Translate

Tipu Sultan ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Tipu Sultan ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ನವೆಂಬರ್ 20, 2022

ವ್ಯಂಗ್ಯಚಿತ್ರದಲ್ಲಿ ಟಿಪ್ಪು ಮತ್ತು ಹುಲಿಯ ರೂಪಕ

 ಟಿಪ್ಪು ಸುಲ್ತಾನ್‌ ಬದುಕಿದ್ದಾಗಲೇ ಬ್ರಿಟಿಷರು ಆತನ ವ್ಯಂಗ್ಯಚಿತ್ರ ಹಾಗೂ ಫ್ರೆಂಚರು ಹೈದರಾಲಿಯ ವ್ಯಂಗ್ಯಚಿತ್ರ ರಚಿಸಿದ್ದರು. ಈ ಕುರಿತು ನನ್ನ ಲೇಖನ ಇಂದಿನ (20/11/2022)ರ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಸಂಪೂರ್ಣ ಲೇಖನ ಇಲ್ಲಿದೆ: 



18ನೇ ಶತಮಾನದಲ್ಲಿ ಟಿಪ್ಪೂ ಸುಲ್ತಾನ್ ಮೈಸೂರಿನ ಮೇಲಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ. ಮೈಸೂರಿನ ಮೇಲೆ ಮೂರು ಬಾರಿ ದಾಳಿ ಮಾಡಿದ್ದರೂ ಅವರು ಯಶಸ್ವಿಯಾಗಿರಲಿಲ್ಲ. ಆದರೆ ಅವರು 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಟಿಪ್ಪೂನನ್ನು ಕೊಂದುಬಿಟ್ಟರು. `ಮೈಸೂರಿನ ಹುಲಿಯೆಂದು ಪ್ರಖ್ಯಾತನಾಗಿದ್ದ ಟಿಪ್ಪೂ ಸುಲ್ತಾನನನ್ನು ಮತ್ತು ಆತನ ಹುಲಿಯ ರೂಪಕವನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪೂ ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತç ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತçಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಟಿಪ್ಪುಸುಲ್ತಾನ್ `ವ್ಯಾಘ್ರಸ್ವಪ್ನವಾಗಿದ್ದ. ಬ್ರಿಟಿಷರನ್ನು ಎದುರಿಸುತ್ತಿದ್ದ ರೀತಿ ಹಾಗೂ ಬ್ರಿಟಿಷರ ಮೇಲಿನ ಅವನ ದ್ವೇಷ ಇಂಗ್ಲೆAಡಿನಲ್ಲಿ ದಂತಕತೆಯೇ ಆಗಿತ್ತು.


1800ರಲ್ಲಿ ಜೇಮ್ಸ್ ಸಾಲ್ಮಂಡ್ ಎಂಬಾತ ಬರೆದ `ಎ ರಿವ್ಯೂ ಆಫ್ ದ ಆರಿಜಿನ್, ಪ್ರೊಗ್ರೆಸ್ ಅಂಡ್ ರಿಸಲ್ಟ್ ಆಫ್ ದ ಲೇಟ್ ಡಿಸಿಸಿವ್ ವಾರ್ ಇನ್ ಮೈಸೂರ್ ವಿಥ್ ನೋಟ್ಸ್ಪುಸ್ತಕದ ಮುಂಪುಟದಲ್ಲಿ ಪ್ರಕಟವಾದ ಟಿಪ್ಪೂನ ಯಂತ್ರಹುಲಿಯ ರೇಖಾ ಚಿತ್ರ.

`ಶತ್ರುವಿನ ಶತ್ರು ತನಗೆ ಮಿತ್ರ' ಎಂಬAತೆ ಬ್ರಿಟಿಷರ ಶತ್ರುಗಳಾದ ಫ್ರೆಂಚರ ಗೆಳೆತನವನ್ನು ಟಿಪ್ಪು ಸುಲ್ತಾನನಿಗಿಂತ ಮೊದಲು ಆತನ ತಂದೆ ಹೈದರ್ ಆಲಿ ಗಳಿಸಿದ್ದ. ಬ್ರಿಟಿಷರು ಮತ್ತು ಫ್ರೆಂಚರು ಇಬ್ಬರೂ ಭಾರತದಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಪೈಪೋಟಿ ನಡೆಸುತ್ತಿದ್ದರು. ಫ್ರೆಂಚರ ಬಹುಮುಖ್ಯ ವ್ಯಾಪಾರ ಕೇಂದ್ರಸ್ಥಾನವಾಗಿದ್ದ ಪಾಂಡಿಚೆರಿ 1756ರಿಂದ 1763ರವರೆಗೆ ನಡೆದ ಏಳು ವರ್ಷಗಳ ಯುದ್ಧದಲ್ಲಿ ಹಾಗೂ ಪುನಃ 1775-1783ರವರೆಗೆ ನಡೆದ ಅಮೆರಿಕನ್ ಕ್ರಾಂತಿ ಯುದ್ಧದಲ್ಲಿ ಬ್ರಿಟಿಷರ ವಶವಾಗಿತ್ತು. ಆದರೆ 1778-1784ರವರೆಗೆ ನಡೆದ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸೋಲಿಸಿದರು. ಆಗ ಪಾಂಡಿಚೆರಿಯಿAದ ಹೊರದೂಡಲ್ಪಟ್ಟಿದ್ದ ಫ್ರೆಂಚ್ ಸೈನಿಕರು ಸಹ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದರು. ಪಾಂಡಿಚೆರಿ ಪುನಃ ಫ್ರೆಂಚರಿಗೇ ದೊರಕಿತು. ಇಡೀ ಫ್ರೆಂಚ್ ದೇಶ ಕುಣಿದಾಡಿತು ಹಾಗೂ ಹೈದರ್ ಆಲಿ ಮತ್ತು ಟಿಪ್ಪೂರನ್ನು ಹೊಗಳಿತು. ಹೈದರ್ ಆಲಿ 1782ರಲ್ಲಿ ಅನಾರೋಗ್ಯದಿಂದ ಮರಣಹೊಂದಿದ. 1783ರಲ್ಲಿ ಫ್ರೆಂಚ್ ಚಿತ್ರ ಕಲಾವಿದ ಆಂತ್ವಾನ್ ಬೋರೆಲ್ ಒಂದು ವ್ಯಂಗ್ಯಚಿತ್ರ ರಚಿಸಿ ಪ್ಯಾರಿಸ್‌ನಲ್ಲಿ ಪ್ರದರ್ಶನಕ್ಕಿರಿಸಿದ. ಅದರಲ್ಲಿ ಹೈದರ್ ಆಲಿ ಬ್ರಿಟಿಷ್ ಅಧಿಕಾರಿಯೊಬ್ಬನ ಕುಂಡೆಗೆ ಬರಲಿನಿಂದ ಹೊಡೆಯುತ್ತಿದ್ದಾನೆ ಹಾಗೂ ಬ್ರಿಟಿಷನ ಕುಂಡೆ ಕೆಂಪಗಾಗಿದೆ; ಹಿಂದಿನಿAದ ಫ್ರೆಂಚ್ ಸೈನಿಕನೊಬ್ಬ ಹೈದರಾಲಿಗೆ ಬರಲು ಸರಬರಾಜು ಮಾಡುತ್ತಿದ್ದಾನೆ. ಬ್ರಿಟಿಷ್ ಅಧಿಕಾರಿ ತನ್ನ ಬಾಯಿಯಿಂದ ಚೀಟಿಯೊಂದನ್ನು ಕಕ್ಕುತ್ತಿದ್ದಾನೆ ಹಾಗೂ ಅದರ ಮೇಲೆ `ಪಾಂಟಿಚೆರಿ' (ಪಾಂಡಿಚೆರಿ) ಎಂದು ಬರೆದಿದೆ. ಬೊರೆಲ್‌ನ ಈ ವ್ಯಂಗ್ಯಚಿತ್ರ ಹೈದರ್ ಮತ್ತು ಟಿಪ್ಪು ಸುಲ್ತಾನರ ಕೈಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೈನ್ಯದ ಸೋಲನ್ನು ಹಾಗೂ ಅದರಲ್ಲಿ ಫ್ರೆಂಚರ ಪಾತ್ರವನ್ನು ತೋರಿಸುತ್ತಿದೆ.



ಟಿಪ್ಪೂ ತನ್ನ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ನಗರದ ಹಲವೆಡೆ ವ್ಯಂಗ್ಯಚಿತ್ರಗಳೆನ್ನಬಹುದಾದ ಬೃಹತ್ ಚಿತ್ರಗಳನ್ನು ಬರೆಸಿದ್ದನೆಂಬ ಉಲ್ಲೇಖಗಳಿವೆ. ಅವುಗಳಲ್ಲಿ ಯೂರೋಪಿಯನ್ನರ, ವಿಶೇಷವಾಗಿ ಬ್ರಿಟಿಷರ ಮೇಲೆ ದಾಳಿ ಮಾಡುತ್ತಿರುವ ಹುಲಿ, ಆನೆಗಳ ಚಿತ್ರಗಳಿದ್ದವು. ಟಿಪ್ಪೂನ ಬ್ರಿಟಿಷರ ಬಗೆಗಿನ ಈ ವ್ಯಂಗ್ಯ ಭಾವನೆಯ ಉತ್ತುಂಗವೆAದರೆ ಆತ ಹೇಳಿ ಮಾಡಿಸಿದ ಬ್ರಿಟಿಷರ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಯಂತ್ರ ಗೊಂಬೆ. ಈಗ ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿರುವ ಈ ಯಂತ್ರಹುಲಿಯ ಎಡಭಾಗದಲ್ಲಿರುವ ಹಿಡಿಕೆಯನ್ನು ತಿರುಗಿಸಿದರೆ ಹುಲಿ ಗರ್ಜಿಸಿದಂತೆ ಹಾಗೂ ಕೆಳಗೆ ಬಿದ್ದಿರುವ ಬ್ರಿಟಿಷ್ ಸೈನಿಕ ರೋಧಿಸಿದಂತೆ ಶಬ್ದವಾಗುತ್ತದೆ. ಆ ಕಾಲದಲ್ಲಿ ಟಿಪ್ಪೂನನ್ನು ಒಳಗೊಂಡAತೆ ಅದನ್ನು ನೋಡಿದವರೆಲ್ಲರಿಗೂ ಅದು ಮನರಂಜನೆ ನೀಡುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ. 1799ರಲ್ಲಿ ಟಿಪ್ಪೂನನ್ನು ಕೊಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೈನಿಕರು ಅದನ್ನು ಲಂಡನ್ನಿಗೆ ಕೊಂಡೊಯ್ದು ಅಲ್ಲಿ ಪ್ರದರ್ಶನಕ್ಕಿರಿಸಿ ಅವರೂ ಸಹ ಮನರಂಜನೆ ಪಡೆದುಕೊಂಡಿದ್ದಾರೆ. ಟಿಪ್ಪೂ ಸತ್ತನಂತರ 1800ರಲ್ಲಿ ಜೇಮ್ಸ್ ಸಾಲ್ಮಂಡ್ ಎಂಬಾತ ಬರೆದ `ಎ ರಿವ್ಯೂ ಆಫ್ ದ ಆರಿಜಿನ್, ಪ್ರೊಗ್ರೆಸ್ ಅಂಡ್ ರಿಸಲ್ಟ್ ಆಫ್ ದ ಲೇಟ್ ಡಿಸಿಸಿವ್ ವಾರ್ ಇನ್ ಮೈಸೂರ್ ವಿಥ್ ನೋಟ್ಸ್ಪುಸ್ತಕದ ಮುಂಪುಟದಲ್ಲೇ ಟಿಪ್ಪೂನ ಯಂತ್ರ ಹುಲಿಯ ಚಿತ್ರವಿತ್ತು ಹಾಗೂ ಆ ಯಂತ್ರ ಹುಲಿಯ ಮೊಟ್ಟಮೊದಲ ಚಿತ್ರವೂ ಸಹ ಇದೇ ಆಗಿದೆ.


ಟಿಪ್ಪೂ ಬ್ರಿಟಿಷರನ್ನು ಎದುರಿಸುತ್ತಿದ್ದ ದಂತಕತೆಯೂ ಸಹ ಟಿಪ್ಪೂ ವ್ಯಂಗ್ಯಚಿತ್ರದ ವಸ್ತುವಾಗಲು ಪ್ರೇರೇಪಣೆ ನೀಡಿದೆ. ಟಿಪ್ಪೂ ಬದುಕಿದ್ದಾಗಲೇ
1791ರಲ್ಲಿ ಜೇಮ್ಸ್ ಗಿಲ್‌ರೇ ಎಂಬ (ವ್ಯಂಗ್ಯ) ಚಿತ್ರಕಾರ ಇಂಗ್ಲೆAಡಿನಲ್ಲಿ `ದ ಕಮಿಂಗ್ ಆನ್ ಆಫ್ ದ ಮಾನ್ಸೂನ್ಸ್ ಆರ್ ದ ರಿಟ್ರೀಟ್ ಫ್ರಂ ಸೆರಿಂಗಪಟA’ (The Coming-on of the monsoons or – the retreat from Seringapatam) [ಬ್ರಿಟಿಷರು ಶ್ರೀರಂಗಪಟ್ಟಣವನ್ನು ಸೆರಿಂಗಪಟA ಎಂದು ಕರೆಯುತ್ತಿದ್ದರು] ಎಂಬ ವ್ಯಂಗ್ಯಚಿತ್ರ ಟಿಪ್ಪೂನ ಬಗೆಗೆ ಬರೆದ ಜಗತ್ತಿನ ಮೊಟ್ಟಮೊದಲ ವ್ಯಂಗ್ಯಚಿತ್ರವೆನ್ನಬಹುದು. ಆ ಚಿತ್ರದಲ್ಲಿ  ಈ ವರ್ಣಚಿತ್ರದ ಮೂಲ ಪ್ರತಿ ಈಗಲೂ ಲಂಡನ್ನಿನ ನ್ಯಾಶನಲ್ ಪರ‍್ಟೆçöÊಟ್ ಗ್ಯಾಲರಿಯಲ್ಲಿದೆ. ಈ ವ್ಯಂಗ್ಯಚಿತ್ರದಲ್ಲಿ ಚಾರ್ಲ್ಸ್ ಕಾರ್ನ್ವಾಲಿಸ್ ಟಿಪ್ಪೂನ `ದಾಳಿಗೆ ಹೆದರಿ ತನ್ನ ಹೇಸರಕತ್ತೆಯ ಮೇಲೆ ಕೂತು ಓಡುತ್ತಿದ್ದಾನೆ. ಕೋಟೆಯ ಹಿಂದೆ ಗಹಗಹಿಸುತ್ತಾ ನಿಂತಿರುವ ಟಿಪ್ಪು ಕತ್ತಿ ಹಿಡಿದು ಕಾರ್ನ್ವಾಲಿಸ್ ಹಾಗೂ ಓಡುತ್ತಿರುವ ಬ್ರಿಟಿಷ್ ಸೈನಿಕರ ಮೇಲೆ ಮೇಲೆ ಅತ್ಯಂತ ರಭಸದಿಂದ (`ಕಮಿಂಗ್ ಆನ್ ಆಫ್ ದ ಮಾನ್ಸೂನ್!’) ಮೂತ್ರ ಮಾಡುತ್ತಿದ್ದಾನೆ. ಕಾರ್ನ್ವಾಲಿಸ್‌ನ ಟೋಪಿ ಹಾರಿದೆ, ಕತ್ತಿ ಕೈಯಿಂದ ಜಾರಿದೆ ಹಾಗೂ ಪಿಸ್ತೂಲು ಕೆಳಗೆ ಬಿದ್ದಿದೆ. ಹಲವಾರು ಬ್ರಿಟಿಷ್ ಸೈನಿಕರು ನೆಲದ ಮೇಲೆ ಸತ್ತು ಬಿದ್ದಿದ್ದಾರೆ. ಇದರಿಂದಲೇ ಬ್ರಿಟಿಷರಿಗೆ ಟಿಪ್ಪೂನನ್ನು ಕಂಡರೆ ಎಷ್ಟು ಹೆದರಿಕೆ ಇತ್ತೆಂದು ತಿಳಿಯುತ್ತದೆ.

ಟಿಪ್ಪೂನನ್ನು ಕೊಂದದ್ದೂ ಸಹ ಇಂಗ್ಲೆAಡಿನಲ್ಲಿ ವ್ಯಂಗ್ಯಚಿತ್ರದ ವಿಷಯವಾಯಿತು. ಆದರೆ ಅದರಲ್ಲಿ ಲೇವಡಿ ಮಾಡಿರುವುದು ಟಿಪ್ಪೂನನ್ನಲ್ಲ, ಬದಲಿಗೆ ಅವನನ್ನು ಕೊಂದ ಬ್ರಿಟಿಷರನ್ನು. 1760ರಿಂದ 1790ರವರೆಗೂ ಬ್ರಿಟಿಷರಿಗೆ ಮೈಸೂರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಟಿಪ್ಪು ಬ್ರಿಟಿಷರನ್ನು ಬಗ್ಗುಬಡೆಯಲು ಫ್ರೆಂಚರ ಸಹಾಯ ಕೋರುತ್ತಿದ್ದ. ನೆಪೋಲಿಯನ್ ಈಜಿಪ್ಟಿಗೆ ಧಾವಿಸಿದಾಗ ಆತ ಭಾರತಕ್ಕೂ ಬಂದುಬಿಡಬಹುದೆAಬ ಹೆದರಿಕೆ ಬ್ರಿಟಿಷರನ್ನು ಕಾಡಿತು. ಅದಕ್ಕೆ ಮೊದಲೇ ಮೈಸೂರನ್ನು ವಶಪಡಿಸಿಕೊಳ್ಳಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಯೋಜನೆ ಹಾಕಿತು. ಆದರೆ ಟಿಪ್ಪೂ ಸುಲ್ತಾನನಿಗೆ ಫ್ರೆಂಚರ ಸಹಾಯ ದೊರಕಲಿಲ್ಲ. ಅಮೆರಿಕನ್ ಕ್ರಾಂತಿಯ ಕೊನೆಯಲ್ಲಿ ಫ್ರಾನ್ಸ್ನ ದೊರೆ 16ನೇ ಲೂಯಿ ಬ್ರಿಟನ್‌ನೊಂದಿಗೆ ಶಾಂತಿ ಸಂಧಾನ ಮಾಡಿಕೊಂಡು ಭಾರತದಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮಾಡುವುದಿಲ್ಲವೆಂದು ಘೋಷಿಸಿದ. ಇದು ಟಿಪ್ಪೂನನ್ನು ರೊಚ್ಚಿಗೆಬ್ಬಿಸಿತು ಹಾಗೂ ಹಲವಾರು ಫ್ರೆಂಚ್ ಅಧಿಕಾರಿಗಳನ್ನೂ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 16ನೇ ಲೂಯಿಯ ನೌಕಾ ಸೇನೆಯ ಕಮೀಶನರ್ ಲೌನೆ ಪತ್ರವೊಂದರಲ್ಲಿ ವ್ಯಕ್ತಪಡಿಸಿದ್ದಂತೆ ಫ್ರಾನ್ಸ್ ಬ್ರಿಟನ್‌ನೊಂದಿಗೆ ಸಂಧಾನ ಮಾಡಿಕೊಳ್ಳದೆ ಟಿಪ್ಪೂನ ಸಹಾಯದೊಂದಿಗೆ ಬ್ರಿಟಿಷರ ಮೇಲೆ ಯುದ್ಧ ಮುಂದುವರಿಸಿದ್ದಲ್ಲಿ ಅವರನ್ನು ಭಾರತದಲ್ಲಿ ಬಗ್ಗು ಬಡಿಯಬಹುದಿತ್ತು.

 


ಬ್ರಿಟಿಷರು ಇಪ್ಪತ್ತೆöÊದು ಸಾವಿರ ಸೈನಿಕರ ಸೇನೆಯೊಂದಿಗೆ ಮಾರ್ಚ್ 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದರು. ಒಂದು ತಿಂಗಳಿಗೂ ಹೆಚ್ಚು ಕಾಲ ಟಿಪ್ಪೂನ ಕೋಟೆ ಅಭೇದ್ಯವಾಗಿತ್ತು. ಕೊನೆಗೂ 4ನೇ ಮೇ ಬ್ರಿಟಿಷರು ಒಳನುಗ್ಗುವಲ್ಲಿ ಯಶಸ್ವಿಯಾದರು. ಅವರೊಂದಿಗೆ ವೀರಾವೇಶದಿಂದ ಹೋರಾಡಿದ ಟಿಪ್ಪು ಸಾವನ್ನಪ್ಪಿದ. ಅವನ ಸಾವಿನ ನಂತರ ನಲವತ್ತೆಂಟು ಗಂಟೆಗಳ ಕಾಲ ಬ್ರಿಟಿಷರು ಟಿಪ್ಪೂನ ಅರಮನೆ ಹಾಗೂ ನಗರವನ್ನು ಕೊಳ್ಳೆಹೊಡೆಯುತ್ತಾರೆ, ಸಾವಿರಾರು ಜನರನ್ನು ಕೊಲ್ಲುತ್ತಾರೆ. ಟಿಪ್ಪೂನ ಸಾವಿನಿಂದ ಬ್ರಿಟನ್ನಿನ ಜನ ಸಂತೋಷದಿAದ ಕುಣಿದಾಡಿದರಂತೆ. ಆಗ ಅಕ್ಟೋಬರ್ 8, 1799ರಂದು `ದ ಡೆತ್ ಆಫ್ ಟಿಪ್ಪೂ ಆರ್ ಬಿಸೀಜಿಂಗ್ ದ ಹೇರಂ(The death of Tippoo or Besieging the haram!!!) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು. ಆ ವ್ಯಂಗ್ಯಚಿತ್ರದಲ್ಲಿ ಟಿಪ್ಪೂನನ್ನು ಕೊಂದನAತರ ಅವನ ಅಂತಃಪುರಕ್ಕೆ ನುಗ್ಗಿ ಟಿಪ್ಪೂನ ರಾಣಿಯರನ್ನು ಅತ್ಯಾಚಾರ ಮಾಡುತ್ತಿರುವುದು ಆ ವ್ಯಂಗ್ಯಚಿತ್ರದಲ್ಲಿದೆ. ಅವರಲ್ಲಿ ಒಬ್ಬ ಮಹಿಳೆಯನ್ನು ಕೊಂಡೊಯ್ಯುತ್ತಿರುವ ಒಬ್ಬಾತ, `uಡಿಡಿಚಿh mಥಿ ಊoಟಿeಥಿ, ಟಿoತಿ ಜಿoಡಿ ಣhe ಃಟಚಿಛಿಞ ಎoe’ ಎನ್ನುತ್ತಿದ್ದಾನೆ (`ಬ್ಲಾಕ್ ಜೋಕ್ಎನ್ನುವುದು ಆಗಿನ ಇಂಗ್ಲಿಷಿನಲ್ಲಿ ಹೆಣ್ಣಿನ ಜನನಾಂಗಕ್ಕೆ ಇದ್ದ ಅಡ್ಡಹೆಸರು). ಮತ್ತೊಬ್ಬಾತ `Cheerup my girls, will supply his place well’ ಎನ್ನುತ್ತಿದ್ದಾನೆ. ಒಬ್ಬ ಹೆಣ್ಣು ಒಬ್ಬಾತನನ್ನು ಕೆಳಕ್ಕೆ ದಬ್ಬಿ ಕುತ್ತಿಗೆ ಹಿಸುಕುತ್ತಿದ್ದಾಳೆ.

ಆದರೆ ಬ್ರಿಟನ್ನಿನ ವಸಾಹತುಶಾಹಿ ದಬ್ಬಾಳಿಕೆ, ಆಕ್ರಮಣವನ್ನು ಬ್ರಿಟನ್ನಿನ ಹಲವಾರು ಜನ ವಿರೋಧಿಸುತ್ತಿದ್ದರು. `ದ ಡೆತ್ ಆಫ್ ಟಿಪ್ಪೂ ಆರ್ ಬಿಸೀಜಿಂಗ್ ದ ಹೇರಂವ್ಯಂಗ್ಯಚಿತ್ರ ಅಂತಹ ಒಂದು ವಿರೋಧದ ಅಭಿವ್ಯಕ್ತಿ ಎನ್ನುವವರಿದ್ದಾರೆ. `ಭಾರತೀಯರು ಅನಾಗರಿಕರು ಹಾಗೂ ಅಲ್ಲಿನ ರಾಜ, ಮಹಾರಾಜರುಗಳಿದಲೇ ದಬ್ಬಾಳಿಕೆಗೆ ಒಳಗಾದವರು. ಅಲ್ಲಿನ ಜನರನ್ನು ಸಭ್ಯ, ನಾಗರಿಕ ಬ್ರಿಟಿಷರಾದ ನಾವು ಕಾಪಾಡುತ್ತಿದ್ದೇವೆಎನ್ನುವ ಚಿತ್ರಣವನ್ನು ಬ್ರಿಟನ್ನಿಗೆ ಕೊಟ್ಟಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ ಈ ವ್ಯಂಗ್ಯಚಿತ್ರದ್ದಾಗಿತ್ತು.

ಆದರೆ ಆ ವ್ಯಂಗ್ಯಚಿತ್ರದಲ್ಲಿ ತೋರಿಸಿರುವ ಹೆಣ್ಣಿನ ಸಾಕಷ್ಟು ನಗ್ನತೆ ಬ್ರಿಟಿಷರ ವಸಾಹತುಶಾಹಿ ದಬ್ಬಾಳಿಕೆಯನ್ನು ತೋರಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಆಗಿನ ಬ್ರಿಟಿಷ್ `ಸಭ್ಯ ನಾಗರಿಕರಮನಸ್ಸಿಗೆ ಕಚಗುಳಿ ಇಡುವುದಷ್ಟೇ ಆಗಿತ್ತು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಚರಿತ್ರಕಾರ ತನ್ನ 2006`City of Laughter: Sex and Satire in Eighteenth-century London’ ಪುಸ್ತಕದಲ್ಲಿ ಆ ಸಮಯದ ವ್ಯಂಗ್ಯಚಿತ್ರ ಮತ್ತು ಅಶ್ಲೀಲ ಸಾಹಿತ್ಯದ ನಡುವಿನ ಸಂಬAಧಗಳ ವಿಶ್ಲೇಷಣೆಯಲ್ಲಿ ತಿಳಿಸಿದ್ದಾನೆ.

ಈ ಚಿತ್ರ ಬಿಡಿಸಿದ ಕಲಾಕಾರನಿಗೆ ಆಗಿನ ಭಾರತೀಯ ಸಮಾಜದ ಹೆಣ್ಣಿನ ಚಿತ್ರಣವಿರಲಿಲ್ಲವೆನ್ನಿಸುತ್ತದೆ, ಏಕೆಂದರೆ ಆ ವ್ಯಂಗ್ಯಚಿತ್ರದಲ್ಲಿನ ಹೆಣ್ಣುಗಳು ಧರಿಸಿರುವ ವಸ್ತçಗಳು ಯೂರೋಪಿಯನ್ ಹೆಣ್ಣುಗಳ ವಸ್ತçಗಳಂತಿವೆ. ಆ ವ್ಯಂಗ್ಯಚಿತ್ರ ಬಿಡಿಸಿದ ಕಲಾವಿದ ಯಾರೆಂಬುದರ ಬಗ್ಗೆ ಈಗಲೂ ಏಕಾಭಿಪ್ರಾಯವಿಲ್ಲ- ಕೆಲವರು ರೋಲ್ಯಾಂಡ್‌ಸನ್ ಎಂದರೆ ಆ ಚಿತ್ರ ರಚನೆ ಹಾಗೂ ಅದರಲ್ಲಿನ ಬರಹದ ಶೈಲಿಯಿಂದ ಕೆಲವರು ಜಾನ್ ಕಾಸ್ ಎನ್ನುತ್ತಾರೆ.

ಟಿಪ್ಪು ಸುಲ್ತಾನ್ ಹುಟ್ಟು ಹಾಕಿದ್ದ ಹುಲಿಯ ರೂಪಕ ಬ್ರಿಟಿಷರಿಗೆ ಸವಾಲಾಗಿತ್ತು. ಬ್ರಿಟಿಷರ ಲಾಂಛನ ಸಿಂಹವಾಗಿತ್ತು ಹಾಗೂ ಅವರು ಹುಲಿಯನ್ನು ಸಿಂಹ ಕೊಲ್ಲುವ ಚಿತ್ರಗಳನ್ನು ಸಾಧ್ಯವಾದೆಡೆಯಲ್ಲಾ ಬಳಸಿದರು. ಟಿಪ್ಪೂನನ್ನು ಕೊಂದ ಸೈನಿಕರಿಗೆ ಇಂಗ್ಲೆAಡಿನಲ್ಲಿ `ಸೆರಿಂಗಪಟA ಪದಕನೀಡಿ ಸನ್ಮಾನಿಸಿದರು. ಆ ಪದಕದಲ್ಲಿ ಒಂದೆಡೆ ಹುಲಿಯನ್ನು ಸಿಂಹ ಕೊಲ್ಲುತ್ತಿರುವ ಚಿತ್ರವಿತ್ತು. ಟಿಪ್ಪೂ ಸಾವಿನ ನಂತರವೂ ಸಹ ಹುಲಿಯ ಸಂಕೇತದ ಮೇಲಿನ ಅವರ ಸಿಟ್ಟು ಕಡಿಮೆಯಾಗಲಿಲ್ಲ. ಅದೇ ಸಿಟ್ಟಿನಿಂತ ಭಾರತದ ಕಾಡುಗಳÀಲ್ಲಿ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು.



1857ರ ಸಿಪಾಯಿ ದಂಗೆಯ ಸಮಯದಲ್ಲಿ ಬ್ರಿಟನ್ನಿನ ವ್ಯಂಗ್ಯಚಿತ್ರಗಳಿಗೆAದೇ ಮೀಸಲಾಗಿರುವ ಪತ್ರಿಕೆ `ಪಂಚ್1857ರ ಆಗಸ್ಟ್ 22ರ ಸಂಚಿಕೆಯಲ್ಲಿ ಜಾನ್ ಟೆನ್ನಿಯಲ್ ಎಂಬಾತನ `ದ ಬ್ರಿಟಿಷ್ ಲಯನ್ಸ್ ವೆನ್‌ಜಿಯೆನ್ಸ್ ಆನ್ ದ ಬೆಂಗಾಲ್ ಟೈಗರ್(The British Lion’s Vengeance on the Bengal Tiger) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು. ಅದರಲ್ಲಿ ಹುಲಿಯೊಂದು ಮಗು ಮತ್ತೊಂದು ಹೆಣ್ಣಿನ ಮೇಲೆ ದಾಳಿ ಮಾಡಿದೆ ಹಾಗೂ ಆ ಮಗು ಮತ್ತು ಹೆಣ್ಣನ್ನು ಕಾಪಾಡಲೋ ಎಂಬAತೆ ಸಿಂಹವೊAದು ಹುಲಿಯ ಮೇಲೆ ದಾಳಿ ಮಾಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷನ ಮೇಲೆ ದಾಳಿ ಮಾಡಿ ಘರ್ಜಿಸುತ್ತಿದ್ದರೆ `ಪಂಚ್ನ ವ್ಯಂಗ್ಯಚಿತ್ರ ಅದಕ್ಕೆ ವಿರುದ್ಧವಾಗಿ ಹುಲಿಯ ಮೇಲೆ ದಾಳಿ ಮಾಡಿ ಸೇಡು ತೀರಿಸಿಕೊಳ್ಳುತ್ತಿರುವಂತಿದೆ. ಅದರ ಶೀರ್ಷಿಕೆಯೂ ಅದನ್ನೇ ಹೇಳುತ್ತದೆ.

j.balakrishna@gmail.com

ಗುರುವಾರ, ಮಾರ್ಚ್ 30, 2017

ಟಿಪ್ಪು ಸುಲ್ತಾನ್ ಮತ್ತು ವ್ಯಂಗ್ಯಚಿತ್ರ

19/3/2017ರ `ಪ್ರಜಾವಾಣಿ'ಯ ಮುಕ್ತಛಂದದಲ್ಲಿ ಪ್ರಕಟವಾದ ನನ್ನ ಲೇಖನ:
 
ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಮೈಸೂರಿನ ಮೇಲಿನ ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ’ಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ. ಮೈಸೂರಿನ ಮೇಲೆ ಮೂರು ಬಾರಿ ದಾಳಿ ಮಾಡಿದ್ದರೂ ಅವರು ಯಶಸ್ವಿಯಾಗಿರಲಿಲ್ಲ. ಆದರೆ ಅವರು 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಟಿಪ್ಪು ಅವಸಾನಕ್ಕೆ ಕಾರಣರಾದರು.

‘ಮೈಸೂರಿನ ಹುಲಿ’ಯೆಂದು ಪ್ರಖ್ಯಾತನಾಗಿದ್ದ ಟಿಪ್ಪು ಸುಲ್ತಾನನನ್ನು ಮತ್ತು ಆತನ ಹುಲಿಯ ರೂಪಕವನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪು ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತ್ರ ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತ್ರಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಟಿಪ್ಪುಸುಲ್ತಾನ್ ‘ವ್ಯಾಘ್ರಸ್ವಪ್ನ’ವಾಗಿದ್ದ. ಬ್ರಿಟಿಷರನ್ನು ಎದುರಿಸುತ್ತಿದ್ದ ರೀತಿ ಹಾಗೂ ಬ್ರಿಟಿಷರ ಮೇಲಿನ ಅವನ ದ್ವೇಷ ಇಂಗ್ಲೆಂಡಿನಲ್ಲಿ ದಂತಕತೆಯೇ ಆಗಿತ್ತು.

ಟಿಪ್ಪು ತನ್ನ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ನಗರದ ಹಲವೆಡೆ ವ್ಯಂಗ್ಯಚಿತ್ರಗಳೆನ್ನಬಹುದಾದ ಬೃಹತ್ ಚಿತ್ರಗಳನ್ನು ಬರೆಸಿದ್ದನೆಂಬ ಉಲ್ಲೇಖಗಳಿವೆ. ಅವುಗಳಲ್ಲಿ ಯೂರೋಪಿಯನ್ನರ, ವಿಶೇಷವಾಗಿ ಬ್ರಿಟಿಷರ ಮೇಲೆ ದಾಳಿ ಮಾಡುತ್ತಿರುವ ಹುಲಿ, ಆನೆಗಳ ಚಿತ್ರಗಳಿದ್ದವು. ಬ್ರಿಟಿಷರ ಬಗೆಗಿನ ಟಿಪ್ಪುವಿನ ಈ ವ್ಯಂಗ್ಯ ಭಾವನೆಯ ಉತ್ತುಂಗವೆಂದರೆ, ಆತ ಹೇಳಿ ಮಾಡಿಸಿದ ಬ್ರಿಟಿಷರ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಯಂತ್ರ ಗೊಂಬೆ.

1799ರಲ್ಲಿ ಟಿಪ್ಪೂನನ್ನು ಕೊಂದ ‘ಈಸ್ಟ್ ಇಂಡಿಯಾ ಕಂಪೆನಿ’ಯ ಸೈನಿಕರು ಯಂತ್ರಹುಲಿಯನ್ನು ಲಂಡನ್ನಿಗೆ ಕೊಂಡೊಯ್ದು ಅಲ್ಲಿ ಪ್ರದರ್ಶನಕ್ಕಿರಿಸಿ, ಅವರೂ ಸಹ ಮನರಂಜನೆ ಪಡೆದುಕೊಂಡಿದ್ದಾರೆ. ಟಿಪ್ಪು ಸತ್ತನಂತರ 1800ರಲ್ಲಿ ಜೇಮ್ಸ್ ಸಾಲ್ಮಂಡ್ ಎಂಬಾತ ಬರೆದ ‘ಎ ರಿವ್ಯೂ ಆಫ್ ದ ಆರಿಜಿನ್, ಪ್ರೊಗ್ರೆಸ್ ಅಂಡ್ ರಿಸಲ್ಟ್ ಆಫ್ ದ ಲೇಟ್ ಡಿಸಿಸಿವ್ ವಾರ್ ಇನ್ ಮೈಸೂರ್ ವಿಥ್ ನೋಟ್ಸ್’ ಪುಸ್ತಕದ ಮುಖಪುಟದಲ್ಲೇ ಯಂತ್ರ ಹುಲಿಯ ಚಿತ್ರವಿತ್ತು ಹಾಗೂ ಆ ಯಂತ್ರ ಹುಲಿಯ ಮೊಟ್ಟಮೊದಲ ಚಿತ್ರವೂ ಸಹ ಇದೇ ಆಗಿದೆ.


ಟಿಪ್ಪು ಬ್ರಿಟಿಷರನ್ನು ಎದುರಿಸುತ್ತಿದ್ದ ದಂತಕತೆಯೂ ಸಹ ಟಿಪ್ಪು ವ್ಯಂಗ್ಯಚಿತ್ರದ ವಸ್ತುವಾಗಲು ಪ್ರೇರೇಪಣೆ ನೀಡಿದೆ. ಟಿಪ್ಪು ಬದುಕಿದ್ದಾಗಲೇ 1791ರಲ್ಲಿ ಜೇಮ್ಸ್ ಗಿಲ್‌ರೇ ಎಂಬ (ವ್ಯಂಗ್ಯ) ಚಿತ್ರಕಾರ ಇಂಗ್ಲೆಂಡಿನಲ್ಲಿ ‘ದ ಕಮಿಂಗ್ ಆನ್ ಆಫ್ ದ ಮಾನ್ಸೂನ್ಸ್ ಆರ್ ದ ರಿಟ್ರೀಟ್ ಫ್ರಂ ಸೆರಿಂಗಪಟಂ’ (The Coming-on of the monsoons or – the retreat from Seringapatam) (ಬ್ರಿಟಿಷರು ಶ್ರೀರಂಗಪಟ್ಟಣವನ್ನು ‘ಸೆರಿಂಗಪಟಂ’ ಎಂದು ಕರೆಯುತ್ತಿದ್ದರು) ಎಂಬ ವ್ಯಂಗ್ಯಚಿತ್ರ ಟಿಪ್ಪು ಬಗೆಗೆ ಬರೆದ ಜಗತ್ತಿನ ಮೊಟ್ಟಮೊದಲ ವ್ಯಂಗ್ಯಚಿತ್ರವೆನ್ನಬಹುದು. ಆ ವರ್ಣಚಿತ್ರದ ಮೂಲ ಪ್ರತಿ ಈಗಲೂ ಲಂಡನ್ನಿನ ‘ನ್ಯಾಶನಲ್ ಪೋರ್ಟ್ರೈಟ್ ಗ್ಯಾಲರಿ’ಯಲ್ಲಿದೆ.

ಈ ವ್ಯಂಗ್ಯಚಿತ್ರದಲ್ಲಿ ಚಾರ್ಲ್ಸ್ ಕಾರ್ನ್‌ವಾಲಿಸ್ ಟಿಪ್ಪೂವಿನ ‘ದಾಳಿ’ಗೆ ಹೆದರಿ ತನ್ನ ಹೇಸರಕತ್ತೆಯ ಮೇಲೆ ಕೂತು ಓಡುತ್ತಿದ್ದಾನೆ. ಕೋಟೆಯ ಹಿಂದೆ ಗಹಗಹಿಸುತ್ತಾ ನಿಂತಿರುವ ಟಿಪ್ಪು ಕತ್ತಿ ಹಿಡಿದು ಕಾರ್ನ್‌ವಾಲಿಸ್ ಹಾಗೂ ಓಡುತ್ತಿರುವ ಬ್ರಿಟಿಷ್ ಸೈನಿಕರ ಮೇಲೆ ಮೇಲೆ ಅತ್ಯಂತ ರಭಸದಿಂದ (‘ಕಮಿಂಗ್ ಆನ್ ಆಫ್ ದ ಮಾನ್ಸೂನ್!’) ಮೂತ್ರ ಮಾಡುತ್ತಿದ್ದಾನೆ. ಕಾರ್ನ್‌ವಾಲಿಸ್‌ನ ಟೋಪಿ ಹಾರಿದೆ, ಕತ್ತಿ ಕೈಯಿಂದ ಜಾರಿದೆ ಹಾಗೂ ಪಿಸ್ತೂಲು ಕೆಳಗೆ ಬಿದ್ದಿದೆ. ಬ್ರಿಟಿಷ್ ಸೈನಿಕರು ನೆಲದ ಮೇಲೆ ಸತ್ತು ಬಿದ್ದಿದ್ದಾರೆ. ಇದರಿಂದಲೇ ಬ್ರಿಟಿಷರಿಗೆ ಟಿಪ್ಪೂನನ್ನು ಕಂಡರೆ ಎಷ್ಟು ಹೆದರಿಕೆ ಇತ್ತೆಂದು ತಿಳಿಯುತ್ತದೆ.

ಟಿಪ್ಪೂನನ್ನು ಕೊಂದದ್ದೂ ಸಹ ಇಂಗ್ಲೆಂಡಿನಲ್ಲಿ ವ್ಯಂಗ್ಯಚಿತ್ರದ ವಿಷಯವಾಯಿತು. ಆದರೆ ಅದರಲ್ಲಿ ಲೇವಡಿ ಮಾಡಿರುವುದು ಟಿಪ್ಪೂವನ್ನಲ್ಲ, ಅವನನ್ನು ಕೊಂದ ಬ್ರಿಟಿಷರನ್ನು. 1760ರಿಂದ 1790ರವರೆಗೂ ಬ್ರಿಟಿಷರಿಗೆ ಮೈಸೂರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಟಿಪ್ಪು ಬ್ರಿಟಿಷರನ್ನು ಬಗ್ಗುಬಡೆಯಲು ಫ್ರೆಂಚರ ಸಹಾಯ ಕೋರುತ್ತಿದ್ದ. ನೆಪೋಲಿಯನ್ ಈಜಿಪ್ಟಿಗೆ ಧಾವಿಸಿದಾಗ ಆತ ಭಾರತಕ್ಕೂ ಬಂದುಬಿಡಬಹುದೆಂಬ ಹೆದರಿಕೆ ಬ್ರಿಟಿಷರನ್ನು ಕಾಡಿತು. ಅದಕ್ಕೆ ಮೊದಲೇ ಮೈಸೂರನ್ನು ವಶಪಡಿಸಿಕೊಳ್ಳಲು ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ’ ಯೋಜನೆ ಹಾಕಿತು. ಇಪ್ಪತ್ತೈದು ಸಾವಿರ ಸೈನಿಕರ ಸೇನೆಯೊಂದಿಗೆ ಮಾರ್ಚ್ 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದರು. ಒಂದು ತಿಂಗಳಿಗೂ ಹೆಚ್ಚು ಕಾಲ ಟಿಪ್ಪೂ ಕೋಟೆ ಅಭೇದ್ಯವಾಗಿತ್ತು. ಕೊನೆಗೂ ಬ್ರಿಟಿಷರು ಒಳನುಗ್ಗುವಲ್ಲಿ ಯಶಸ್ವಿಯಾದರು. ಅವರೊಂದಿಗೆ ವೀರಾವೇಶದಿಂದ ಹೋರಾಡಿದ ಟಿಪ್ಪು ಸಾವನ್ನಪ್ಪಿದ. ಅವನ ಸಾವಿನ ನಂತರ ನಲವತ್ತೆಂಟು ಗಂಟೆಗಳ ಕಾಲ ಬ್ರಿಟಿಷರು ಟಿಪ್ಪು ಅರಮನೆ ಹಾಗೂ ನಗರವನ್ನು ಕೊಳ್ಳೆಹೊಡೆಯುತ್ತಾರೆ, ಸಾವಿರಾರು ಜನರನ್ನು ಕೊಲ್ಲುತ್ತಾರೆ. ಟಿಪ್ಪು ಸಾವಿನಿಂದ ಬ್ರಿಟನ್ನಿನ ಜನ ಸಂತೋಷದಿಂದ ಕುಣಿದಾಡಿದರಂತೆ.

ಆಗ ಅಕ್ಟೋಬರ್ 8, 1799ರಂದು ‘ದ ಡೆತ್ ಆಫ್ ಟಿಪ್ಪು ಆರ್ ಬಿಸೀಜಿಂಗ್ ದ ಹೇರಂ’ (The death of Tippoo or Besieging the haram!!!) ) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು.  ಆ ವ್ಯಂಗ್ಯಚಿತ್ರದಲ್ಲಿ ಟಿಪ್ಪೂನನ್ನು ಕೊಂದನಂತರ ಅವನ ಅಂತಃಪುರಕ್ಕೆ ನುಗ್ಗಿ ಟಿಪ್ಪೂನ ರಾಣಿಯರನ್ನು ಅತ್ಯಾಚಾರ ಮಾಡುತ್ತಿರುವ ದೃಶ್ಯವಿದೆ. ಒಬ್ಬ ಮಹಿಳೆಯನ್ನು ಕೊಂಡೊಯ್ಯುತ್ತಿರುವ ಒಬ್ಬಾತ, ‘Hurrah my Honey, now for the Black Joke’ ಎನ್ನುತ್ತಿದ್ದಾನೆ (‘ಬ್ಲಾಕ್ ಜೋಕ್’ ಎನ್ನುವುದು ಆಗಿನ ಇಂಗ್ಲಿಷಿನಲ್ಲಿ ಹೆಣ್ಣಿನ ಜನನಾಂಗಕ್ಕೆ ಇದ್ದ ಅಡ್ಡಹೆಸರು). ಮತ್ತೊಬ್ಬಾತ ‘Cheer up my girls, will supply his place well’ ಎನ್ನುತ್ತಿದ್ದಾನೆ. ಹೆಣ್ಣೊಬ್ಬಳು ಒಬ್ಬನನ್ನು ಕೆಳಕ್ಕೆ ದಬ್ಬಿ ಕುತ್ತಿಗೆ ಹಿಸುಕುತ್ತಿದ್ದಾಳೆ.

ಬ್ರಿಟನ್ನಿನ ವಸಾಹತುಶಾಹಿ ದಬ್ಬಾಳಿಕೆ, ಆಕ್ರಮಣವನ್ನು ಬ್ರಿಟನ್ನಿನ ಹಲವಾರು ಜನ ವಿರೋಧಿಸುತ್ತಿದ್ದರು. ‘ದ ಡೆತ್ ಆಫ್ ಟಿಪ್ಪು ಆರ್ ಬಿಸೀಜಿಂಗ್ ದ ಹೇರಂ’ ವ್ಯಂಗ್ಯಚಿತ್ರ ಅಂತಹ ಒಂದು ವಿರೋಧದ ಅಭಿವ್ಯಕ್ತಿ ಎನ್ನುವವರಿದ್ದಾರೆ. ‘ಭಾರತೀಯರು ಅನಾಗರಿಕರು ಹಾಗೂ ಅಲ್ಲಿನ ರಾಜ, ಮಹಾರಾಜರುಗಳಿಂದಲೇ ದಬ್ಬಾಳಿಕೆಗೆ ಒಳಗಾದವರು. ಅಲ್ಲಿನ ಜನರನ್ನು ಸಭ್ಯ, ನಾಗರಿಕ ಬ್ರಿಟಿಷರಾದ ನಾವು ಕಾಪಾಡುತ್ತಿದ್ದೇವೆ’ ಎನ್ನುವ ಚಿತ್ರಣವನ್ನು ಬ್ರಿಟನ್ನಿಗೆ ಕೊಟ್ಟಿದ್ದ ‘ಈಸ್ಟ್ ಇಂಡಿಯಾ ಕಂಪೆನಿ’ಯ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ ಈ ವ್ಯಂಗ್ಯಚಿತ್ರದ್ದಾಗಿತ್ತು. ಆದರೆ ಆ ವ್ಯಂಗ್ಯಚಿತ್ರದಲ್ಲಿ ತೋರಿಸಿರುವ ಹೆಣ್ಣಿನ ಸಾಕಷ್ಟು ನಗ್ನತೆ ಬ್ರಿಟಿಷರ ವಸಾಹತುಶಾಹಿ ದಬ್ಬಾಳಿಕೆಯನ್ನು ತೋರಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಆಗಿನ ಬ್ರಿಟಿಷ್ ‘ಸಭ್ಯ ನಾಗರಿಕರ’ ಮನಸ್ಸಿಗೆ ಕಚಗುಳಿ ಇಡುವುದಷ್ಟೇ ಆಗಿತ್ತು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಚರಿತ್ರಕಾರ ತನ್ನ 2006ರ ‘City of Laughter: Sex and Satire in Eighteenth-century London’ ಪುಸ್ತಕದಲ್ಲಿ, ಆ ಸಮಯದ ವ್ಯಂಗ್ಯಚಿತ್ರ ಮತ್ತು ಅಶ್ಲೀಲ ಸಾಹಿತ್ಯದ ನಡುವಿನ ಸಂಬಂಧಗಳ ವಿಶ್ಲೇಷಣೆಯಲ್ಲಿ ತಿಳಿಸಿದ್ದಾನೆ.   ಈ ಚಿತ್ರ ಬಿಡಿಸಿದ ಕಲಾಕಾರನಿಗೆ ಆಗಿನ ಭಾರತೀಯ ಸಮಾಜದ ಹೆಣ್ಣಿನ ಚಿತ್ರಣ ಇರಲಿಲ್ಲವೆನ್ನಿಸುತ್ತದೆ, ಏಕೆಂದರೆ ಆ ಚಿತ್ರದಲ್ಲಿನ ಹೆಣ್ಣುಗಳು ಧರಿಸಿರುವ ವಸ್ತ್ರಗಳು ಯೂರೋಪಿಯನ್ ಹೆಣ್ಣುಗಳ ವಸ್ತ್ರಗಳಂತಿವೆ. ಆ ವ್ಯಂಗ್ಯಚಿತ್ರ ಬಿಡಿಸಿದ ಕಲಾವಿದ ಯಾರೆಂಬುದರ ಬಗ್ಗೆ ಈಗಲೂ ಏಕಾಭಿಪ್ರಾಯವಿಲ್ಲ. ಕೆಲವರು ರೋಲ್ಯಾಂಡ್‌ಸನ್ ಎಂದರೆ ಆ ಚಿತ್ರರಚನೆ ಹಾಗೂ ಅದರಲ್ಲಿನ ಬರಹದ ಶೈಲಿಯಿಂದ ಕೆಲವರು ಜಾನ್ ಕಾಸ್ ಎನ್ನುತ್ತಾರೆ.

ಟಿಪ್ಪು ಸುಲ್ತಾನ್ ಹುಟ್ಟು ಹಾಕಿದ್ದ ಹುಲಿಯ ರೂಪಕ ಬ್ರಿಟಿಷರಿಗೆ ಸವಾಲಾಗಿತ್ತು. ಬ್ರಿಟಿಷರ ಲಾಂಛನ ಸಿಂಹವಾಗಿತ್ತು ಹಾಗೂ ಅವರು ಹುಲಿಯನ್ನು ಸಿಂಹ ಕೊಲ್ಲುವ ಚಿತ್ರಗಳನ್ನು ಸಾಧ್ಯವಾದೆಡೆಯಲ್ಲೆಲ್ಲ ಬಳಸಿದರು. ಟಿಪ್ಪೂನನ್ನು ಕೊಂದ ಸೈನಿಕರಿಗೆ ಇಂಗ್ಲೆಂಡಿನಲ್ಲಿ ‘ಸೆರಿಂಗಪಟಂ ಪದಕ’ ನೀಡಿ ಸನ್ಮಾನಿಸಿದರು. ಆ ಪದಕದಲ್ಲಿ ಒಂದೆಡೆ ಹುಲಿಯನ್ನು ಸಿಂಹ ಕೊಲ್ಲುತ್ತಿರುವ ಚಿತ್ರವಿತ್ತು. ಟಿಪ್ಪೂ ಸಾವಿನ ನಂತರವೂ ಸಹ ಹುಲಿಯ ಸಂಕೇತದ ಮೇಲಿನ ಅವರ ಸಿಟ್ಟು ಕಡಿಮೆಯಾಗಲಿಲ್ಲ. ಅದೇ ಸಿಟ್ಟಿನಿಂತ ಭಾರತದ ಕಾಡುಗಳಲ್ಲಿ ಹುಲಿಗಳನ್ನು ಕೊಂದು, ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು.
 
1857ರ ‘ಸಿಪಾಯಿ ದಂಗೆ’ಯ ಸಮಯದಲ್ಲಿ ಬ್ರಿಟನ್ನಿನ ವ್ಯಂಗ್ಯಚಿತ್ರಗಳಿಗೆಂದೇ ಮೀಸಲಾಗಿರುವ ಪತ್ರಿಕೆ ‘ಪಂಚ್’ನ, 1857ರ ಆಗಸ್ಟ್ 22ರ ಸಂಚಿಕೆಯಲ್ಲಿ ಜಾನ್ ಟೆನ್ನಿಯಲ್ ಎಂಬಾತನ ‘ದ ಬ್ರಿಟಿಷ್ ಲಯನ್ಸ್ ವೆನ್‌ಜಿಯೆನ್ಸ್ ಆನ್ ದ ಬೆಂಗಾಲ್ ಟೈಗರ್’ (The British Lion’s Vengeance on the Bengal Tiger) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು.

ಅದರಲ್ಲಿ ಹುಲಿಯೊಂದು ಮಗು ಹಾಗೂ ಮಹಿಳೆಯ ಮೇಲೆ ದಾಳಿ ಮಾಡಿದೆ. ಆ ಮಗು ಮತ್ತು ಹೆಣ್ಣನ್ನು ಕಾಪಾಡಲೋ ಎಂಬಂತೆ ಸಿಂಹವೊಂದು ಹುಲಿಯ ಮೇಲೆ ದಾಳಿ ಮಾಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷನ ಮೇಲೆ ದಾಳಿ ಮಾಡಿ ಗರ್ಜಿಸುತ್ತಿದ್ದರೆ, ‘ಪಂಚ್’ನ ವ್ಯಂಗ್ಯಚಿತ್ರ ಅದಕ್ಕೆ ವಿರುದ್ಧವಾಗಿ ಹುಲಿಯ ಮೇಲೆ ದಾಳಿ ಮಾಡಿ ಸೇಡು ತೀರಿಸಿಕೊಳ್ಳುತ್ತಿರುವಂತಿದೆ. ಅದರ ಶೀರ್ಷಿಕೆಯೂ ಅದನ್ನೇ ಹೇಳುತ್ತದೆ.

 ಡಾ. ಜೆ. ಬಾಲಕೃಷ್ಣ

ಸೋಮವಾರ, ನವೆಂಬರ್ 28, 2016

ಟಿಪ್ಪು ಹುಲಿ ಎಂಬ ರೂಪಕ



 01/12/2016ರ `ಸುಧಾ'ದಲ್ಲಿ ಪ್ರಕಟವಾಗಿರುವ ನನ್ನ ಚಿತ್ರ-ಲೇಖನ




ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆಯೇ ಬಲಭಾಗದಲ್ಲಿ ಎದುರಿಗೆ ಗಾಜಿನ ಪೆಟ್ಟಿಗೆಯಲ್ಲಿ ಟಿಪ್ಪೂ ಸುಲ್ತಾನನ ಪ್ರಖ್ಯಾತ ಯೂರೋಪಿಯನ್ನನ ಮೇಲೆ ದಾಳಿ ಮಾಡಿರುವ ಹುಲಿಯ `ಯಂತ್ರಗೊಂಬೆಯಿತ್ತು. ಅದರ ಮಿನಿಯೇಚರ್ ಕೃತಿ ಬೆಂಗಳೂರಿನ ಟಿಪ್ಪೂನ ಬೇಸಿಗೆ ಅರಮನೆಯಲ್ಲಿ ನೋಡಿದ್ದೆ. ಅಲ್ಲಿಯೇ ಟಿಪ್ಪೂ ಧರಿಸಿದ್ದ ವಸ್ತ್ರ, ಗಡಿಯಾರ, ಅವನ ಸಿಂಹಾಸನದಲ್ಲಿದ್ದ ಹುಲಿಯ ತಲೆಗಳು ಮುಂತಾದವಿದ್ದವು. ಬ್ರಿಟಿಷರಿಗೆ `ವ್ಯಾಘ್ರಸ್ವಪ್ನವಾಗಿದ್ದ ಟಿಪ್ಪೂನನ್ನು ಜೀವಂತ ಕಂಡಷ್ಟು ಸಂತೋಷವಾಯಿತು ನನಗೆ.
***
1790ರಲ್ಲಿ ರಚಿಸಲಾಗಿದೆಯೆನ್ನಲಾದ ಟಿಪ್ಪೂನ ಜಲವರ್ಣ ಚಿತ್ರ. ಇದು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಸಂಗ್ರಹಾಲಯದಲ್ಲಿದೆ, ಪ್ರದರ್ಶನದಲ್ಲಿಲ್ಲ (ಚಿತ್ರ ಕೃಪೆ: V & A Museum)

ಟಿಪ್ಪೂ ಸುಲ್ತಾನ್ ಮತ್ತು ಹುಲಿಯನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪೂ ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತ್ರ ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತ್ರಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಯೂರೋಪಿಯನ್ನರ ಮೇಲೆ ವಿಶೇಷವಾಗಿ ಬ್ರಿಟಿಷರ ಮೇಲೆ ಹುಲಿಗಳು ಮತ್ತು ಆನೆಗಳು ದಾಳಿ ಮಾಡುತ್ತಿರುವ ಚಿತ್ರಗಳನ್ನು ಶ್ರೀರಂಗಪಟ್ಟಣದ ನಗರದ ಗೋಡೆಗಳ ಮೇಲೆಲ್ಲಾ ಬರೆಸಿದ್ದನಂತೆ. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಆ `ವ್ಯಾಘ್ರಸ್ವಪ್ನಎಷ್ಟು ನಿದ್ರೆ ಕೆಡಿಸಿತ್ತೆಂದರೆ ಅವರು ಆ ಸಿಟ್ಟನ್ನು ಕಾಡಿನಲ್ಲಿನ ನಿಜವಾದ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು. ಟಿಪ್ಪು ಹುಲಿಯೊಂದಿಗೆ ಸೆಣಸುತ್ತಿರುವ ಹಲವಾರು ಚಿತ್ರಗಳು ಟಿಪ್ಪೂನ ಕಾಲದ ನಂತರ ರಚಿತವಾಗಿವೆ. ಟಿಪ್ಪೂ ನಿಜವಾಗಿ ಹುಲಿಯೊಂದಿಗೆ ಸೆಣಸಿದ ದಾಖಲೆಗಳಿಲ್ಲವೆನ್ನುತ್ತಾರೆ ಚರಿತ್ರಕಾರರು. ಆದರೆ, ಟಿಪ್ಪೂನ ಕಾಲದ್ದೇ ಆದ ದಂತ ಕತೆಯೊಂದರಲ್ಲಿ ಹೈದರಾಲಿ ಟಿಪ್ಪೂನನ್ನು ಹೈದರಾಬಾದ್‍ಗೆ ಒಪ್ಪಂದವೊಂದರ ವಿಚಾರಕ್ಕೆ ಕಳುಹಿಸಿದ್ದಾಗ ಅಲ್ಲಿನ ಕಾಡೊಂದರಲ್ಲಿ ಹುಲಿಯೊಂದನ್ನು ಎದುರಿಸಿದ್ದನಂತೆ. 1795-1798ರ ಅವಧಿಯಲ್ಲಿ ನಿರ್ಮಾಣವಾಗಿರುವ ತುಮಕೂರು ಜಿಲ್ಲೆಯೊಂದರ ನರಸಿಂಹಸ್ವಾಮಿ ದೇವಾಲಯದ ಚಾವಣಿಯಲ್ಲಿ ಟಿಪ್ಪೂ ಹುಲಿಯೊಂದನ್ನು ತನ್ನ ಕತ್ತಿಯಿಂದ ಕೊಲ್ಲುತ್ತಿರುವ ಚಿತ್ರವಿದೆಯಂತೆ. ದೇವಿ ಚಾಮುಂಡಿಯ ವಾಹನವೂ ಆಗಿರುವ ಹುಲಿಯನ್ನು ತನ್ನ ಸಂಕೇತವನ್ನು ಟಿಪ್ಪೂ ಬಳಸಿಕೊಂಡಿದ್ದು ಧರ್ಮ ನಿರಪೇಕ್ಷತೆಯ ಆಗಿನ ಸಾಮಾಜಿಕ-ಧಾರ್ಮಿಕ ಪರಿಸರದ ಅಭಿವ್ಯಕ್ತಿ ಎನ್ನುತ್ತಾರೆ ಚರಿತ್ರೆಕಾರರು.



ಟಿಪ್ಪೂನ ದೂರದರ್ಶಕ
 
ಇನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಟಿಪ್ಪೂ ಸುಲ್ತಾನನ ಪ್ರಖ್ಯಾತ ಯೂರೋಪಿಯನ್ನನ ಮೇಲೆ ದಾಳಿ ಮಾಡಿರುವ ಹುಲಿಯ `ಯಂತ್ರಗೊಂಬೆಯ ವಿಷಯಕ್ಕೆ ಬರೋಣ. ಟಿಪ್ಪೂನ ಸಮಯದಲ್ಲಿ ಬ್ರಿಟಿಷರು ಆತನನ್ನು ಕಂಡು ಹೆದರುತ್ತಿದ್ದರು. ಬ್ರಿಟಿಷರು ಮೈಸೂರಿನ ಮೇಲೆ ನಾಲ್ಕು ಯುದ್ಧಗಳನ್ನು ನಡೆಸಿದ್ದರು. ಟಿಪ್ಪೂ ಸತ್ತಾಗ ಬ್ರಿಟನ್ನಿನಲ್ಲಿ ಸಂಭ್ರಮಾಚರಣೆಗಳು ನಡೆದುವಂತೆ. ಕವಿಗಳು, ನಾಟಕಕಾರರು ಹಾಗೂ ಚಿತ್ರಕಲಾವಿದರು ಆ ಘಟನೆಯನ್ನು ವರ್ಣಿಸಿ ತಮ್ಮ ಕೃತಿಗಳಲ್ಲಿ ಬಿಂಬಿಸಿದರು. ಟಿಪ್ಪೂನ ರಾಜಧಾನಿ ಶ್ರೀರಂಗಪಟ್ಟಣದ ಮೇಲಿನ ದಾಳಿ ಹಾಗೂ ಲೂಟಿಯು ಆಗಿನ ಬ್ರಿಟನ್ನಿನ ಹಲವಾರು ನಾಟಕ, ಚಿತ್ರಕಲೆಗಳಲ್ಲಿ ಕಂಡುಬಂದಿವೆ. ಪರಕೀಯ ಬ್ರಿಟಿಷರ ಅಪಾಯವನ್ನು ಮನಗಂಡಿದ್ದ ಟಿಪ್ಪು ಅವರನ್ನು ಅಷ್ಟೇ ಕಟುವಾಗಿ ದ್ವೇಷಿಸುತ್ತಿದ್ದ. ಆ ದ್ವೇಷವೇ ಅವನನ್ನು ಬ್ರಿಟಿಷ್ ಸೈನಿಕನೊಬ್ಬನನ್ನು ಕೊಲ್ಲುತ್ತಿರುವ ಹುಲಿಯ ಯಂತ್ರ ಗೊಂಬೆ ತಯಾರಿಸಲು ಪ್ರೇರಣೆ ನೀಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷ್ ಸೈನಿಕನನ್ನು ಕೊಲ್ಲುತ್ತಿದ್ದರೂ ಬ್ರಿಟಿಷರು ಟಿಪ್ಪೂ ಸತ್ತನಂತರ ಅದನ್ನು ಬ್ರಿಟನ್ನಿಗೆ ಕೊಂಡೊಯ್ದು ಆ ಬಿಳಿ ಸೈನಿಕ ಬ್ರಿಟಿಷ್‍ನವನೆಂದು ಒಪ್ಪಿಕೊಳ್ಳದೆ ಯಾರೋ ಯೂರೋಪಿಯನ್ ಸೈನಿಕನೆಂದರು ಹಾಗೂ ದಾಖಲೆಗಳಲ್ಲಿ ಅದೇ ರೀತಿ ದಾಖಲಿಸಿದ್ದಾರೆ.


ಟಿಪ್ಪೂನ ಕತ್ತಿಗಳು ಹಾಗೂ ಧರಿಸುತ್ತಿದ್ದ ಧಿರಿಸು

ಟಿಪ್ಪೂ ಪಾಶ್ಚಿಮಾತ್ಯ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಆಕರ್ಷಿತನಾಗಿದ್ದ. ಆಗಲೇ ಫ್ರಾನ್ಸ್‍ನಿಂದ ಬಂದೂಕು ತಯಾರಿಸುವವರನ್ನು, ಇಂಜಿನಿಯರುಗಳನ್ನು ಮೈಸೂರಿಗೆ ಕರೆಸಿದ್ದನಲ್ಲದೆ ಬ್ರಿಟಿಷರನ್ನು ಬಗ್ಗುಬಡೆಯಲು ಫ್ರಾನ್ಸ್‍ನ ಸಹಕಾರವನ್ನು ಸಹ ಕೋರಿದ್ದ. ಆಗಲೇ ಮೈಸೂರಿನಲ್ಲೇ ಹಿತ್ತಾಳೆಯ ಫಿರಂಗಿ, ಮದ್ದುಗುಂಡುಗಳನ್ನು ತಯಾರಿಸುವ ವ್ಯವಸ್ಥೆ ಸಹ ಮಾಡಿದ್ದ. ಆ ಯಂತ್ರ ಹುಲಿಯನ್ನು ಫ್ರಾನ್ಸ್‍ನ ತಜ್ಞರೇ ಸುಮಾರು 1782ರಿಂದ 1799ರ ಅವಧಿಯಲ್ಲಿ ನಿರ್ಮಿಸಿರಬೇಕೆನ್ನುತ್ತಾರೆ. ಮರದಿಂದ ಹೊರಭಾಗವನ್ನು ನಿರ್ಮಿಸಲಾಗಿರುವ ಆ ಯಂತ್ರ ಹುಲಿಯ ಎತ್ತರ 28 ಅಂಗುಲ ಮತ್ತು ಉದ್ದ 68 ಅಂಗುಲಗಳು. ಆ ಹುಲಿಯ ಎಡಭಾಗದಲ್ಲಿ ಹಿಡಿಯೊಂದಿದ್ದು ಅದನ್ನು ತಿರುಗಿಸಿದಾಗ ಹುಲಿ ಗರ್ಜಿಸಿದಂತೆ ಹಾಗೂ ಕೆಳಗೆ ಬಿದ್ದಿರುವ ಬ್ರಿಟಿಷ್ ಸೈನಿಕ ನೋವಿನಿಂದ ನರಳಿದಂತೆ ಶಬ್ದವಾಗುತ್ತದೆ. ಅಷ್ಟಲ್ಲದೆ ಅವನ ಎಡಗೈ ಸಹ ನೋವಿಗೋ ಏನೋ ಎನ್ನುವಂತೆ ಚಲಿಸುತ್ತದೆ. ಆ ಹುಲಿ ಯಂತ್ರದ ಉದ್ದೇಶ ಬ್ರಿಟಿಷನನ್ನು ಕೊಲ್ಲುವುದ ಸೂಚಕವಷ್ಟೇ ಆಗಿರಲಿಲ್ಲ. ಅದು ಸಂಗೀತ ವಾದ್ಯವೂ ಆಗಿತ್ತು. ಹುಲಿಯ ಬೆನ್ನನ್ನು ಪೆಟ್ಟಿಗೆಯ ಮುಚ್ಚಳದಂತೆ ಎತ್ತಿ ಹಿಂದಕ್ಕೆ ಮಡಚಿದರೆ ದಂತದ ಕೀಲಿಮಣೆಯಿದ್ದು ಸಂಗೀತ ನುಡಿಸಬಲ್ಲ ವಾದ್ಯವೂ ಆಗುತ್ತಿತ್ತು.


ಟಿಪ್ಪೂನ ಹುಲಿಯ ಎದುರು ದೃಶ್ಯ
 
ಟಿಪ್ಪೂ ಆ ಯಂತ್ರ ಏಕೆ ನಿರ್ಮಿಸಿದ? ಅವನ ಮುಖ್ಯ ಉದ್ದೇಶ ತನ್ನ ಶತ್ರುಗಳಾದ ಬ್ರಿಟಿಷರನ್ನು ಹೆದರಿಸುವುದೇ ಆಗಿತ್ತು ಹಾಗೂ ಆತ ಅದರಲ್ಲಿ ಯಶಸ್ವಿಯೂ ಆದ. ಟಿಪ್ಪೂ ತನ್ನ ಶೌರ್ಯದ ಸಂಕೇತವಾಗಿ ಹುಲಿಯನ್ನು ಆಯ್ದುಕೊಂಡರೆ, ಬ್ರಿಟಿಷರ ಲಾಂಛನ ಸಿಂಹವಾಗಿತ್ತು. ಬ್ರಿಟಿಷರೂ ಸಹ ಸಿಂಹವನ್ನು ಸಾಂಕೇತಿಕವಾಗಿ ಬಳಸಿಕೊಂಡರು. ಟಿಪ್ಪೂ 1799ರಲ್ಲಿ ನಾಲ್ಕನೇ ಮೈಸೂರು ಯುದ್ಧದಲ್ಲಿ ಶ್ರೀರಂಗಪಟ್ಟಣದಲ್ಲಿ ಸತ್ತಾಗ, ಆ ಯುದ್ಧದಲ್ಲಿ ಸೆಣಸಿದ ಬ್ರಿಟಿಷ್ ಸೈನಿಕರಿಗೆ ಹುಲಿಯನ್ನು ಕೊಲ್ಲುತ್ತಿರುವ ಸಿಂಹದ ಚಿತ್ರವಿರುವ ಚಿನ್ನದ, ಬೆಳ್ಳಿಯ ಹಾಗೂ ಕಂಚಿನ `ಸೆರಿಂಗಪಟಮ್ ಪದಕಗಳನ್ನು ಅವರ ಹುದ್ದೆಗಳನುಸಾರ ನೀಡಿ ಸನ್ಮಾನಿಸಿದ್ದಾರೆ. ಅಂತಹ ಒಂದು ಪದಕವನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಟಿಪ್ಪೂನ ಗಡಿಯಾರದ ಪಕ್ಕದಲ್ಲೇ ಇರಿಸಿದ್ದಾರೆ.  

 
ಟಿಪ್ಪೂನ ಗಡಿಯಾರ ಮತ್ತು ಟಿಪ್ಪೂನನ್ನು ಕೊಂದ ಸೈನಿಕರಿಗೆ ಇಂಗ್ಲೆಂಡಿನಲ್ಲಿ ನೀಡಿದ `ಸೆರಿಂಗಪಟಮ್ ಪದಕ’. ಆ ಪದಕದಲ್ಲಿ ಸಿಂಹ ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಿದೆ.

1857ರ ಸಿಪಾಯಿ ದಂಗೆಯ ಸಮಯದಲ್ಲಿ `ಪಂಚ್ವ್ಯಂಗ್ಯಚಿತ್ರ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವ್ಯಂಗ್ಯಚಿತ್ರದಲ್ಲಿ ಹುಲಿಯೊಂದು ಅಸಹಾಯಕ ಹೆಣ್ಣು ಮತ್ತು ಮಗುವಿನ ಮೇಲೆ ದಾಳಿಮಾಡುತ್ತಿರುವಂತೆ ಹಾಗೂ ಆ ಹುಲಿಯ ಮೇಲೆ ಸಿಂಹವೊಂದು ದಾಳಿ ಮಾಡುತ್ತಿರುವಂತೆ ಚಿತ್ರಿಸಿ ಅದಕ್ಕೆ `ದ ಬ್ರಿಟಿಷ್ ಲಯನ್ಸ್ ವೆನೆಜಿಯನ್ಸ್ ಆನ್ ಬೆಂಗಾಲ್ ಟೈಗರ್’ (ಬಂಗಾಳದ ಹುಲಿಯ ಮೇಲೆ ಬ್ರಿಟಿಷ್ ಸಿಂಹ ಸೇಡು ತೀರಿಸಿಕೊಳ್ಳುತ್ತಿರುವುದು) ಎಂಬ ಶೀರ್ಷಿಕೆ ನೀಡಿ ಭಾರತೀಯರನ್ನು ಕಾಪಾಡುವುದು ಬ್ರಿಟಿಷರಿಂದಲೇ ಸಾಧ್ಯವೆನ್ನುವಂತೆ ತೋರಿಸಿದ್ದರು.


ಟಿಪ್ಪೂನ ಪಿಸ್ತೂಲುಗಳು

1799ರಲ್ಲಿ ಟಿಪ್ಪೂನನ್ನು ಕೊಂದ ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯವರು ಟಿಪ್ಪೂನ ಖಜಾನೆಯನ್ನು ಲೂಟಿ ಮಾಡಿ ಹಂಚಿಕೊಂಡರು. ಅಷ್ಟೇ ಅಲ್ಲದೆ ಊರಿಗೂ ನುಗ್ಗಿ ಅಲ್ಲಿನ ಜನರ ಸಂಪತ್ತನ್ನೂ ಸಹ ಲೂಟಿ ಮಾಡಿದರು. ಟಿಪ್ಪೂನ ಚಿನ್ನದ ಹುಲಿಯ ತಲೆಯ ಆಕೃತಿಗಳಿದ್ದ ಸಿಂಹಾಸನವನ್ನು ಅಲ್ಲಿಯೇ ಮುರಿದು ಹಂಚಿಕೊಂಡರು. ಕೆಲವು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಇಂದಿಗೂ ಇವೆ. 

ಟಿಪ್ಪೂನ ಸಿಂಹಾಸನದಲ್ಲಿದ ಹುಲಿಯ ತಲೆಗಳು

ಟಿಪ್ಪೂನ ಭವ್ಯವಾದ ಸಿಂಹಾಸನ ಹೇಗಿತ್ತೆಂಬುದನ್ನು ನಾವಿಂದು ಚಿತ್ರಗಳಲ್ಲಿ ಮಾತ್ರ ನೋಡಬಹುದು. ಹುಲಿಯ ತಲೆಗಳಿದ್ದ ಆನೆಯ ಮೇಲೆ ಸವಾರಿ ಮಾಡಲು ಬಳಸುತ್ತಿದ್ದ ಟಿಪ್ಪೂನ ಹೌದಾ ಮಾತ್ರ ಇಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಪ್ರದರ್ಶನಕ್ಕಿದೆ. ಶ್ರೀರಂಗಪಟ್ಟಣವನ್ನು ಕೊಳ್ಳೆಹೊಡೆದ ಬ್ರಿಟಿಷರು ಟಿಪ್ಪೂನ ಮರದಿಂದ ತಯಾರಿಸಿದ ಯಂತ್ರ ಹುಲಿಯನ್ನು ಲಂಡನ್ನಿಗೆ ಕೊಂಡೊಯ್ದರು. ಈಸ್ಟ್ ಇಂಡಿಯಾ ಕಂಪೆನಿಯ ಗವರ್ನರ್ ಜನರಲ್ ರಿಚರ್ಡ್ ವೆಲ್ಲೆಸ್ಲಿಯ ಸಹಾಯಾಧಿಕಾರಿ ಆ ಯಂತ್ರ ಹುಲಿಯ ಬಗ್ಗೆ ತನ್ನ ಟಿಪ್ಪಣಿಯೊಂದರಲ್ಲಿ ಹೀಗೆ ಬರೆದಿದ್ದಾನೆ:
       ಸಂಗೀತ ವಾದ್ಯಗಳಿರುವ ಕೋಣೆಯೊಂದರಲ್ಲಿ ಈ ವಿಶಿಷ್ಟ ವಸ್ತು ಕಂಡುಬಂದಿತು ಹಾಗೂ ಇದು ಇಂಗ್ಲಿಷರ ಬಗೆಗಿನ ಟಿಪ್ಪೂ ಸಾಬ್‍ರವರ ವಿಪರೀತ ದ್ವೇಷ ಮತ್ತು ಅಸಹನೆಯ ಮತ್ತೊಂದು ಕುರುಹಾಗಿದೆ. ಇದು ಅಂಗಾತ ಮಲಗಿರುವ ಯೂರೋಪಿಯನ್ನನೊಬ್ಬನನ್ನು ತಿನ್ನುತ್ತಿರುವ ಹುಲಿಯ ಯಂತ್ರವಾಗಿದೆ. ಹುಲಿಯ ದೇಹದಲ್ಲಿ ಸಂಗೀತ ವಾದ್ಯವೊಂದರ ಭಾಗಗಳೂ ಇವೆ. ಅದರಿಂದ ಉಂಟಾಗುವ ಶಬ್ದಗಳು ನೋವಿನಲ್ಲಿನ ವ್ಯಕ್ತಿಯೊಬ್ಬನ ಕೂಗಿನಂತೆಯೂ ಹಾಗೂ ಹುಲಿಯ ಘರ್ಜನೆಯಂತೆಯೂ ಕೇಳಿಬರುತ್ತವೆ. ಇದನ್ನು ಎಷ್ಟು ಚಾಣಾಕ್ಷತೆಯಿಂದ ತಯಾರಿಸಲಾಗಿದೆಯೆಂದರೆ, ಸಂಗೀತ ವಾದ್ಯದಂತೆ ನುಡಿಸುವಾಗ ಕೆಳಗೆ ಬಿದ್ದ ವ್ಯಕ್ತಿ ಅಸಹಾಯಕತೆಯಿಂದ, ದೈನ್ಯತೆಯಿಂದ ಕೈ ಮೇಲೆತ್ತಿರುತ್ತಾನೆ. ಟಿಪ್ಪೂ ಸುಲ್ತಾನನ ಅಹಂಕಾರ ಮತ್ತು ಹೀನಾಯ ಕ್ರೌರ್ಯದ ಈ ನಿರ್ಮಾಣ ಟವರ್ ಆಫ್ ಲಂಡನ್ನಿನಲ್ಲಿ ಇಡಲು ಸೂಕ್ತವಾಗಿದೆ.

ಲಂಡನ್ನಿಗೆ ಕೊಂಡೊಯ್ದ ಬ್ರಿಟಿಷರು ಟಿಪ್ಪೂನ ಯಂತ್ರ ಹುಲಿಯನ್ನು ಈಸ್ಟ್ ಇಂಡಿಯಾ ಕಂಪೆನಿಯ ಭಾರತೀಯ ಮ್ಯೂಸಿಯಂನಲ್ಲಿ ಪ್ರದರ್ಶಿಸಿದರು. ಕೆಲವೇ ದಿನಗಳಲ್ಲಿ ಅದು ಹೆಚ್ಚು ಜನಪ್ರಿಯವಾಗಿ ಬ್ರಿಟಿಷ್ ಜನ ಅದನ್ನು ನೋಡಲು ಮುಗಿಬಿದ್ದರು. 1858ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯನ್ನು ಬ್ರಿಟಿಷ್ ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಂಡಾಗ ಯಂತ್ರ ಹುಲಿಯನ್ನು 1868ರವರೆಗೂ ವೈಟ್‍ಹಾಲ್‍ನ ಫಿಫೆ ಹೌಸ್‍ನಲ್ಲಿರಿಸಲಾಗಿತ್ತು ಹಾಗೂ ನಂತರ ಹೊಸ ಇಂಡಿಯಾ ಆಫೀಸ್‍ಗೆ ಸ್ಥಳಾಂತರಿಸಲಾಯಿತು. 1874ರಲ್ಲಿ ಅದನ್ನು ಸೌತ್ ಕೆನ್ಸಿಂಗ್ಟನ್‍ನಲ್ಲಿನ ಇಂಡಿಯಾ ಮ್ಯೂಸಿಯಂಗೆ ವರ್ಗಾಯಿಸಿ 1879ರಲ್ಲಿ ಅದನ್ನೂ ಸಹ ಮುಚ್ಚಿದಾಗ ಅಲ್ಲಿದ್ದ ವಸ್ತುಗಳನ್ನೆಲ್ಲಾ ಇತರ ಮ್ಯೂಸಿಯಂಗಳಿಗೆ ನೀಡಲಾಯಿತು. ಆಗ ಈ ಹುಲಿ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ರಾರಾಜಿಸುತ್ತಿದೆ. ಲಂಡನ್ ತಲುಪಿದ ದಿನದಿಂದ ಇಂದಿಗೂ ಅದು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಎರಡನೇ ಮಹಾ ವಿಶ್ವಯುದ್ಧದಲ್ಲಿ ಜರ್ಮನಿಯ ಬಾಂಬ್ ದಾಳಿಗೊಳಗಾಗಿ ಕಟ್ಟಡ ಕುಸಿತದಿಂದ ಯಂತ್ರ ಹುಲಿ ಚೂರುಚಾರಾಗಿದ್ದು ಅದನ್ನು ದುರಸ್ತಿಗೊಳಿಸಿ 1947ರಿಂದ ಗಾಜಿನ ಪೆಟ್ಟಿಗೆಯೊಂದರಲ್ಲಿ ಸುರಕ್ಷಿತವಾಗಿ ಪ್ರದರ್ಶನದಲ್ಲಿದೆ. 1955ರಲ್ಲಿ ಅದು ಅಮೆರಿಕಾಗೆ ಸಹ ಪ್ರಯಾಣಿಸಿ ನ್ಯೂಯಾರ್ಕ್‍ನ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್‍ನಲ್ಲಿ ಪ್ರದರ್ಶಿಸಲ್ಪಟ್ಟಿತ್ತು.

ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಇಂದಿಗೂ ಅದಕ್ಕೆ ಮಹತ್ತರ ಸ್ಥಾನವಿದೆ. ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಅದನ್ನು ನಿಬ್ಬೆರಗಾಗಿ ನೋಡುತ್ತಾರೆ. ಮ್ಯೂಸಿಯಂಗೆ ದೇಣಿಗೆ ಕೇಳುವ ಪೋಸ್ಟರಿನಲ್ಲಿಯೂ ಅದರದೇ ಚಿತ್ರವನ್ನು ಹಾಕಿಕೊಂಡಿದ್ದಾರೆ. 

ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ದೇಣಿಗೆ ಕೇಳುವ ಪೋಸ್ಟರಿನಲ್ಲಿ ಟಿಪ್ಪೂನ ಹುಲಿ

ಆ ಹುಲಿಯ ಪೋಸ್ಟ್ ಕಾರ್ಡ್‍ಗಳು, ಬೊಂಬೆಗಳು ಮುಂತಾದವುಗಳನ್ನು ಅಲ್ಲಿ ಮಾರಾಟ ಮಾಡುತ್ತಾರೆ. ಈಗ ಜನ ಅದನ್ನು ನೋಡಬೇಕಷ್ಟೆ. ಆದರೆ, ಮೊದಲು ಜನರಿಗೆ ಅದನ್ನು ಮುಟ್ಟಲು ಹಾಗೂ ಕೀಲಿ ತಿರುಗಿಸಿ ಹುಲಿಯ ಘರ್ಜನೆಯನ್ನು ಮತ್ತು ಕೆಳಗೆ ಬಿದ್ದಿರುವ ಬ್ರಿಟಿಷನ ಆಕ್ರಂದನವನ್ನು ಕೇಳುವ ಅವಕಾಶವಿತ್ತು.

ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಮುಂಭಾಗ

ಬೇಡಿ ಪಡೆ, ಎರವಲು ಪಡೆ ಅಥವಾ ಕದ್ದು ತಾ!

16ನೇ ಶತಮಾನದ ಅಂತ್ಯದಿಂದ 20ನೇ ಶತಮಾನದವರೆಗೂ ಒಂದು ಪುಟ್ಟ ದೇಶವಾದ ಇಂಗ್ಲೆಂಡ್ ಜಗತ್ತಿನ ಎಲ್ಲೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿತ್ತು. 1913ರಲ್ಲಿ ಬ್ರಿಟಿಷ್ ಸಾಮ್ರಾಜ್ಯದಡಿಯಲ್ಲಿ 412 ದಶಲಕ್ಷ ಜನರಿದ್ದರು (ಆಗಿನ ಜನಸಂಖ್ಯೆಯ ಶೇ.23ರಷ್ಟು) ಹಾಗೂ 1920ರಲ್ಲಿ ಅದರ ಸಾಮ್ರಾಜ್ಯ 35,500,000 ಚದರ ಕೀ.ಮೀ.ಗಳಷ್ಟು ಪ್ರದೇಶವನ್ನು ವ್ಯಾಪಿಸಿತ್ತು (ಭೂಮಿಯ ಒಟ್ಟು ಭೂ ಪ್ರದೇಶದ ಶೇ.24ರಷ್ಟು). ಅವರ ಮ್ಯೂಸಿಯಂಗಳಲ್ಲಿ ಇಂದು ನಾವು ಕಾಣುವುದು ಅವರು ಆ ವಸಾಹತುಗಳಿಂದ ಕೊಳ್ಳೆ ಹೊಡೆದು ತಂದ, ಕದ್ದ ವಸ್ತುಗಳು. ನಾನು ಐರ್ಲೆಂಡಿನ ನವಶಿಲಾಯುಗದ ಸ್ಥಳವಾದ ನ್ಯೂ ಗ್ರಾಂಜ್‍ನಲ್ಲಿನ ಗೈಡ್‍ನ ಬಳಿ ಯಾವುದೋ ಬ್ರಿಟಿಷ್ ಮ್ಯೂಸಿಯಂನ ಉಲ್ಲೇಖ ಮಾಡಿದಾಗ ಆತ, `ಅವರು ಬಿಡಿ. ಅವರು ಎಲ್ಲವನ್ನೂBeg, Borrow or Steal (ಬೇಡಿ ಪಡೆ, ಎರವಲು ಪಡೆ ಅಥವಾ ಕದ್ದು ತಾ) ಮಾಡಿಕೊಂಡು ತಂದಿರುತ್ತಾರೆ. ಅವರ ಬಳಿ ಅವರ ಸ್ವಂತದ್ದೇನಿದೆ?’ ಎಂದ!
***
ಟಿಪ್ಪೂನ ಯಂತ್ರ ಹುಲಿ ಕವಿ, ಕಲಾವಿದರನ್ನು ಆಕರ್ಷಿಸಿದೆ. ಲೀಡೆನ್‍ಹಾಲ್ ರಸ್ತೆಯ ಮ್ಯೂಸಿಯಂನಲ್ಲಿ ಅದನ್ನು ಕಂಡ ಜಾನ್ ಕೀಟ್ಸ್ 1819ರಲ್ಲಿ ತನ್ನ `ದ ಕ್ಯಾಪ್ ಅಂಡ್ ಬೆಲ್ಸ್ಪದ್ಯದಲ್ಲಿ ಆ ಯಂತ್ರ ಹುಲಿಯನ್ನು ಉಲ್ಲೇಖಿಸಿದ್ದಾನೆ. ಶಮನಕಾರಕನೊಬ್ಬ ದೊರೆ ಎಲ್ಫಿನಾನ್ ಅರಮನೆಗೆ ಹೋದಾಗ ವಿಚಿತ್ರ ಶಬ್ದ ಕೇಳಿ ಅದು ದೊರೆಯ ಗೊರಕೆಯಿರಬೇಕು ಎಂದುಕೊಳ್ಳುತ್ತಾನೆ. ಆದರೆ ಅಲ್ಲಿನ ಸೈನಿಕ ಹೇಳುತ್ತಾನೆ:
`ಆ ಗುಯ್ಗುಡುವ ಶಬ್ದ...
ರಾಜನ ಮೆಚ್ಚಿನ ಆಟಿಕೆ
ಆಟಿಕೆಗಳಲ್ಲೆಲ್ಲಾ ಸುಂದರವಾದ ಮಾನವ-ಹುಲಿ-ಸಂಗೀತವಾದ್ಯದಿಂದ

       ಫ್ರೆಂಚ್ ಕವಿ ಆಗಸ್ಟ್ ಬಾರ್ಬಿಯರ್ 1937ರ ತನ್ನ `ಲ ಜೌಜು ದು ಸುಲ್ತಾನ್’ (ಸುಲ್ತಾನನ ಆಟಿಕೆ) ಪದ್ಯದಲ್ಲಿ ಯಂತ್ರ ಹುಲಿಯ ಕಾರ್ಯವೈಖರಿಯನ್ನು ವರ್ಣಿಸಿದ್ದಾನೆ. 1967ರಲ್ಲಿ ಅಮೆರಿಕದ ಆಧುನಿಕ ಕವಿಯಿತ್ರಿ ಮರಿಯಾನ್ ಮೂರ್ ಸಹ ಯಂತ್ರ ಹುಲಿಯನ್ನು ವರ್ಣಿಸಿದ್ದಾಳೆ.

1800ರಲ್ಲಿ ಶ್ರೀರಂಗಪಟ್ಟಣದ ಅಂತ್ಯವನ್ನು ತನ್ನ ಪುಸ್ತಕದಲ್ಲಿ ವಿವರಿಸಿದ ಕರ್ನಲ್ ಮಾರ್ಕ್ ವುಡ್ ಮೊದಲಿಗೆ ಯಂತ್ರ ಹುಲಿಯ ಚಿತ್ರ ಪ್ರಕಟಿಸಿ `ಟಿಪ್ಪೂನ ಅಸೀಮ ದ್ವೇಷದ ಸಂಕೇತಎಂದು ಬರೆದಿದ್ದ.

       ಜಾನ್ ಬ್ಯಾಲೆ (1913-2009) ಎಂಬ ಕಲಾವಿದ ತನ್ನ `ಡೈ ಸೀಲೆ’ (ಆತ್ಮಗಳು) ಕಲಾಕೃತಿಯಲ್ಲಿ, ಭಾರತದ ಎಂಎಫ್.ಹುಸೇನ್ 1986ರಲ್ಲಿ ತನ್ನ `ಟಿಪ್ಪೂ ಸುಲ್ತಾನ್ಸ್ ಟೈಗರ್ಕಲಾಕೃತಿಯಲ್ಲಿ, ಲಂಡನ್ನಿನ ರಾಯಲ್ ಕಾಲೇಜ್ ಆಫ್ ಆರ್ಟ್‍ನ ವಿದ್ಯಾರ್ಥಿ ಧೃವ ಮಿಸ್ತ್ರಿ 1986ರ ತನ್ನ `ಟಿಪ್ಪುಎಂಬ ಪ್ಲಾಸ್ಟಿಕ್ ರಚನೆಯಲ್ಲಿ ಮತ್ತು ಕಲಾವಿದ ಬಿಲ್ ರೀಡ್ ತನ್ನ 2004`ರ್ಯಾಬಿಟ್ ಈಟಿಂಗ್ ಅಸ್ಟ್ರಾನಾಟ್ಶಿಲ್ಪಕಲೆಗಳಲ್ಲಿ ಟಿಪ್ಪೂನ ಯಂತ್ರಹುಲಿಯನ್ನು ತರಲು ಪ್ರಯತ್ನಿಸಿದ್ದಾರೆ.
j.balakrishna@gmail.com