೆ ನಿರ್ಮಿಸಿದ
ವಾಸ್ತುಶಿಲ್ಪಿಗಳು. ಆ ಗ್ರಂಥಾಲಯದಲ್ಲಿ ಪುಸ್ತಕಗಳ ಸಂಗ್ರಹಗಳ ಜೊತೆಗೆ ಮ್ಯೂಸಿಯಂ, ಸಭಾಂಗಣ, ಪ್ಲಾನೆಟೇರಿಯಂ
ಮುಂತಾದ ಅತ್ಯಾಧುನಿಕ ಸೌಲಭ್ಯಗಳಿದ್ದು ಒಮ್ಮೆಲೇ 2000 ಜನ ಕೂತು ಓದಬಹುದಾದಷ್ಟು ವಿಶಾಲವಾಗಿದೆ. ಅಂಧರಿಗಾಗಿ
ವಿಶೇಷ ವಿಭಾಗವಿದೆ. ವರ್ತುಳಾಕಾರದ ಹೊರರಚನೆಯನ್ನು ಗ್ರಾನೈಟ್ ಶಿಲೆಗಳಿಂದ ನಿರ್ಮಿಸಿದ್ದು ಅದರ ಮೇಲೆ
ವಿಶ್ವದ ಈ ಹಿಂದೆ ಇದ್ದ ಹಾಗೂ ಈಗ ಬಳಕೆಯಲ್ಲಿರುವ ಭಾಷೆಗಳ ಎಲ್ಲ ಲಿಪಿಗಳನ್ನು ಕೆತ್ತಲಾಗಿದೆ. ಅದರ
ಮೇಲೆ `ಊರಲ್ಲ’ ಎಂಬ ಕನ್ನಡ ಪದವೂ ಇದೆ.
ಎರಡನೇ ಶತಮಾನದಲ್ಲಿ ರೋಮನ್ನರು ನಿರ್ಮಿಸಿರು ಆಂಫಿ ಥಿಯೇಟರ್
ಅಲೆಕ್ಸಾಂಡ್ರಿಯಾದಲ್ಲಿ
ರೋಮನ್ನರು ನಿರ್ಮಿಸಿರುವ ಹಲವಾರು ಅವಶೇಷಗಳಿದ್ದು ಅವುಗಳಲ್ಲಿ ಮುಖ್ಯವಾದವುಗಲಿಗೆ ಭೇಟಿ ನೀಡಿದೆವು.
ಅವುಗಳಲ್ಲಿ ಮೊದಲನೆಯದು ರೋಮನ್ ಆಂಫಿ ಥಿಯೇಟರ್. 1967ರಲ್ಲಿ ಕಟ್ಟಡ ನಿರ್ಮಾಣದ ಸಮಯದಲ್ಲಿ ಸಿಕ್ಕ
ಹೂತುಹೋಗಿದ್ದ ಈ ಅವಶೇಷಗಳನ್ನು ಸತತ 30 ವರ್ಷಗಳ ಕಾಲ ಎಚ್ಚರಿಕೆಯಿಂದ ತೆಗೆದು ಸಂರಕ್ಷಿಸಲಾಗಿದೆ.
ಸುಮಾರು 2ನೇ ಶತಮಾನದಲ್ಲಿ ರೋಮನ್ನರಿಂದ ನಿರ್ಮಿಸಲ್ಪಟ್ಟ ಈ ಆಂಫಿ ಥಿಯೇಟರ್ನಲ್ಲಿ ಸುಮಾರು 800 ಸಭಿಕರಿಗೆ
ಸ್ಥಳಾವಕಾಶವಿದೆ ಹಾಗೂ ಸ್ನಾನಪ್ರಿಯರಾಗಿದ್ದ ರೋಮನ್ನರು ಹಲವಾರು ಸ್ನಾನದ ಗೃಹಗಳನ್ನು ಸಹ ಉತ್ತರದ
ದಿಕ್ಕಿನಲ್ಲಿ ನಿರ್ಮಿಸಲಾಗಿದೆ.
ಅಲೆಕ್ಸಾಂಡ್ರಿಯಾದಲ್ಲಿನ
ಮತ್ತೊಂದು ಆಕರ್ಷಣೆಯೆಂದರೆ ಪಾಂಪೆಯ ಸ್ಥಂಭ ಎಂದು ಕರೆಯಲ್ಪಡುವ ಸುಮಾರು 27 ಮೀಟರ್ ಎತ್ತರದ ಹಾಗೂ
9 ಮೀಟರ್ ವ್ಯಾಸದ ಏಕ ಶಿಲಾ ಸ್ಥಂಭ. ಇಡೀ ಜಗತ್ತಿನಲ್ಲೇ ಅತಿ ಎತ್ತರದ ಪ್ರಾಚೀನ ಏಕಶಿಲಾ ಸ್ಥಂಭವೆಂದೂ
ಸಹ ಪರಿಗಣಿಸಲ್ಪಟ್ಟಿದೆ. ಅದನ್ನು ಪಾಂಪೆಯ ಸ್ಥಂಭ ಎಂದು ಕರೆದರೂ ಪಾಂಪೆಗೂ ಅದಕ್ಕೂ ಸಂಬಂಧವಿಲ್ಲ.
ಜೂಲಿಯಸ್ ಸೀಸರ್ ಕೈಯಿಂದ ಆಂತರಿಕ ಯುದ್ಧದಲ್ಲಿ ಸೋತ ಪಾಂಪೆ ಈಜಿಪ್ಟ್ಗೆ ಓಡಿಬಂದು ಅಲ್ಲಿ ಕ್ರಿ.ಪೂ.
48ರಲ್ಲಿ ಕೊಲೆಯಾದ. ಮಧ್ಯಕಾಲೀನ ಪ್ರಯಾಣಿಕರು ಅ ಸ್ಥಂಭ ಇರುವ ಸ್ಥಳದಲ್ಲೇ ಅವನನ್ನು ಹೂತಿದ್ದಾರೆ
ಹಾಗೂ ಆ ಕಂಬದ ಶಿರದಲ್ಲಿ ಅವನ ತಲೆಯಿದೆ ಎಂದು ನಂಬಿ ಅದನ್ನು ಪಾಂಪೆಯ ಸ್ಥಂಭ ಎಂದು ಕರೆದರು. ವಾಸ್ತವವಾಗಿ
ಆ ಸ್ಥಂಭವನ್ನು ರೋಮ್ ದೊರೆ ಡಯೊಕ್ಲೆಷಿಯನ್ ಅಲೆಕ್ಸಾಂಡ್ರಿಯಾ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಾಗ
ತನ್ನ ವಿಜಯದ ಸ್ಮಾರಕವಾಗಿ ಅದನ್ನು ಕೆತ್ತಿಸಿದ್ದಾನೆ. ಸುಮಾರು 285 ಟನ್ ಇದೆಯೆಂದು ಹೇಳಲಾಗುವ ಅದರ
ಶಿಲೆಯನ್ನು ಸುಮಾರು ಸಾವಿರ ಕಿಲೋ ಮೀಟರ್ ದೂರವಿರುವ ಆಸ್ವಾನ್ನಿಂದ ನೈಲ್ ನದಿಯ ಮೇಲೆ ಸಾಗಿಸಿರಬಹುದೆಂದು
ಹೇಳುತ್ತಾರೆ.
27 ಮೀಟರ್ ಎತ್ತರದ ಹಾಗೂ 9 ಮೀಟರ್ ವ್ಯಾಸದ ಏಕ ಶಿಲೆಯ ಪಾಂಪೆ ಸ್ಥಂಭ. ಇದನ್ನು ಇಡೀ ಜಗತ್ತಿನಲ್ಲೇ ಅತಿ ಎತ್ತರದ ಪ್ರಾಚೀನ ಏಕಶಿಲಾ ಸ್ಥಂಭವಾಗಿದೆ.
1900ರ
ಆಸುಪಾಸಿನಲ್ಲಿ ಈಗ ಅಲೆಕ್ಸಾಂಡ್ರಿಯಾದ ದಕ್ಷಿಣ ಭಾಗದ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಕತ್ತೆಗಳನ್ನು
ಮೇಯಿಸುತ್ತಿದ್ದಾಗ ಅವನ ಒಂದು ಕತ್ತೆ ಅಲ್ಲೇ ಎಲ್ಲೋ ಇದ್ದದ್ದು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು.
ಅವನು ಅದನ್ನು ಹುಡುಕಿದಂತೆ ಅವನ ಕತ್ತೆ ಅಲ್ಲೇ ಇದ್ದ ಪೊದೆಗಳ ನಡುವಿನ ಕೊರಕಲಿನಲ್ಲಿ ಬಿದ್ದುಬಿಟ್ಟಿತ್ತು.
ಕೊರಕಲಿನೊಳಕ್ಕೆ ಇಳಿದ ಅವನಿಗೆ ದಿಗ್ಭ್ರಮೆ ಕಾದಿತ್ತು, ಏಕೆಂದರೆ ಆ ಕೊರಕಲು ಸ್ಥಳ ಒಂದು ಭೂಗತ ಸ್ಮಶಾನವಾಗಿತ್ತು.
ಇಂದು ಅದನ್ನು ರೋಮನ್ ಕ್ಯಾಟಕೂಮ್ (ರೋಮನ್ ಶವಗುಹೆಗಳು) ಎಂದು ಕರೆಯುತ್ತಾರೆ ಹಾಗೂ ಇದನ್ನು ಮಧ್ಯಕಾಲೀನ
ಯುಗದ ಏಳು ಅದ್ಬುತಗಳಲ್ಲಿ ಒಂದೆಂದು ಭಾವಿಸಲಾಗಿದೆ. ರೋಮನ್ನರಿಂದ ನಿರ್ಮಿಸಲ್ಪಟ್ಟಿದ್ದರೂ ಅದರಲ್ಲಿ
ರೋಮನ್, ಗ್ರೀಕ್ ಹಾಗೂ ಈಜಿಪ್ಟ್ ಸಂಸ್ಕøತಿಯ ರಚನೆಗಳಿವೆ. ಬಾವಿಯಂತೆ ವೃತ್ತಾಕಾರದ ರಚನೆಯಿದ್ದು ಅದರ
ಸುತ್ತಲೂ ಮೆಟ್ಟಿಲುಗಳಿವೆ. ಆ ಮೆಟ್ಟಿಲುಗಳ ಮೂಲಕ ಶವಗಳನ್ನು ಅವುಗಳ ಸಂಬಂಧಿಕರು ಶವಸಂಸ್ಕಾರಕ್ಕೆ
ಕೊಂಡೊಯ್ಯುತ್ತಿದ್ದರು.
ಬಾವಿಯಂತೆ ವೃತ್ತಾಕಾರದ ರಚನೆ ಹೊಂದಿದ್ದು ಅದರ ಸುತ್ತಲೂ ಮೆಟ್ಟಿಲುಗಳಿವೆ. ಆ
ಮೆಟ್ಟಲುಗಳ
ಮೂಲಕ
ಅಡ್ಡಡ್ಡ
ಸುರಂಗಗಳಲ್ಲಿ
ಶವಗಳನ್ನು
ಗೂಡುಗಳಲ್ಲಿ
ಹೂತಿಡಲಾಗುತ್ತಿತ್ತು.
ಭೂಮಿಯ ಮಟ್ಟದಿಂದ ಕೆಳಗೆ ಮೂರಂತಸ್ತುಗಳ ನೆಲ ಗುಹೆಗಳಿದ್ದು ಅವುಗಳೊಳಗೆ
300 ಶವಗಳನ್ನು ಹೂತಿಡಲಾಗಿತ್ತು. ಕ್ರಿ.ಶ. 2ನೇ ಶತಮಾನದಲ್ಲಿ ರೋಮನ್ನರಿಂದ ನಿರ್ಮಿತವಾದ ಈ ನೆಲಗುಹೆಗಳು
2ರಿಂದ 4ನೇ ಶತಮಾನದವರೆಗೂ ಮೃತದೇಹಗಳನ್ನು ಹೂತಿಡಲು ಬಳಸಲಾಗುತ್ತಿತ್ತು. ಬಹುಶಃ ಅದು ಒಂದು ಕುಟುಂಬದ
ಖಾಸಗಿ ಸ್ಮಶಾನವಾಗಿದ್ದು ಕೊನೆಗೆ ಸಾರ್ವಜನಿಕ ಸ್ಮಶಾನವಾಗಿದ್ದಿರಬಹುದೆನ್ನುತ್ತಾರೆ ಪ್ರಾಕ್ತನತಜ್ಞರು.
ಅದರ ಜೊತೆಗೆ ಕರಕಲ್ಲಾ ಕೋಣೆ ಎಂದು ಕರೆಯಲ್ಪಡುವ ಕೋಣೆಯಲ್ಲಿ ಕ್ರಿ.ಶ. 215ರಲ್ಲಿ ದೊರೆ ಕರಕಲ್ಲಾನ
ಆದೇಶದ ಮೇಲೆ ಕೊಂದ ನೂರಾರು ಜನರ ಮತ್ತು ಪ್ರಾಣಿಗಳ ಅವಶೇಷಗಳು ದೊರೆತಿವೆ. ಕ್ಯಾಟಕೂಮ್ನ ಮೂರನೇ ನೆಲಮಾಳಿಗೆ
ಸಂಪೂರ್ಣವಾಗಿ ಜಲಾವೃತವಾಗಿದ್ದು ಅವುಗಳೊಳಗೆ ಪ್ರವೇಶಿಸುವುದು ಸಾಧ್ಯವಿಲ್ಲ.
ಭೂಮಿಯೊಳಗೆ ಮೂರು ಅಂತಸ್ತುಗಳಷ್ಟು ಆಳದಲ್ಲಿ ಶವಗಳನ್ನು ಹೂತಿಡುತ್ತಿದ್ದ ಗೂಡುಗಳು
ಸಾವಿನ
ಮೌನ ಆಕ್ರಂದನದ, ಕಮಟು ವಾಸನೆಯ ನೆಲದೊಳಗಿನ ಗುಹಾ ಸ್ಮಶಾನದೊಳಗೆ ವಿಹರಿಸುವುದು ಒಂದು ನವಿರೇಳಿಸುವ,
ವಿಚಿತ್ರ ಅನುಭವ. ಹೈಪೇಷಿಯಾಳ ನೆನಪಿನೊಂದಿಗೆ ಅಲೆಕ್ಸಾಂಡ್ರಿಯಾ ಬಿಟ್ಟು ಹೊರಟಾಗ ಮರುದಿನ ಸಾವಿನ
ಮತ್ತೊಂದು ಮನೆಯಾದ ಪಿರಮಿಡ್ಗೆ ಭೇಟಿ ನೀಡುವುದು ನೆನಪಿಸಿಕೊಂಡು ಪ್ರಾಚೀನ ಈಜಿಪ್ಟ್ನ ರಾಜರಾದ ಫೆರೋಗಳು
ಸಾವಿಗೆ ಹಾಗೂ ಮತ್ತೊಂದು ಲೋಕದ ಪ್ರಯಾಣಕ್ಕೆ ಮಾಡಿಕೊಳ್ಳುತ್ತಿದ್ದ ಸಿದ್ಧತೆಗಳ ಕೌತುಕತೆ ಮನಸ್ಸನ್ನಾವರಿಸಿಕೊಂಡಿತು.
j.balakrishna@gmail.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)